ನವದೆಹಲಿ, ಜೂನ್ 9: ಭಾರತದಲ್ಲಿ ಡಿಜಿಟಲ್ ಪಾವತಿ ವಹಿವಾಟು ವ್ಯಾಪಕವಾಗಿ ಏರಿಕೆ ಕಂಡಿದೆ. ಕೋವಿಡ್ ಸಾಂಕ್ರಮಿಕದ ಬಳಿಕ ಡಿಜಿಟಲ್ ಪಾವತಿಯಲ್ಲಿ ವೇಗ ಪಡೆದಿದ್ದು ಭಾರತದ ಹಣಕಾಸು ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಕೆ ಪ್ರಗತಿದಾಯಕವಾಗಿರುವುದನ್ನು ತೋರಿಸುತ್ತದೆ.
ಒಂದೆಡೆ ಡಿಜಿಟಲ್ ಪಾವತಿಗಳ ಏರಿಕೆಯಾಗಿದ್ರೆ ಇನ್ನೊಂದೆಡೆ ವಂಚನೆಯೂ ಹೆಚ್ಚಾಗಿದೆ. ಯುಪಿಐ, ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಹೀಗೆ ಕಷ್ಟಪಟ್ಟು ಗಳಿಸಿದ ಹಣವನ್ನು ಕದಿಯಲು ವಂಚಕರು ನಿರಂತರವಾಗಿ ನವನವೀನ ವಿಧಾನಗಳನ್ನು ಕಂಡುಹುಡುಕಿ ತಮ್ಮ ವಂಚನೆಯ ಬಲೆಗೆ ಮೋಸದಿಂದ ಕೆಡವುತ್ತಾರೆ.

ಆರ್ಥಿಕ ವರ್ಷ ೨೦೨೩- ೨೪ ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ, ೨೦೨೨-೨೩ರ ೯೦೪೬ ವಂಚನೆ ಪ್ರಕರಣ ವರದಿಯಾಗಿದ್ದು, ಇದು ಹಣಕಾಸು ವರ್ಷ ೨೦೨೩-೨೪ರಲ್ಲಿ ೩೬,೦೭೫ಕ್ಕೆ ಏರಿಕೆ ಕಂಡಿದೆ.
ಯುಪಿಐ ಓವರ್ ಪೇಮೆಂಟ್ ಮೋಸ:
ಈಗ ಅತಿ ಹೆಚ್ಚು ಪ್ರಚಲಿತದಲ್ಲಿರುವ ವಂಚನೆ ಅಂದರೆ "ಯುಪಿಐ ಓವರ್ ಪೇಮೆಂಟ್ ವಂಚನೆ". ನೀವು ನಿಮ್ಮ ದಿನ ನಿತ್ಯದ ಕೆಲಸ ಅಥವಾ ಆಫೀಸ್ ಕೆಲಸದ ಒತ್ತಡದಲ್ಲಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನೀವು ಅಪರಿಚಿತ ಸಂಖ್ಯೆಯಿಂದ ಕರೆಯನ್ನು ಸ್ವೀಕರಿಸುತ್ತೀರಿ. ಅತ್ತ ಕಡೆಯಿಂದ ಕರೆ ಮಾಡಿದವರು ಸರ್ ಯಾರಿಗೋ ಮಾಡಬೇಕಾಗಿದ್ದ 20,000 ರೂ. ಪೇಪೆಂಟ್ ತಪ್ಪಿ ಆಕಸ್ಮಿಕವಾಗಿ ನಿಮಗೆ ಕಳುಹಿಸಿದ್ದೇನೆ ಎನ್ನುತ್ತಾರೆ ಮತ್ತು ವೈದ್ಯಕೀಯ ತುರ್ತುಪರಿಸ್ಥಿತಿ ಇರೋ ಕಾರಣ ಅದನ್ನು ತುರ್ತಾಗಿ ಹಿಂದಿರುಗಿಸುವ ಅಗತ್ಯವಿದೆ ಎನ್ನುತ್ತಾರೆ.
ಹೀಗೆ ಅತ್ತ ಕಡೆಯಿಂದ ಕರೆ ಮಾಡಿದವರು ತಕ್ಷಣವೇ ದುಡ್ದು ಹಿಂದಿರುಗಿಸುವಂತೆ ನಿಮ್ಮನ್ನು ಒತ್ತಾಯಿಸುತ್ತಾರೆ. ನೀವು ಒತ್ತಡದಲ್ಲೋ ಪರಾನುಭೂತಿ, ಕನಿಕರದ ಭಾವನೆಯಲ್ಲೋ ನಿಮ್ಮ ಯುಪಿಐ ಖಾತೆ ಪರಿಶೀಲಿಸದೇ ಹಣ ವರ್ಗಾಯಿಸಬಹುದು. ಅಥವಾ ನೀವು ಗಡಿಬಿಡಿಯಲ್ಲಿ ಪರಿಶೀಲಿಸಿ ಅವರಿಗೆ ಹಣ ವರ್ಗಾಯಿಸಿದ ಬಳಿಕ ಅವರು ೨೦,೦೦೦ ರೂ ಬದಲಿಗೆ ಕೇವಲ ೨೦೦ ರೂಪಾಯಿ ವರ್ಗಾಯಿಸಿದ್ದಾರೆ ಎಂದು ಮನವರಿಕೆಯಾಗುವ ವೇಳೆಗೆ ವಂಚನೆ ನಡೆದು ಹೋಗಿರಬಹುದು.
ಯುಪಿಐ ಓವರ್ ಪೇಮೆಂಟ್ ಸ್ಕ್ಯಾಮ್ ಗಳಿಂದ ರಕ್ಷಣೆ ಪಡೆಯುವುದು ಹೇಗೆ?
1. ಪಾವತಿ ವಿನಂತಿ ಎರಡು ಬಾರಿ ಪರಿಶೀಲಿಸಲು ಮರೆಯಬೇಡಿ: ಮೇಲೆ ತಿಳಿಸಿದಂತೆ ಯಾವುದೇ ಯುಪಿಐ ಪೇಮೆಂಟ್ ಮಾಡಿ ಎಂಬ ರಿಕ್ವೆಸ್ಟ್ ಬಂದಾಗ ತಕ್ಷಣ ಅದಕ್ಕೆ ಒಪ್ಪಿ ಹಣ ವರ್ಗಾಯಿಸುವ ಮೊದಲು ಅವರ ರಿಕ್ವೆಸ್ಟ್ ಗಳನ್ನು ಸಮಯ ತೆಗೆದುಕೊಂಡು ಪರಿಶೀಲಿಸಿ. ಅಲ್ಲದೆ ಇಂತಹ ಅನಿರೀಕ್ಷಿತ ಪಾವತಿ ವಿನಂತಿಗಳ ಬಗ್ಗೆ ಜಾಗರೂಕರಾಗಿ.
2. ಕಳುಹಿಸುವವರ ವಿವರಗಳನ್ನು ಪರಿಶೀಲಿಸಿ: ನೀವು ಅಪರಿಚಿತ ಮೂಲದಿಂದ ಅಥವಾ ಅನಿರೀಕ್ಷಿತ ಮೊತ್ತಕ್ಕೆ ಪಾವತಿ ವಿನಂತಿಯನ್ನು ಸ್ವೀಕರಿಸಿದರೆ, ನೀವು ಮುಂದುವರಿಯುವ ಮೊದಲು ಕರೆ ಅಥವಾ ಸಂದೇಶದ ಮೂಲಕ ಕಳುಹಿಸುವವರ ವಿವರಗಳನ್ನು ದೃಢೀಕರಿಸಲು ಮರಿಯಬೇಡಿ
3. ಮೇಸೇಜ್ ಗಳ ಬಗ್ಗೆಯೂ ಜಾಗರೂಕರಾಗಿರಿ: ಸ್ಕ್ಯಾಮರ್ ಗಳು ಸಾಮಾನ್ಯವಾಗಿ ತಪ್ಪು ದಾರಿಗೆಳೆಯುವ ಹಕ್ಕುಗಳೊಂದಿಗೆ ಅಪೇಕ್ಷಿಸದ ಸಂದೇಶಗಳನ್ನು ಕಳುಹಿಸುತ್ತಾರೆ. ಅಂದರೆ ವಹಿವಾಟಿ ನಡೆಸಿದ ವಿವರಗಳಂತೆ ಇರುವ ಸಂದೇಶಗಳು ನಿಮ್ಮ ಮೊಬೈಲ್ ಗೆ ಬರಬಹುದು. ಹೀಗಾಗಿ ಇಂತಹ ರಿಕ್ವೆಸ್ಟ್ ಗಳಿಗೆ ಪ್ರತಿಕ್ರಿಯಿಸುವ ಅಥವಾ ಅನುಮೋದಿಸುವ ಮೊದಲು ಕಳುಹಿಸುವವರ ಗುರುತು ಮತ್ತು ವಹಿವಾಟಿನ ಉದ್ದೇಶವನ್ನು ಕೂಲಂಕುಷವಾಗಿ ಪರಿಶೀಲಿಸಿ.
4. ಒತ್ತಡಕ್ಕೆ ಒಳಗಾಗಬೇಡಿ: ಫೋನ್ ಕರೆಗಳನ್ನು ಆಧರಿಸಿ, ಅದರಲ್ಲೂ ವಿಶೇಷವಾಗಿ ಅಪರಿಚಿತ ಸಂಖ್ಯೆ ಗಳಿಂದ ಕರೆ , ಸಂದೇಶ ಬಂದಾಗ ಹಣ ವರ್ಗಾವಣೆಗೆ ಎಂದಿಗೂ ಆತುರಪಡಬೇಡಿ. ಸ್ಕ್ಯಾ ಮರ್ ಗಳು ಆಗಾಗ್ಗೆ ತುರ್ತು ಮತ್ತು ಭಾವನಾತ್ಮಕವಾಗಿ ತಮ್ಮ ಮಾತಿನ ಕೌಶಲ್ಯಗಳನ್ನು ಬಳಸಿಕೊಂಡು ವಂಚನೆ ಎಸಗುತ್ತಾರೆ. ಹೀಗಾಗಿ ಜಾಗರೂಕರಾಗಿರಿ ಮತ್ತು ನಿಮ್ಮ ಹಣವನ್ನು ರಕ್ಷಿಸಿಕೊಳ್ಳಿ
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications