ಸೀಮೆಎಣ್ಣೆ, ಅಟಲ್ ಪೆನ್ಷನ್ ಯೋಜನೆ ಸೌಲಭ್ಯಕ್ಕಾಗಿ ಆಧಾರ್ ಕಡ್ಡಾಯ
ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಜನಕಲ್ಯಾಣ ಯೋಜನೆಗಳಿಗೆ ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸಿದೆ. ಇದೀಗ ಅಟಲ್ ಪೆನ್ಷನ್ ಯೋಜನೆ ಹಾಗೂ ಸೀಮೆಎಣ್ಣೆ ಸಬ್ಸಿಡಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ.
ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಜನಕಲ್ಯಾಣ ಯೋಜನೆಗಳಿಗೆ ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸಿದೆ.
ಇದೀಗ ಅಟಲ್ ಪೆನ್ಷನ್ ಯೋಜನೆ ಹಾಗೂ ಸೀಮೆಎಣ್ಣೆ ಸಬ್ಸಿಡಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ.
ಅಟಲ್ ಪಿಂಚಣಿ ಯೋಜನೆ ಮತ್ತು ಸೀಮೆಎಣ್ಣೆ ಸಬ್ಸಿಡಿ ಪ್ರಯೋಜನ ಪಡೆಯುತ್ತಿರುವವರು ಆಧಾರ್ ನಂಬರ್ ಒದಗಿಸಬೇಕು. (ಸರ್ಕಾರದ ಯೋಜನೆಗಳು)
ನೋಂದಾವಣಿ ಕಡ್ಡಾಯ
ಕೇಂದ್ರದ ಹೊಸ ಆದೇಶದ ಪ್ರಕಾರ ಅಟಲ್ ಪಿಂಚಣಿ ಮತ್ತು ಸೀಮೆಎಣ್ಣೆ ಸಬ್ಸಿಡಿ ಸೌಲಭ್ಯಗಳನ್ನು ಪಡೆಯುವುದನ್ನು ಮುಂದುವರಿಸಲು ಗ್ರಾಹಕರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಉಲ್ಲೇಖಿಸಿದೆ.
ಕೊನೆ ದಿನ
ಸೀಮೆಎಣ್ಣೆ ಸಬ್ಸಿಡಿಗಾಗಿ ಆಧಾರ್ ನೀಡಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದರೆ, ಅಟಲ್ ಪಿಂಚಣಿ ಯೋಜನೆಗೆ ಜೂನ್ 15 ಕೊನೆ ದಿನವನ್ನು ನಿಗದಿಪಡಿಸಿದೆ.
ಆಧಾರ್ ನೀಡುವವರೆಗೆ ಏನು ಮಾಡಬೇಕು?
ಆಧಾರ್ ನಂಬರ್ ನೀಡುವವರೆಗೆ ಸೌಲಭ್ಯ ಪಡೆಯಲು ಏನು ಮಾಡಬೇಕು ಎನ್ನುವುದು ಹಲವರ ಪ್ರಶ್ನೆಯಾಗಿರಬಹುದು. ಅದಕ್ಕಾಗಿ ಕೊನೆದಿನದವರೆಗೆ ಈ ಕೆಳಗಿನ ಪ್ರಮಾಣಪತ್ರಗಳನ್ನು ಗುರುತಿನ ಚೀಟಿ ಎಂದು ಪರಿಗಣಿಸಲಾಗುತ್ತದೆ.
- ಮತದಾರರ ಗುರುತಿನ ಚೀಟಿ
-ಪಡಿತರ ಚೀಟಿ
- ಚಾಲನಾ ಪರವಾನಗಿ
- ಭಾವಚಿತ್ರ ಇರುವ ಕಿಸಾನ್ ಪಾಸ್ಬುಕ್, -ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಉದ್ಯೋಗ ಚೀಟಿ,
- ಗೆಜೆಟೆಡ್/ತಹಶೀಲ್ದಾರ್ ಅಧಿಕಾರಿ ನೀಡಿರುವ ಪ್ರಮಾಣಪತ್ರವನ್ನು ಗುರುತಿನ ಚೀಟಿ ಎಂದು ಪರಿಗಣಿಸಲಾಗುತ್ತದೆ.
ಆಧಾರ್ ಜೋಡಣೆ ಏಕೆ?
ಸೀಮೆಎಣ್ಣೆ ಅಥವಾ ಅಟಲ್ ಪಿಂಚಣಿ ಸಹಾಯಧನ, ನಗದು ವರ್ಗಾವಣೆ ಪ್ರಯೋಜನ ಅಥವಾ ಇನ್ನಿತರ ಸೌಲಭ್ಯಗಳನ್ನು ವಿತರಿಸಲು ಪಡಿತರ ಚೀಟಿ ಹಾಗೂ ಬ್ಯಾಂಕ್ ಖಾತೆ ಜತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ನಿರ್ಧರಿಸಲಾಗಿದೆ.