ಕೇವಲ ಕೈಗಾರಿಕೋದ್ಯಮದಿಂದ ಮಾತ್ರವಲ್ಲ ಕೃಷಿಯಿಂದಲೂ ಕೂಡ ಜೀವನದಲ್ಲಿ ಮುಂದೆ ಬರಬಹುದು ಎಂಬ ಮಾತನ್ನು ಈಗಾಗಲೇ ಲೆಕ್ಕವಿಲ್ಲದಷ್ಟು ಸಾಧಕರು ನಿಜ ಮಾಡಿ ತೋರಿಸಿದ್ದಾರೆ. ಕಠಿಣ ಪರಿಶ್ರಮದಿಂದ ಭೂಮಿಯಲ್ಲಿ ದುಡಿದರೆ ಭೂಮಿ ತಾಯಿ ಎಂದಿಗೂ ಮೋಸ ಮಾಡಲ್ಲ ಎಂಬ ಮಾತು ನಿಜ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹರ್ಯಾಣ ರಾಜ್ಯದ ಪಂಚಕುಲದ ರಾಜೀವ್ ಭಾಸ್ಕರ್. ಎಂಬಿಎ ಪದವೀಧರನಾಗಿದ್ದರೂ ಕೃಷಿ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಅವರ ರೀತಿ ಮಾತ್ರ ಅಮೋಘವಾಗಿದೆ. ಸ್ಥಳೀಯ VNR ಸೀಡ್ಸ್ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ತಂಡದ ಸದಸ್ಯರಾಗಿದ್ದ ಅವರು ಕೃಷಿಗೆ ತೆರಳಿ, ಸದ್ಯ ಒಂದು ಕೋಟಿ ರೂ.ಗೆ ಅಧಿಕ ಮೊತ್ತವನ್ನು ಸಂಪಾದಿಸಿದ್ದಾರೆ.
ಕೃಷಿಯತ್ತ ಬಂದ ರೀತಿ ಹೇಗಿತ್ತು?
VNR ಸೀಡ್ಸ್ ಕಂಪೆನಿಯಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಜೀವ್ ಅವರಿಗೆ ಅಧಿಕಾರಾವಧಿಯ ವೇಳೆ ಭಾರತದ ವಿವಿಧ ಪ್ರದೇಶಗಳ ರೈತರೊಂದಿಗೆ ತೊಡಗಿಸಿಕೊಳ್ಳಲು ಅವಕಾಶವನ್ನು ಒದಗಿಸಿತ್ತು. ಇದರಿಂದ ಕೃಷಿಯ ಬಗೆಗಿನ ಅವರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದ್ದು, ಸುಳ್ಳಲ್ಲ. ಇದೇ ಅವಧಿಯಲ್ಲಿ ರಾಜೀವ್ ಅವರು ಥಾಯ್ ಪೇರಳೆ ಕೃಷಿ ಮತ್ತು ಅದರ ವಿಶಿಷ್ಟ ತಳಿಯ ಬಗೆಗಿನ ಜ್ಞಾನವನ್ನು ಪಡೆದುಕೊಂಡರು. ಹೀಗೆ ರೈತರು ಹಾಗೂ ತಜ್ಞರಿಂದ ಪೇರಳೆ ಹಣ್ಣಿನ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದಿಸಿಕೊಂಡ ರಾಜೀವ್ ಅವರು ಮುಂದೊಂದು ದಿನ ಇದೇ ಕೃಷಿಯಲ್ಲಿ ತಾನು ಕೋಟ್ಯಾಧಿಪತಿ ಆಗುತ್ತೇನೆಂಬ ಬಹುಷಃ ಕನಸು ಕೂಡ ಇಟ್ಟುಕೊಂಡಿರಲಿಕ್ಕಿಲ್ಲ. ಅದರೆ ನಂತರ ನಡೆದದ್ದೇ ಅಮೋಘ ಪಯಣ ಎಂದರೆ ತಪ್ಪಾಗಲಾರದು.

ಕೃಷಿಯ ಪಯಣ ಹೇಗಿತ್ತು?
