ಇದೇ ಮೇ 7ನೇ ತಾರೀಕು, ಮಂಗಳವಾರ ಅಕ್ಷಯ ತೃತೀಯ. ಅಕ್ಷಯ ತೃತೀಯ ದಿನದಂದು ಚಿನ್ನ , ಬೆಳ್ಳಿ ಸ್ಥಿರಾಸ್ತಿ ಖರೀದಿಸುವುದು ಹಿಂದಿನಿಂದ ಬಂದ ವಾಡಿಕೆ. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ, ವಿಶೇಷವಾಗಿ ಚಿನ್ನ ಬೆಳ್ಳಿಗಳು ಹೆಚ್ಚು ಅಸ್ಥಿರತೆಯಿಂದ ಕೂಡಿದ್ದು, ಹೂಡಿಕೆಯ ಚಟುವಟಿಕೆಯಾಗಿರದೆ ಅದು ಸಹ ಒಂದು ರೀತಿಯ ವ್ಯಾವಹಾರಿಕ ಸರಕಾಗಿದೆ.
ಬೆಳ್ಳಿಯ ದರವು ಒಂದು ಕಿಲೋಗೆ 2008ರ ಡಿಸೆಂಬರ್ ನಲ್ಲಿ ರೂ.18,500ರಲ್ಲಿತ್ತು. ನಂತರ ಏರಿಕೆಯ ಪಥದಲ್ಲಿ ಚಲಿಸಿ ಏಪ್ರಿಲ್ 2011ರಲ್ಲಿ ರೂ.75,000ದ ಗಡಿ ದಾಟಿದೆ. ಸೋಜಿಗವೆಂದರೆ, ಆ ಸಂದರ್ಭದಲ್ಲಿ ಈ ಬೆಲೆಯಲ್ಲೂ ಸರಕು ಸಿಗುತ್ತಿಲ್ಲವೆಂದು ಪತ್ರಿಕೆಯಲ್ಲಿ ಬಂದ ಕಾರಣ ಬೇಡಿಕೆ ಹೆಚ್ಚಾಗಿದ್ದು ಕಾರಣವಾಗಿತ್ತು.
ಅಲ್ಲದೆ ಬೆಳ್ಳಿಯ ದರವು ಒಂದು ಲಕ್ಷಕ್ಕೆ ತಲುಪುವುದೆಂಬ ವಿಶ್ಲೇಷಣಾ ಸುದ್ದಿಯು ಸಹ ಹೆಚ್ಚು ಕೃತಕವಾದ ಬೇಡಿಕೆಯನ್ನುಂಟು ಮಾಡಿತು. ಇದೆಲ್ಲಾ ನಡೆದಿದ್ದು ಅಕ್ಷಯ ತೃತೀಯ ದಿನಕ್ಕಿಂತ ಕೆಲವು ದಿನ ಮೊದಲು. ಅಕ್ಷಯ ತೃತೀಯ ದಿನದಂದು ಬೆಳ್ಳಿಯ ಬೆಲೆ ಕುಸಿತಕ್ಕೊಳಗಾಗಿತ್ತು. 6ನೇ ಮೇ 2011ರಂದು, ಅಕ್ಷಯ ತೃತೀಯ ದಿನವಾಗಿದ್ದು ಅಂದು ಬೆಳ್ಳಿಯ ಬೆಲೆ ರೂ.53 ಸಾವಿರಕ್ಕೆ ಇಳಿದಿತ್ತು.
ಆಕರ್ಷಕ ಲಾಭಾಂಶ ನೀಡುವ ಲಾಭಾಂಶ
ಆ ನಂತರದ ವರ್ಷಗಳಲ್ಲಿ ಸುಮಾರು ರೂ.30 ಸಾವಿರಕ್ಕೆ ಕುಸಿದು, ಸದ್ಯ ರೂ.40 ಸಾವಿರದ ಸಮೀಪವಿದೆ. ಆದರೆ 2011ರ ಏಪ್ರಿಲ್ ನಲ್ಲಿ ಅಲ್ಪಕಾಲೀನದಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂದು ಬೆಳ್ಳಿ ಗರಿಷ್ಠದಲ್ಲಿ ಖರೀದಿಸಿದವರಿಗೆ ಹೂಡಿಕೆಯ ಮೌಲ್ಯವು ಕರಗಿದ್ದನ್ನು ಮೂಕಪ್ರೇಕ್ಷಕರಾಗಿ ನೋಡುವಂತಾಯಿತು. ಹೀಗೆ ವ್ಯಾವಹಾರಿಕ ದೃಷ್ಟಿಯಿಂದ ನೋಡುವ ಈಗಿನ ದಿನಗಳಲ್ಲಿ ಅಕ್ಷಯ ತೃತೀಯ ದಿನದಂದು ಕೈಲಿರುವ ಸಂಪತ್ತು / ಸ್ವತ್ತು ಅಕ್ಷಯವಾಗಲಿ ಎಂಬ ಉದ್ದೇಶದಿಂದ ಖರೀದಿ ಮಾಡುವುದಾಗಿರುವುದರಿಂದ ಗ್ರಾಹಕರು ತಮ್ಮ ಚಿಂತನೆಯನ್ನು ಬದಲಿಸಿ, ನೇರವಾಗಿ ಆಕರ್ಷಕವಾದ ಲಾಭಾಂಶ ವಿತರಿಸುವ/ಘೋಷಿಸಿರುವ ಉತ್ತಮವಾದ ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದಲ್ಲಿ ಉದ್ದೇಶ ನೆರವೇರುತ್ತದೆ.
