ಕೇಂದ್ರದಿಂದ ಡೆಬಿಟ್ ಕಾರ್ಡ್ ವಂಚಕರ ವಿರುದ್ದ ಕಠಿಣ ಕ್ರಮ
32 ಲಕ್ಷಕ್ಕೂ ಹೆಚ್ಚು ಎಟಿಎಂ/ಡೆಬಿಟ್ ಕಾರ್ಡುಗಳು ಸೈಬರ್ ದಾಳಿಗೆ ಒಳಗಾಗಿದ್ದು, ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಈ ವಂಚನೆ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.
32 ಲಕ್ಷಕ್ಕೂ ಹೆಚ್ಚು ಎಟಿಎಂ/ಡೆಬಿಟ್ ಕಾರ್ಡುಗಳು ಸೈಬರ್ ದಾಳಿಗೆ ಒಳಗಾಗಿದ್ದು, ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಈ ವಂಚನೆ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ.
ದೇಶದ ಭದ್ರತಾ ವ್ಯವಸ್ಥೆಗೆ ಕಂಟಕವಾಗಿರುವ ಹ್ಯಾಕರ್ಸ್ ಗಳ ಕೃತ್ಯದ ಬಗ್ಗೆ ವರದಿ ಸಲ್ಲಿಸುವಂತೆ ಆರ್ಬಿಐ ಸೇರಿದಂತೆ ಸಂಬಂಧಪಟ್ಟ ಬ್ಯಾಂಕುಗಳಿಗೆ ಸೂಚಿಸಲಾಗಿದ್ದು, ವಂಚಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಅಗತ್ಯ ಬಿದ್ದರೆ ಬ್ಯಾಂಕುಗಳ ತಾಂತ್ರಿಕ ವ್ಯವಸ್ಥೆ ಸದೃಢಗೊಳಿಸಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಹೀಗಾಗಿ ಗ್ರಾಹಕರು ಕಳವಳ ಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ವೀಸಾ ಮತ್ತು ಮಾಸ್ಟರ್ ಕಾರ್ಡ್ ಗಳ ಜಾಲ ನಾಶವಾಗಿಲ್ಲ ಎಂದು ದೃಢಪಡಿಸಲಾಗಿದೆ. 19 ಬ್ಯಾಂಕುಗಳ 641 ಗ್ರಾಹಕರು ಹ್ಯಾಕರ್ ಗಳ ವಂಚನೆಗೆ ಬಲಿಯಾಗಿದ್ದಾರೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯ ತಿಳಿಸಿದೆ.
ಡೆಬಿಟ್ ಕಾರ್ಡುಗಳ ಮಾಹಿತಿಯನ್ನು ಕದ್ದು ೧.೩ ಕೋಟಿ ರೂಪಾಯಿ ಹಣ ದೋಚಲಾಗಿದೆ. 26.5 ಲಕ್ಷ ವೀಸಾ ಮತ್ತು ಮಾಸ್ಟರ್ ಕಾರ್ಡುಗಳು ಹಾಗೂ ೬ ಲಕ್ಷ ರುಪೇ ಕಾರ್ಡ್ ಗಳನ್ನು ಬಳಕೆ ಮಾಡಿ ಗ್ರಾಹಕರ ಹಣವನ್ನು ಕದಿಯಲಾಗಿದೆ ಎಂದು ವರದಿಯಾಗಿದೆ.