For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ : ಕಾರ್ಮಿಕ ವಲಯಕ್ಕೆ ಸಿಕ್ಕ ಯೋಜನೆಗಳೇನು?

|

ಬೆಂಗಳೂರು, ಫೆಬ್ರವರಿ 01 : ಹಣಕಾಸು ಸಚಿವ ಪಿಯೂಷ್ ಘೋಯೆಲ್ ಅವರು 2019-20ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದಾರೆ. ಕಾರ್ಮಿಕ ವರ್ಗಕ್ಕೆ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಶುಕ್ರವಾರ ಪಿಯೂಷ್ ಘೋಯೆಲ್ ಅವರು 2019-20ನೇ ಸಾಲಿನ ಮಧ್ಯಂತರ ಬಜೆಟ್ ಮಾಡಿದರು. ಮಧ್ಯಮ ವರ್ಗ ಸೇರಿದಂತೆ ವಿವಿಧ ಸಮುದಾಯಗಳಿಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದರು.

ಲೋಕಸಭಾ ಚುನಾವಣೆಯ ದಿಕ್ಕು ಬದಲಿಸುವ ಬಜೆಟ್ ನ 5 ಘೋಷಣೆಗಳು ಲೋಕಸಭಾ ಚುನಾವಣೆಯ ದಿಕ್ಕು ಬದಲಿಸುವ ಬಜೆಟ್ ನ 5 ಘೋಷಣೆಗಳು

ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ವಲಯಕ್ಕೆ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಬಡ ಜನರಿಗೆ ಹಲವು ಅನುಕೂಲಗಳು ಆಗಲಿವೆ.

ಕೇಂದ್ರ ಬಜೆಟ್ : ಕಾರ್ಮಿಕ ವಲಯಕ್ಕೆ ಸಿಕ್ಕ ಯೋಜನೆಗಳೇನು?

ಯೋಜನೆಗಳು

* ಅಸಂಘಟಿತ ವಲಯದಲ್ಲಿನ ಕಾರ್ಮಿಕರಿಗಾಗಿ 'ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ' ಘೋಷಣೆ ಮಾಡಲಾಗಿದೆ. ಈ ಯೋಜನೆಯಡಿ ಕಾರ್ಮಿಕರಿಗೆ ಪ್ರತಿ ತಿಂಗಳು 3000 ರೂ. ಪಿಂಚಣಿ ದೊರೆಯಲಿದೆ. ದೇಶದಲ್ಲಿ ಸುಮಾರು 10 ಕೋಟಿ ಅಸಂಘಟಿತ ವಲಯದ ಕಾರ್ಮಿಕರು ಇದ್ದಾರೆ.

ನರೇಗಾ: ಗ್ರಾಮೀಣ ಭಾಗದ ಉದ್ಯೋಗಕ್ಕಾಗಿ 60 ಸಾವಿರ ಕೋಟಿ ಘೋಷಣೆನರೇಗಾ: ಗ್ರಾಮೀಣ ಭಾಗದ ಉದ್ಯೋಗಕ್ಕಾಗಿ 60 ಸಾವಿರ ಕೋಟಿ ಘೋಷಣೆ

* 18ನೇ ವಯಸ್ಸಿನಲ್ಲಿ ಕೆಲಸಕ್ಕೆ ಸೇರುವ ಕಾರ್ಮಿಕ ಪ್ರತಿ ತಿಂಗಳು 55 ರೂ. ಪಾವತಿ ಮಾಡಬೇಕು. 29ನೇ ವಯಸ್ಸಿಗೆ ಕೆಲಸಕ್ಕೆ ಸೇರುವ ಕಾರ್ಮಿಕರು 100 ರೂ. ಪ್ರತಿ ತಿಂಗಳು ಪಾವತಿಸಬೇಕು. ಆಗ ಕಾರ್ಮಿಕರಿಗೆ 60 ವರ್ಷವಾದ ಬಳಿಕ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ದೊರೆಯಲಿದೆ.

ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ

* ಬಜೆಟ್‌ನಲ್ಲಿ ಇಪಿಎಫ್ ವ್ಯಾಪ್ತಿಗೆ ಬರುವ ಕಾರ್ಮಿಕರಿಗೂ ಅನುಕೂಲ ಮಾಡಿಕೊಡಲು ಕಾರ್ಮಿಕರು ಅವಧಿಗೂ ಮೊದಲೇ ಮೃತಪಟ್ಟವರೆ ನೀಡುತ್ತಿದ್ದ ಹಣವನ್ನು 2.5 ಲಕ್ಷದಿಂದ 6 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಖಾಸಗಿ ಮತ್ತು ಸರ್ಕಾರಿ ನೌಕರರು ಸಹ ಈ ಯೋಜನೆಯಡಿ ಅನುಕೂಲ ಪಡೆಯಲಿದ್ದಾರೆ.

English summary

Union budget 2019 : What for Organized and unorganized sector workers

Finance minister Piyush Goyal presented interim budget 2019-20. What for Organized and unorganized sector workers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X