ಕರ್ನಾಟಕ ಬಜೆಟ್ ಮಂಡನೆಗೆ ಕ್ಷಣಗಣನೆ.. ಮುಖ್ಯಮಂತ್ರಿ ಸಿದ್ದರಾಮಯ್ಯ ಲೆಕ್ಕಾಚಾರಗಳೇನು?
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಂದು ತಮ್ಮ ಕೊನೆಯ ಹಾಗು 16ನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಪ್ರಸ್ತುತ ಬಜೆಟ್ ವಿಧಾನಸಭಾ ಚುನಾವಣಾ ಲೆಕ್ಕಾಚಾರವನ್ನು ಗಮನದಲ್ಲಿರಿಸಿ ಮಂಡನೆ ಮಾಡುವ ಸಾಧ್ಯತೆ ಇದೆಯೆನ್ನುವುದು ಎಲ್ಲರ ಲೆಕ್ಕಾಚಾರ!
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಂದು ತಮ್ಮ ಕೊನೆಯ ಹಾಗು 16ನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಪ್ರಸ್ತುತ ಕರ್ನಾಟಕ ಬಜೆಟ್ ವಿಧಾನಸಭಾ ಚುನಾವಣಾ ಲೆಕ್ಕಾಚಾರವನ್ನು ಗಮನದಲ್ಲಿರಿಸಿ ಮಂಡನೆ ಮಾಡುವ ಸಾಧ್ಯತೆ ಇದೆಯೆನ್ನುವುದು ಎಲ್ಲರ ಲೆಕ್ಕಾಚಾರ! ಇದು ಇನ್ನೂ ಕೆಲವೆ ಗಂಟೆಗಳಲ್ಲಿ ಗೊತ್ತಾಗಲಿದೆ.
ವಿಧಾನಸಭಾ ಚುನಾವಣಾ ಲೆಕ್ಕಾಚಾರ!
ಎಲ್ಲಾ ವರ್ಗದ ಜನರನ್ನು ಸಂತೃಪ್ತಗೊಳಿಸುವ ನಿಟ್ಟಿನಲ್ಲಿ ಜನಪರ ಯೋಜನೆಗಳನ್ನು ಒಳಗೊಂಡಿರುವ ಬಜೆಟ್ ಮಂಡನೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಈ ಬಜೆಟ್ ನಲ್ಲಿ ಎಲ್ಲಾ ವರ್ಗದವರ ನಿರೀಕ್ಷೆಗಳು ನೂರಾರಿವೆ. ಕಾಂಗ್ರೆಸ್ ಸರ್ಕಾರ ಬಹುಸಂಖ್ಯಾತರ ಓಲೈಕೆ ಸಾಧ್ಯತೆ ಇದೆ. ಹಿಂದುಳಿದವರು, ಪರಿಶಿಷ್ಟ ಜಾತಿ, ಪ. ಪಂಗಡ, ಅಲ್ಪಸಂಖ್ಯಾತರು, ದುರ್ಬಲ ವರ್ಗದವರು, ಭೂ ರಹಿತ ಕೃಷಿಕರು, ಮಹಿಳೆಯರು ಹಾಗೂ ರೈತರು ಹೀಗೆ ಎಲ್ಲಾ ವರ್ಗದ ಆಶಯಗಳಿಗೆ ಸ್ಪಂದಿಸುವುದು ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿರಲಿದೆ. ನುಡಿದಂತೆ ನಡೆದ ಸರ್ಕಾರದ ಪ್ರತಿಪಾದಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನರಿಗೆ ಮತ್ತಷ್ಟು ಭಾಗ್ಯಗಳನ್ನು ಕಲ್ಪಿಸುವುದುಅರಲ್ಲಿ ಯಾವುದೇ ಸಂಶಯವಿಲ್ಲ.
ಕಾಂಗ್ರೆಸ್ ಗೆದ್ದರೆ ಈ ಬಜೆಟ್ ಜಾರಿ ತರಬೇಕೆಂಬ ನಿಯಮಗಳೇನು ಇಲ್ಲ. ಸೋತರೆ ಪ್ರಶ್ನೆಯೇ ಇರಲ್ಲ. ಹೀಗಾಗಿ ಇದು ಅತ್ಯುತ್ತಮವಾದ ಬಜೆಟ್ ಆಗಿರಲಿದೆ ಎನ್ನಲಾಗಿದೆ.