ಬೆಂಗಳೂರು, ನ.16: ಸೇವಾ ಆಧಾರಿತ ಕ್ಷೇತ್ರಗಳ ಮೇಲೆ ವಿಧಿಸಲಾಗುವ ಸೇವಾ ತೆರಿಗೆ ಜೊತೆಗೆ ವಿತ್ತ ಕಾಯ್ದೆ 2015ರ ನಾಲ್ಕನೇ ಅಧ್ಯಾಯದ ಪ್ರಕಾರ ಸ್ವಚ್ಛ ಭಾರತ್ ಸೆಸ್ (ಎಸ್ ಬಿಸಿ) ಹಾಕಲಾಗುತ್ತಿದೆ. 2015-16ನೇ ಸಾಲಿನ ಬಜೆಟ್ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಘೋಷಿಸಿದಂತೆ ಅಗತ್ಯವಾದಲ್ಲಿ ‘ಎಲ್ಲಾ ಅಥವಾ ನಿರ್ದಿಷ್ಟ ಸೇವೆಗಳಿಗೆ' ಮೇಲ್ತೆರಿಗೆ (ಸೆಸ್) ವಿಧಿಸಲಾಗುತ್ತದೆ.
ಹೀಗಾಗಿ ತೆರಿಗೆ ಕಟ್ಟಬೇಕಾದ ಸೇವೆಗಳ ಮೇಲೆ ಸ್ವಚ್ಛ ಭಾರತ ಯೋಜನೆಯ ಅಂಗವಾಗಿ ಶೇ.0.5 ಮೇಲ್ತೆರಿಗೆ (ಸೆಸ್) ಯನ್ನು ಕೇಂದ್ರ ಸರಕಾರ ವಿಧಿಸಿದೆ. ನವೆಂಬರ್ 15ರಿಂದ ಈ ಸೆಸ್ ಜಾರಿಗೆ ಬಂದಿದೆ.
ನವೆಂಬರ್ 15ಕ್ಕಿಂತ ಮೊದಲು ಹಣ ಪಡೆದಿರುವ ಹಾಗೂ ನ.29ಕ್ಕಿಂತ ಮೊದಲು ಸರಕುಪಟ್ಟಿ (ಇನ್ವಾಯ್ಸ್) ಸಿದ್ಧಪಡಿಸಲಾದ ಸೇವೆಗಳಿಗೆ ಸ್ವಚ್ಛಭಾರತ ತೆರಿಗೆ ಅನ್ವಯವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಆದಾಯದಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಸೇವಾ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಜೇಟ್ಲಿ ಅವರು ಸೇವಾ ತೆರಿಗೆಯನ್ನು ಶೇ 12ರಿಂದ ಶೇ 14ರಷ್ಟು ಹೆಚ್ಚಳ ಮಾಡಿದರು. ಇದರಿಂದ ಹೋಟೆಲ್ ಊಟ ಸೇರಿದಂತೆ ಅನೇಕ ಪದಾರ್ಥಗಳ ಬೆಲೆ ಏರಿಕೆಯಾಗಿತ್ತು.
ಸ್ವಚ್ಛ ಭಾರತ್ ಸೆಸ್ (ಎಸ್ ಬಿಸಿ) ಲೆಕ್ಕಾಚಾರ ಹೇಗೆ?
ಸೇವಾ ತೆರಿಗೆ ಲೆಕ್ಕಾಚಾರದಂತೆ ಸ್ವಚ್ಛ ಭಾರತ್ ಸೆಸ್ (ಎಸ್ ಬಿಸಿ) ಕೂಡಾ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ, ಎಲ್ಲ ತೆರಿಗೆ ಯೋಗ್ಯ ಸೇವೆಗಳ ಸೇವಾತೆರಿಗೆ ದರವು ಶೇ.14ರಿಂದ ಶೇ.14.5ಕ್ಕೆ ಏರಿಕೆಯಾಗಲಿದೆ.ಎಸ್ ಬಿಸಿ ಎಂಬುದು ಸೇವಾ ತೆರಿಗೆ ಮೇಲಿನ ಸೆಸ್ ಅಲ್ಲ ಬದಲಿಗೆ ಪ್ರತ್ಯೇಕ ಸೆಸ್ ಆಗಿದೆ.