ಭಾರತದಾದ್ಯಂತ ಸುತ್ತಾಡಿ, ಪ್ರಗತಿಪರ ರೈತರಿಂದ ಕೃಷಿಯ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದಿಸಿಕೊಂಡ ರಾಜೀವ್ ಅವರು 2017 ರಲ್ಲಿ, ಹರಿಯಾಣದ ಪಂಚಕುಲದಲ್ಲಿ ಐದು ಎಕರೆ ಬಾಡಿಗೆ ಜಮೀನಿನಲ್ಲಿ ಥಾಯ್ ಪೇರಳೆ ಕೃಷಿಯನ್ನು ಪ್ರಾರಂಭಿದರು. ಆದರೆ ಇದಕ್ಕೂ ಮುನ್ನ ಅವರು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದು, ಸದ್ಯ ಅವರ ಜೀವನಕ್ಕೆ ಮಹತ್ವದ ತಿರುವು ನೀಡಿದೆ. ತಾನು ಕೆಲಸ ಮಾಡುತ್ತಿದ್ದ ಕಂಪೆನಿಗೆ ರಾಜೀನಾಮೆ ನೀಡಿ ಹೊರಬಂದ ರಾಜೀವ್ ಬಾಡಿಗೆ ಜಮೀನನ್ನು ಪಡೆದು ಥಾಯ್ ಪೇರಳೆ ಕೃಷಿಯನ್ನು ಪ್ರಾರಂಭಿದರು. ಕೃಷಿ ತಂತ್ರಗಳನ್ನು ಬಳಸಿ, ಅವರು ಬೆಳೆ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಸಾವಯವ ವಸ್ತುಗಳಿಂದ ರಚಿಸಲಾದ ಜೈವಿಕ ನಾಶಕಗಳು ಮತ್ತು ಜೈವಿಕ ಗೊಬ್ಬರಗಳನ್ನು ಬಳಸಿದರು. ಮೂರು-ಪದರದ ಬ್ಯಾಗಿಂಗ್ ವಿಧಾನವನ್ನು ಅಳವಡಿಸಿದರು. ಇದರಿಂದ ಕೃಷಿಗೆ ಅಪಾರ ಹಾನಿ ಉಂಟು ಮಾಡುತ್ತಿದ್ದ ಕ್ರಿಮಿ ಕೀಟಗಳಿಂದ ರಕ್ಷಣೆಯ್ನು ಪಡೆದುಕೊಳ್ಳಲು ವಿಶಿಷ್ಟ ತಂತ್ರವನ್ನು ಅನುಸರಿಸಿದರು. ಅದೂ ಅಲ್ಲದೆ ಈ ಮೂಲಕ ಏಕರೂಪದ ಬಣ್ಣ ಪ್ರಸರಣ ಮತ್ತು ಸುಗ್ಗಿಯ ತನಕ ಸುರಕ್ಷಿತ ಹಣ್ಣು ಚೆನ್ನಾಗಿ ಬೆಳವಣಿಗೆ ಹೊಂದುವಂತೆ ನೋಡಿಕೊಂಡರು.
ಆರಂಭದಲ್ಲೇ ಭರ್ಜರಿ ಆದಾಯ!
ಹೀಗೆ 2017 ರಲ್ಲಿ ಬಾಡಿಗೆ ಜಮೀನು ಪಡೆದ ಆರಂಭಿಸಿದ ಪೇರಳೆ ಕೃಷಿಯು ರಾಜೀವ್ ಅವರ ಕೈಬಿಡಲಿಲ್ಲ. ಪರಿಣಾಮ 2017 ರ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ರಾಜೀವ್ ಅವರು ತನ್ನ ಆರಂಭಿಕ ಪೇರಳೆ ಬೆಳೆಯ ಯಶಸ್ವಿ ಕೊಯ್ಲು ಮಾಡಿದರು. ಪರಿಣಾಮ ಮೊದಲ ಅವಧಿಯಲ್ಲೇ ರಾಜೀವ್ ಅವರು ಒಟ್ಟು 20 ಲಕ್ಷ ರೂ. ಮೊತ್ತದ ಲಾಭ ಪಡೆದುಕೊಂಡರು. ರಾಜೀವ್ ಅವರು ಶೇಷ-ಮುಕ್ತ ತರಕಾರಿ(ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು ಇತರ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ಅಥವಾ ಸಂಪೂರ್ಣವಾಗಿ ನಿಲ್ಲಿಸಿ, ಜೈವಿಕ ವಿಧಾನಗಳನ್ನು ಬಳಸಿಕೊಂಡು ಕೃಷಿ ಮಾಡುವ ವಿಧಾನ) ಉತ್ಪಾದನೆಯಲ್ಲಿ ಸಂಕ್ಷಿಪ್ತವಾಗಿ ಅಧ್ಯಯನ ಮಾಡಿದರೂ ಅವರ ಪ್ರಚಾರದ ಪ್ರಯತ್ನಗಳು ಕಡಿಮೆ ಪರಿಣಾಮಕಾರಿ ಎಂದು ಸಾಬೀತಾಯಿತು. ಇದರಿಂದ ತರಕಾರಿ ಬೆಳೆಯುವ ಇರಾದೆಯನ್ನೇ ಕೈಬಿಟ್ಟು ರಾಜೀವ್ ಅವರು ಥಾಯ್ ಪೇರಳೆ ಕೃಷಿಯಲ್ಲಿ ಮುಂದುವರಿಯಲು ಕಾರ್ಯತಂತ್ರದ ನಿರ್ಧಾರವನ್ನು ಮಾಡಿದರು. ಅದೂ ಅಲ್ಲದೆ ಆರಂಭಿಕ ಬಾಡಿಗೆ ರೂಪದಲ್ಲಿ ಪಡೆದ ಜಮೀನಿನಲ್ಲಿ ಬಹುದೊಡ್ಡ ಲಾಭ ಮಾಡಿಕೊಂಡಿದ್ದ ಪರಿಣಾಮ ಇದೀಗ ಅವರು ಮತ್ತೊಂದು ದೊಡ್ಡ ಯೋಜನೆಗೆ ಕೈಹಾಕಿದ್ದರು.