ಲಾಭಾಂಶ ಲಭ್ಯವಾಗುವ ಕಂಪೆನಿಗಳಿವು
ಅಲ್ಲದೆ ಸ್ವತ್ತು ಲಾಭಾಂಶ ನೀಡುವುದರೊಂದಿಗೆ ಬೆಲೆ ಏರಿಕೆಯನ್ನು ಕಾಣುವ ಅವಕಾಶಗಳನ್ನು ಒದಗಿಸುತ್ತವೆ. ಓದುಗರು ಗಮನಿಸಬೇಕಾದ ಅಂಶವೆಂದರೆ, ಇಲ್ಲಿ ಯಾವುದೇ ಗ್ಯಾರಂಟಿ ಇರದಿದ್ದರೂ ಕಂಪೆನಿಗಳ ಇತಿಹಾಸ, ಸಾಮರ್ಥ್ಯ, ಘನತೆ, ಗೌರವಗಳನ್ನು ಗಮನದಲ್ಲಿರಿಸಿ ಮೌಲ್ಯಗಳು ಕುಸಿತದಲ್ಲಿದ್ದಾಗ ಖರೀದಿಸಬೇಕು. ಆಕರ್ಷಕ ಲಾಭಾಂಶ ಘೋಷಿಸಿದ್ದು, ಅಕ್ಷಯ ತೃತೀಯ ದಿನದಂದು ಖರೀದಿಸಿದರೂ ಲಾಭಾಂಶ ಲಭ್ಯವಾಗುವಂತಹ ಕಂಪೆನಿಗಳೆಂದರೆ:
1. ಇನ್ಫೋಸಿಸ್ : ಪ್ರತಿ ಷೇರಿಗೆ ರೂ.10.50
2. ಸಯಂಟ್ : ಪ್ರತಿ ಷೇರಿಗೆ ರೂ.9
3. ಟಿಸಿಎಸ್ : ಪ್ರತಿ ಷೇರಿಗೆ ರೂ.18
4. ಮರ್ಕ್ : ಪ್ರತಿ ಷೇರಿಗೆ ರೂ.440
5. ಜಿ ಎಚ್ ಸಿ ಎಲ್: ಪ್ರತಿ ಷೇರಿಗೆ ರೂ.5
6. ವಿಶಾಖ ಇಂಡಸ್ಟ್ರೀಸ್: ಪ್ರತಿ ಷೇರಿಗೆ ರೂ.7
7. ಟಾಟಾ ಕಾಫಿ : ಪ್ರತಿ ಷೇರಿಗೆ ರೂ.1.50
8. ಕ್ಯಾಸ್ಟ್ರಾಲ್ : ಪ್ರತಿ ಷೇರಿಗೆ ರೂ.2.75
ಈ ಷೇರುಗಳು ವ್ಯಾಲ್ಯೂ ಪಿಕ್ ಆಗಲಿವೆ
ಕಂಪೆನಿಗಳು ವಿತರಿಸುವ ಈ ಲಾಭಾಂಶಗಳು ಹೂಡಿಕೆದಾರರಿಗೆ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತವೆ. ಪ್ರತಿ ಷೇರಿಗೆ ಒಂದು ಷೇರಿನಂತೆ ಬೋನಸ್ ಷೇರು ಪ್ರಕಟಿಸಿರುವ ಬಯೋಕಾನ್ ಷೇರಿನ ಬೆಲೆ ಕುಸಿತ ಕಂಡಿರುವುದರಿಂದ ಅದು ಉತ್ತಮ ವ್ಯಾಲ್ಯೂ ಪಿಕ್ ಆಗಿದೆ. ಇನ್ನು ಲಾಭಂಶವಿಲ್ಲದ, ಹೆಚ್ಚು ಕುಸಿತದಿಂದ ವ್ಯಾಲ್ಯೂ ಪಿಕ್ ಹಂತದಲ್ಲಿರುವ ಕಂಪನಿಗಳು ಸಹ ಉತ್ತಮ ಲಾಭ ತಂದುಕೊಂಡಬಹುದು. ಬ್ರಿಟಾನಿಯ, ಡಾಬರ್, ಯೆಸ್ ಬ್ಯಾಂಕ್, ಮದರ್ಸನ್ ಸುಮಿ, ಚೆನ್ನೈ ಪೆಟ್ರೋ, ಬಿಎಚ್ ಇಎಲ್, ಆರ್ ಇಸಿ, ಬಿಇಎಲ್, ಅಶೋಕ್ ಲೇಲ್ಯಾಂಡ್, ತಿರುಮಲೈ ಕೆಮಿಕಲ್ಸ್, ಐಒಸಿ ಮುಂತಾದ ಅಗ್ರಮಾನ್ಯ ಕಂಪೆನಿಗಳು ಉತ್ತಮ ಭವಿಷ್ಯ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ವಿಭಿನ್ನ ಕಾರಣದಿಂದಾಗಿ ಹೆಚ್ಚಿನ ಕುಸಿತ ಕಂಡಿವೆ. ಇವು ವ್ಯಾಲ್ಯೂ ಪಿಕ್ ಅವಕಾಶ ಒದಗಿಸಿವೆ.
ಸುಲಭ ನಗದೀಕರಣ ಮಾಡಿಕೊಳ್ಳಬಹುದಾದ ಸ್ವತ್ತು ಷೇರುಗಳು
ನೆನಪಿನಲ್ಲಿಡಬೇಕಾದ ಅಂಶವೆಂದರೆ: ಪೇಟೆಯು ಕೇವಲ ಅಂತರ್ಗತವಾಗಿ ಅಡಕವಾಗಿರುವ ಸಾಧನೆಗಳನ್ನು ಮಾತ್ರ ಪರಿಗಣಿಸಿ, ಏರಿಳಿತಗಳನ್ನು ಪ್ರದರ್ಶಿಸುವುದಿಲ್ಲ. ಹೆಚ್ಚಿನ ಏರಿಳಿತಗಳು ಬಾಹ್ಯ ಕಾರಣಗಳಿಂದ ಪ್ರೇರಿತವಾಗುವುದು ಎಂಬುದನ್ನು ಮನದಲ್ಲಿಟ್ಟುಕೊಂಡು, ಒಂದು ವೇಳೆ ಪೇಟೆಯಲ್ಲಿ ನಾವು ಕೊಂಡಂತಹ ಷೇರು ಹಾನಿಗೊಳಗಾದರೆ ನಮ್ಮ ಬಂಡವಾಳ ಅಪಾಯಕ್ಕೊಳಗಾಗುತ್ತದೆ ಎಂಬುದನ್ನು ಅರಿತು ಷೇರುಗಳಲ್ಲಿ ಹೂಡಿಕೆ ನಿರ್ಧರಿಸಬೇಕು. ಹೂಡಿಕೆಯು ಅಲ್ಪಕಾಲೀನ ಅಲ್ಲದೆ ದೀರ್ಘಕಾಲೀನವಾಗಿಯೂ ಮುಂದುವರೆಸಬಹುದು. ಬೇಕೆನಿಸಿದಾಗ ಪೇಟೆಯ ದರದಲ್ಲಿ ನಿರ್ಗಮಿಸಿ ನಗದೀಕರಣ ಮಾಡಿಕೊಳ್ಳುವ ಸುಲಭವಾದ ಸ್ವತ್ತು- ಷೇರುಗಳು.
More From GoodReturns

Stock Market Crash: ಮತ್ತೆ ಷೇರು ಮಾರುಕಟ್ಟೆಯಲ್ಲಿ ತಲ್ಲಣ; ಸೆನ್ಸೆಕ್ಸ್ 1000 ಪಾಯಿಂಟ್ಸ್ ಕುಸಿತ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Adani Total Gas SHareಷೇರು ಮಾರುಕಟ್ಟೆ ಕುಸಿದರೂ, ನಷ್ಟ ಕಾಣದ ಷೇರು ಇದು; ಯಾವುದು ಗೊತ್ತಾ?

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ



Click it and Unblock the Notifications