ಆದಾಯ ತೆರಿಗೆ ಇಲಾಖೆ ಲೆಕ್ಕಪತ್ರ ವಿವರ ಅರ್ಜಿಯನ್ನು(ಐಟಿಆರ್) ಈ ಬಾರಿ ಮತ್ತಷ್ಟು ಸರಳಗೊಳಿಸಿದೆ.
ಆದಾಯ ತೆರಿಗೆ ಇಲಾಖೆ ಲೆಕ್ಕಪತ್ರ ವಿವರ ಅರ್ಜಿಯನ್ನು(ಐಟಿಆರ್) ಈ ಬಾರಿ ಮತ್ತಷ್ಟು ಸರಳಗೊಳಿಸಿದೆ.
ತೆರಿಗೆದಾರರು ಸಲ್ಲಿಸುವ ಐಟಿಆರ್ ಅರ್ಜಿಗಳು ಇನ್ನಷ್ಟು ಸರಳಗೊಂಡಿದ್ದು, ಏಪ್ರಿಲ್ 1ರಿಂದ ಹೊಸ ನಮೂನೆಯ ಅರ್ಜಿಗಳು ಲಭ್ಯ ಇರುತ್ತವೆ. ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ.
ಆಧಾರ್ ಕಡ್ಡಾಯ
ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ತೆರಿಗೆದಾರರು ಆಧಾರ್ ನಂಬರ್ ಸಲ್ಲಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ ಪ್ಯಾನ್ ಮತ್ತು ತೆರಿಗೆ ಪಾವತಿ ಮಾಹಿತಿ ಒದಗಿಸಬೇಕು. ಮೂಲದಲ್ಲಿಯೇ ತೆರಿಗೆ ಕಡಿತ ವಿವರ(ಟಿಡಿಎಸ್) ಸ್ವಯಂ ದಾಖಲಾಗಲಿದೆ.
ITR ನಲ್ಲಿ ಕೇವಲ 18 ಕಾಲಂ
ಐಟಿಆರ್-1 ಅರ್ಜಿಯಲ್ಲಿ ಈ ಹಿಂದೆ ಇದ್ದ ಅನೇಕ ಅನಗತ್ಯ ಕಾಲಂಗಳನ್ನು 2017-18ನೇ ಸಾಲಿನ ಆರ್ಥಿಕ ವರ್ಷದ ಹೊಸ ಅರ್ಜಿಯಲ್ಲಿ ಕೈಬಿಡಲಾಗಿದ್ದು, ಕೇವಲ 18 ಕಾಲಂ ಮಾತ್ರ ಉಳಿಸಿಕೊಳ್ಳಲಾಗಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ. ಐಟಿಆರ್ ವಿವರ ಸಲ್ಲಿಕೆ ಅರ್ಜಿಯಲ್ಲಿ ಕೆಲವು ಕಾಲಂಗಳನ್ನು ಮಾತ್ರ ಭರ್ತಿ ಮಾಡಬೇಕಾಗುತ್ತದೆ.
80ಸಿ, 80 ಡಿ ಕಾಲಂ
ತೆರಿಗೆ ಕಾಯಿದೆ ಸೆಕ್ಷನ್ 80C, 80D ಅಡಿಯಲ್ಲಿ ಜೀವವಿಮೆ, ಭವಿಷ್ಯನಿಧಿ, ಗೃಹಸಾಲ, ವೈದ್ಯಕೀಯ ವಿಮೆಗಳ ಮೇಲೆ ತೆರಿಗೆ ಕಡಿತ ಇಲ್ಲವೇ ತೆರಿಗೆ ವಿನಾಯಿತಿ ಪಡೆಯಲು ಈ ಮೊದಲಿದ್ದ 80C ಮತ್ತು 80 ಕಾಲಂ ಉಳಿಸಿಕೊಳ್ಳಲಾಗಿದೆ.
ಐಟಿಆರ್-4 ಮತ್ತು ಸುಗಮ
ಬಿಸಿನೆಸ್ ಆದಾಯ ಹೊಂದಿರದ ಹಿಂದು ಅವಿಭಜಿತ ಕುಟುಂಬ ಮತ್ತು ವ್ಯಕ್ತಿಗಳು ಐಟಿಆರ್1 ಸಹಜ, ಐಟಿಆರ್ 2 ಮತ್ತು 2ಎ ಮತ್ತು ಬಿಸಿನೆಸ್ ಆದಾಯ ಹೊಂದಿರುವವರು ಐಟಿಆರ್-4 ಸುಗಮ ಅರ್ಜಿ ಭರ್ತಿ ಮಾಡಬೇಕಾಗುತ್ತದೆ.
VIA ಕಾಲಂ
ಸಂಬಳ ಪಡೆಯುತ್ತಿರುವ ನೌಕರರು ತೆರಿಗೆ ಕಡಿತದ ಹೆಚ್ಚುವರಿ ಹಣ ಮರಳಿ ಪಡೆಯಲು ಭರ್ತಿ ಮಾಡುತ್ತಿದ್ದ VIA ಕಾಲಂ ಅನ್ನು ಹೊಸ ಐಟಿಆರ್ ಅರ್ಜಿಯಲ್ಲಿ ತೆಗೆದು ಹಾಕಲಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications