For Quick Alerts
For Daily Alerts
ಜನಧನ ಖಾತೆ ಮೇಲೆ ಆರ್ಬಿಐ ಕಣ್ಣು
ಪ್ರಧಾನಮಂತ್ರಿ ಜನಧನ ಯೋಜನೆ ಅಡಿಯಲ್ಲಿ ತೆರೆಯಲಾದ ಬ್ಯಾಂಕು ಖಾತೆಗಳ ಮೇಲೆ ಕಣ್ಣಿಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಸೂಚನೆ ನೀಡಿದೆ.
|
ಪ್ರಧಾನಮಂತ್ರಿ ಜನಧನ ಯೋಜನೆ ಅಡಿಯಲ್ಲಿ ತೆರೆಯಲಾದ ಬ್ಯಾಂಕು ಖಾತೆಗಳ ಮೇಲೆ ಕಣ್ಣಿಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧ ಮಾಡಿರುವ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಕ್ರಮಕ್ಕೆ ಮುಂದಾಗಿದೆ.
ಜನಧನ ಖಾತೆಯಲ್ಲಿ ಹೆಚ್ಚು ಪ್ರಮಾಣದ ಠೇವಣಿ ಇರುವುದು ಕಂಡುಬಂದಲ್ಲಿ ಅಂತಹ ಹಣ ಎಲ್ಲಿಂದ ಬಂದಿದೆ ಎಂಬುದನ್ನು ಸರ್ಕಾರ ಗುರುತಿಸಲಿದೆ ಎಂದು ತಿಳಿಸಿದೆ. ಜನಧನ ಖಾತೆಯ ಠೇವಣಿ ಮಿತಿ 1 ಲಕ್ಷ ಆಗಿರುತ್ತದೆ. ಆದರೆ ಕೆವಾಯ್ಸಿ(KYC) ಹೊಂದಿರದ ಖಾತೆದಾರರು ಕೇವಲ ರೂ. 50,000 ಮಾತ್ರ ಖಾತೆಯಲ್ಲಿ ಹೊಂದಬಹುದಾಗಿದೆ. ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?
ಈಗಾಗಲೇ 25 ಕೋಟಿ ಜನಧನ ಖಾತೆಗಳನ್ನು ತೆರೆಯಲಾಗಿದ್ದು, ಕಪ್ಪುಹಣ ಇರುವ ವ್ಯಕ್ತಿಗಳು ಜನಧನ ಖಾತೆಯಲ್ಲಿ ಇಂತಹ ಹಣ ಇಡುವಂತೆ ಪ್ರೋತ್ಸಾಹಿಸಿ ಆಮಿಷ ಒಡ್ಡುವ ಸಾಧ್ಯತೆ ಇದೆ.
English summary