ಸೇವಾತೆರಿಗೆ ದರ ಎಷ್ಟು?
ಹೊಟೇಲ್-ರೆಸ್ಟೋರಂಟ್ ನಲ್ಲಿನ ತಿಂಡಿ ದರ, ಪಾನೀಯ ದರ, ಏರ್ ಕಂಡಿಷನಿಂಗ್ ಮೇಲಿನ ತೆರಿಗೆ ಎಲ್ಲದರ ಜೊತೆಗೆ ಶೇ 0.5 ಹೆಚ್ಚುವರಿ ಸೆಸ್ ಕಟ್ಟಬೇಕಾಗುತ್ತದೆ. ಶೇ. 0.5 ಸ್ವಚ್ಛಭಾರತ ಸೆಸ್ ಹೇರಿಕೆಯಿಂದಾಗಿ ರೆಸ್ಟೋರೆಂಟ್-ಹೋಟೆಲ್ ಬಿಲ್ ಗಳ ಸೇವಾತೆರಿಗೆ ದರವು ಶೇ. 5.6ರಿಂದ ಶೇ.5.8ಕ್ಕೇರಲಿದೆ.
ಎಲ್ಲೆಲ್ಲಿ ಜಾರಿಯಾಗಲಿದೆ?
ಹೋಟೆಲ್-ರೆಸ್ಟೋರಂಟ್, ದೂರಸಂಪರ್ಕ (ಮೊಬೈಲ್ ಹಾಗೂ ಟೆಲಿಫೋನ್) ಹಾಗೂ ಪ್ರಯಾಣ ದರಗಳು ಹೀಗೆ ಸೇವಾ ಆಧಾರಿತ ಕ್ಷೇತ್ರದಿಂದ ಪಡೆಯುವ ಪ್ರಯೋಜನದ ಮೇಲೆ ಸೆಸ್ ಜಾರಿಯಾಗಲಿದೆ. ತೆರಿಗೆ ವಿನಾಯತಿ ಪಡೆದ ಅಥವಾ ಸೇವಾ ತೆರಿಗೆ ಒಳಪಡದ ಕ್ಷೇತ್ರಗಳಲ್ಲಿ ಮಾತ್ರ ಈ ಹೆಚ್ಚುವರಿ ಸೆಸ್ ನಿಂದ ವಿನಾಯತಿ ಸಿಗಲಿದೆ.
ಸರ್ಕಾರದ ನಿರೀಕ್ಷೆ ಏನು?
ಸ್ವಚ್ಛ ಭಾರತ ಮೇಲ್ತೆರಿಗೆಯಿಂದಾಗಿ ಸಂಗ್ರಹವಾಗುವ ಆದಾಯವು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನಕ್ಕೆ ಆರ್ಥಿಕ ನಿಧಿಯಾಗಿ ಬಳಸಿಕೊಳ್ಳಲಾಗುವುದು.2016ರ ಮಾ.31ರ ವರೆಗಿನ ಪ್ರಸಕ್ತ ವಿತ್ತ ವರ್ಷದ ಉಳಿದ ಭಾಗದಲ್ಲಿ ಈ ತೆರಿಗೆಯು ಬೊಕ್ಕಸಕ್ಕೆ ಸುಮಾರು 3800 ಕೋಟಿ ರೂ.ಗಳನ್ನು ತಂದುಕೊಡುವ ನಿರೀಕ್ಷೆಯಿದೆ. (ಗುಡ್ ರಿಟರ್ನ್ಸ್.ಇನ್)
More From GoodReturns

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Eid ul Fitr 2026: ಭಾರತದಲ್ಲಿ ಯಾವಾಗ ಚಂದ್ರನ ದರ್ಶನ? ರಂಜಾನ್ ಹಬ್ಬ ಯಾವಾಗ?

Silver Rates Today: ಭಾರತೀಯ ಬೆಳ್ಳಿ ಖರೀದಿದಾರರಿಗೆ ಸಿಹಿಸುದ್ದಿ; 5000 ರೂ.ನಷ್ಟು ಇಳಿಕೆ

PAN Card Rules: ಪ್ಯಾನ್ ಕಾರ್ಡ್ ಇಲ್ಲದವರೇ ಇಲ್ಲಿ ಗಮನಿಸಿ; ನಿಯಮ ಸಂಪೂರ್ಣ ಚೇಂಜ್

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications