For Quick Alerts
For Daily Alerts
ಉದ್ಯೋಗ ಖಾತರಿ ಯೋಜನೆ: 1788 ಕೋಟಿಗೆ ಪ್ರಧಾನಿ ಮೋದಿಗೆ ಮನವಿ
|
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ ಒಟ್ಟು 1788 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕಳೆದ ಜುಲೈನಿಂದ ಬಾಕಿ ಇರುವ 288 ಕೋಟಿ ರೂ.ಗಳ ಜತೆಗೆ ಸೆಪ್ಟಂಬರ್ ವರೆಗೆ ಹಣ ಪಾವತಿಸಲು ಹೆಚ್ಚುವರಿಯಾಗಿ 500 ಕೋಟಿ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಕಳೆದ ಸಾಲಿನಲ್ಲಿ ಆಗಿರುವ ಸಾಧನೆಗಳ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಉದ್ಯೋಗ ಸೃಷ್ಟಿಗೆ ಅಗತ್ಯವಿರುವ ಹಣ ಪಾವತಿಗೆ 1000 ಕೋಟಿ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.
English summary
Employment guarantee scheme : 1788 crore appeal to PM
Story first published: Friday, August 26, 2016, 12:51 [IST]