ಇವುಗಳಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ? ಇಲ್ಲಿದೆ ಪಟ್ಟಿ..
ಯಾವುದಕ್ಕೆ ಆಧಾರ್ ಲಿಂಕ್ ಮಾಡಬೇಕು ಯಾವುದಕ್ಕೆ ಮಾಡಬಾರದು ಎನ್ನುವುದೇ ಒಂದು ದೊಡ್ಡ ಗೊಂದಲವಾಗಿದೆ. ಮೊಬೈಲ್ ಸಿಮ್ ಪಡೆಯಲು 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಅಗತ್ಯವಿದೆಯೇ ಎಂಬ ಬಗ್ಗೆ ಜನರಿಗೆ ಗೊಂದಲ ಉಂಟಾಯಿತು.
ಯಾವುದಕ್ಕೆ ಆಧಾರ್ ಲಿಂಕ್ ಮಾಡಬೇಕು ಯಾವುದಕ್ಕೆ ಮಾಡಬಾರದು ಎನ್ನುವುದೇ ಒಂದು ದೊಡ್ಡ ಗೊಂದಲವಾಗಿದೆ.
ಮೊಬೈಲ್ ಸಿಮ್ ಪಡೆಯಲು 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಅಗತ್ಯವಿದೆಯೇ ಎಂಬ ಬಗ್ಗೆ ಜನರಿಗೆ ಗೊಂದಲ ಉಂಟಾಯಿತು. ಇದಲ್ಲದೆ, ಅಂತರ್ಜಾಲದಲ್ಲಿ ಸಿಗುವ ವಿವಾದಾಸ್ಪದ ಅಥವಾ ಗೊಂದಲಕರ ಅಪೂರ್ಣ ಮಾಹಿತಿ ಸ್ಪಷ್ಟತೆ ನೀಡುವುದಿಲ್ಲ. ಆಧಾರ್ ಮಾಹಿತಿ ಸೋರಿಕೆ ಕೂಡ ಜನರಲ್ಲಿ ಆತಂಕ ಹುಟ್ಟಿಸಿದೆ. ಆಧಾರ್ ಕಾರ್ಡ್ ಅನೇಕ ಯೋಜನೆಗಳಿಗೆ ಕಡ್ದಾಯವಾಗಿ ಲಿಂಕ್ ಮಾಡಬೇಕಾದ ಅಗತ್ಯವಿಲ್ಲ. ಅವುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಫೋನ್
ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ಇಲಾಖೆಯು ಸೂಚನೆಗಳನ್ನು ಜಾರಿ ಮಾಡಿದ್ದು, ಯಾವುದೇ ವ್ಯಕ್ತಿಗೆ ಆಧಾರ್ ಸಂಖ್ಯೆ ಇಲ್ಲದೆ ಸಿಮ್ ಕಾರ್ಡ್ ನೀಡಲು ನಿರಾಕರಿಸಬಾರದೆಂದು ತಿಳಿಸಿದೆ. ಇದರ ಬದಲಾಗಿ ಕೆವೈಸಿ KYC (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ದಾಖಲೆಗಳನ್ನು ಸ್ವೀಕರಿಸಲು ಹೇಳಲಾಗಿದೆ. ಆಧಾರ್ ಬದಲಾಗಿ ಪಾಸ್ಪೋರ್ಟ್, ಮತದಾರ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್ ಮುಂತಾದ ಇತರ ದಾಖಲೆಗಳನ್ನು ಸ್ವೀಕರಿಸಲು ನಿರ್ದೇಶಿಸಲಾಗಿದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು (NEET)
ಲೈವ್ ಮಿಂಟ್ನಲ್ಲಿ ನಡೆದ ಮಾರ್ಚ್ 8 ರ ವರದಿಯ ಪ್ರಕಾರ, ಇದೀಗ ನಾಗರಿಕರು ಯಾವುದೇ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಾಗಿ ತಮ್ಮ ಆಧಾರ್ ವಿವರಗಳನ್ನು ಸಲ್ಲಿಸಬೇಕಾಗಿಲ್ಲ. ಮಧ್ಯಂತರ ಆದೇಶವನ್ನು ಸಿಇಐಐ ದಿಪಾಕ್ ಮಿಶಾರವರು ನೇತೃತ್ವದ ಆಥರ್ ನೇತೃತ್ವದ 2018 ರ ಪ್ರಕರಣದಲ್ಲಿ ಜಾರಿಗೊಳಿಸಿದರು. ಇದು ದೇಶದಾದ್ಯಂತದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದ್ರೆಯ್ನ್ನುಂತು ಮಾಡಿದ್ದು, ಆಧಾರ್ ಇಲ್ಲದೆ ಹೋದರೆ ಅಮೂಲ್ಯ ತಯಾರಿ ಸಮಯವನ್ನು ವ್ಯರ್ಥ ಮಾಡಬೇಕಾಗುತ್ತದೆ.
ವಿಮಾ ಯೋಜನೆ
ಎಲ್ಐಸಿ ಸೇರಿದಂತೆ ಜೀವ ವಿಮಾ ಯೋಜನೆಗಳಿಗಾಗಿ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿಲ್ಲ.
ಪಿಂಚಣಿ
ಕೇಂದ್ರ ಸರ್ಕಾರದ ನೌಕರರಿಗೆ ತಮ್ಮ ಪಿಂಚಣಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ನೌಕರರ ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಕಾರ್ಡ್ ಜೋಡಣೆಯಾಗದ್ದರಿಂದ ಪಿಂಚಣಿ ಪಡೆಯುವಾಗ ಕೆಲ ನಿವೃತ್ತ ನೌಕರರು ತೊಂದರೆ ಅನುಭವಿಸುತ್ತಾರೆ ಎಂದು ವರದಿಯಾಗಿತ್ತು. ಇದೀಗ ಸರ್ಕಾರಿ ಉದ್ಯೋಗಿಗಳು ಪಿಂಚಣಿ ಪಡೆಯುವ ಸಲುವಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಇಪಿಎಫ್ಒ
ಇಪಿಎಫ್ಒ ಮತ್ತು ಇಎಸ್ಐಸಿ ಅಡಿಯಲ್ಲಿನ ಯೋಜನೆಗಳ ನೇರ ಲಾಭದ ವರ್ಗಾವಣೆ ಅನುಷ್ಠಾನಕ್ಕಾಗಿ ಗುರುತಿಸಲಾದ ಪಟ್ಟಿಯ ಯೋಜನೆಗಳಿಂದ ಆಧಾರ್ ಲಿಂಕ್ ಮಾಡುವುದ್ನ್ನು ಹೊರಗಿಡಲಾಗಿದೆ ಎಂದು ಇಪಿಎಫ್ಒ ತಿಳಿಸಿದೆ. ಪಿಎಫ್ ಸೌಲಭ್ಯಕ್ಕಾಗಿ ಆಧಾರ್ ಲಿಂಕ್ ಮಾದಬೇಕಾಗಿಲ್ಲ. ಡೇಟಾ ಸೋರಿಕೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವು ಖಂಡಿತವಾಗಿ ಮೆಚ್ಚುಗೆ ಪಡೆಯುತ್ತದೆ.