ಕಡಿಮೆ ಸಂಬಳ ಇರುವ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ
ನವದೆಹಲಿ, ಜುಲೈ, 9: ಕಡಿಮೆ ಸಂಬಳ ಪಡೆಯುವ ಸಣ್ಣ ಸಣ್ಣ ಕಂಪನಿಗಳಿಗೆ ಹಾಗೂ ಅಲ್ಲಿನ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.
ಕಡಿಮೆ ಸಂಬಳ ಪಡೆಯುವ ನೌಕರರು ಹಾಗೂ ಅವರಿಗೆ ಉದ್ಯೋಗ ನೀಡಿರುವ ಕಂಪನಿಗಳ ಭವಿಷ್ಯ ನಿಧಿ ಪಾಲನ್ನು ಇಲ್ಲಿಯವರೆಗೆ ಸತತ ಮೂರು ತಿಂಗಳು ಪಾವತಿಸಿರುವ ಕೇಂದ್ರ ಸರ್ಕಾರ, ಮುಂದುವರೆದು ಇನ್ನೂ ಮೂರು ತಿಂಗಳು ಭವಿಷ್ಯ ನಿಧಿ ಪಾಲನ್ನು ಪಾವತಿಸಲು ತೀರ್ಮಾನಿಸಿದೆ.
923 ಕೋಟಿ ಜಿಎಸ್ ಟಿ ರೀಫಂಡ್: ಏರ್ ಟೆಲ್ ವಿರುದ್ಧ ಸುಪ್ರೀಂ ಕೋರ್ಟ್ ಗೆ ಕೇಂದ್ರ
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಮುಂದಿನ ಸೆಪ್ಟೆಂಬರ್ ವರೆಗೆ ಖಾಸಗಿ ಕಂಪನಿಗಳ ಹಾಗೂ ಕಡಿಮೆ ವೇತನ ಪಡೆಯುವ ಕಾರ್ಮಿಕರ ಭವಿಷ್ಯ ನಿಧಿ ಪಾಲನ್ನು ಭರಿಸಲಾಗುತ್ತದೆ.
100 ಕಾರ್ಮಿಕರನ್ನು ಹೊಂದಿರುವ ಕಂಪನಿಗಳ ಆ ಪೈಕಿ ಶೇ 90 ರಷ್ಟು ಕಾರ್ಮಿಕರ ವೇತನ ಮಾಸಿಕ 15 ಸಾವಿರ ರುಪಾಯಿಗಿಂತ ಕಡಿಮೆ ಇರುವ ಕಂಪನಿಗಳಿಗೆ ಇದರಿಂದ ಅನುಕೂಲ ಆಗಲಿದೆ. ಕಳೆದ ಮೂರು ತಿಂಗಳು ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇವರಿಗೆ ಉದ್ಯೋಗಿ ಹಾಗೂ ಕಂಪನಿ ಪಾಲು ಸೇರಿ ಶೇ 24 ರಷ್ಟು ಪಿಎಫ್ನ್ನು ಭರಿಸಿತ್ತು.