ಪಂಜಾಬ್ನ ರೂಪನಗರದಲ್ಲಿ 55 ಎಕರೆ ಭೂಮಿಗೆ 2019 ರಲ್ಲಿ ಇತರ ಮೂವರು ಹೂಡಿಕೆದಾರರೊಂದಿಗೆ ಸೇರಿಕೊಂಡು ರಾಜೀವ್ ಅವರು ಗುತ್ತಿಗೆ ಒಪ್ಪಂದವನ್ನು ಮಾಡಿಕೊಂಡರು. ಈ ವಿಸ್ತಾರವಾದ ಭೂಮಿಯಲ್ಲಿ, ರಾಜೀವ್ ಮತ್ತು ಅವರ ತಂಡವು 25 ಎಕರೆಯನ್ನು ಪೇರಳೆ ಮರವನ್ನು ಬೆಳೆಸಲು ಮೀಸಲಿಟ್ಟರು, ಆದರೆ ಪಂಚಕುಲದ ಮೂಲ ಐದು ಎಕರೆಯಲ್ಲಿ ಥಾಯ್ ಪೇರಳೆ ಕೃಷಿಯನ್ನು 2021 ರಲ್ಲಿ ಮಾರಾಟ ಮಾಡುವವರೆಗೆ ಉಳಿಸಿಕೊಂಡರು. ಸ್ಪರ್ಧೆಯನ್ನು ಕಡಿಮೆ ಮಾಡಲು ಮಳೆಗಾಲದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲು ಮಳೆಗಾಲ ಮತ್ತು ಚಳಿಗಾಲದಲ್ಲಿ ಎರಡು ವರ್ಷಕ್ಕೊಮ್ಮೆ ಪೇರಳೆ ಗಿಡಗಳನ್ನು ಕೊಯ್ಲು ಮಾಡಿದರು. ದೆಹಲಿಯ ಎಪಿಎಂಸಿ ಮಾರುಕಟ್ಟೆಗೆ 10-ಕೆಜಿ ಕ್ರೇಟ್ಗಳಲ್ಲಿ ತಮ್ಮ ಸರಕುಗಳನ್ನು ತಲುಪಿಸುವ ಮೂಲಕ, ಅವರು ಸತತವಾಗಿ ಎಕರೆಗೆ ಸರಾಸರಿ 6 ಲಕ್ಷ ಲಾಭ ಗಳಿಸಿದರು.
ಹೆಚ್ಚಿನ ಲಾಭದತ್ತ ಚಿತ್ತ ಹರಿಸಿದ ರಾಜೀವ್
ಪ್ರತೀ ಎಕರೆಗೆ ರಾಜೀವ್ ಅವರ ತಂಡವು 6 ಲಕ್ಷ ಲಾಭ ಗಳಿಸಿದರೂ ಲಾಭವನ್ನು ಮತ್ತಷ್ಟು ಹೆಚ್ಚಿಸಲು ಯೋಜನೆ ಮಾಡಿದರು. ಪರಿಣಾಮ ರಾಜೀವ್ ತನ್ನ ಪೇರಳೆ ಗಿಡಗಳ ಸರಾಸರಿ ಗರಿಷ್ಠ ಇಳುವರಿಯನ್ನು ಪ್ರತಿ ಗಿಡಕ್ಕೆ 25 ಕೆಜಿಯಿಂದ 40 ಕೆಜಿಗೆ ಹೆಚ್ಚಿಸಲು ಯೋಜನೆ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ರಾಸಾಯನಿಕ ಕೃಷಿ ಕಡಿಮೆ ಪ್ರಚಲಿತವಿರುವ ಪ್ರದೇಶಗಳಲ್ಲಿ ಸಾವಯವ ಕೃಷಿ ವಿಧಾನಗಳನ್ನು ಬಳಸಿಕೊಳ್ಳುವ ಮಹತ್ವವನ್ನು ಅವರು ಹೆಚ್ಚಿನ ಶ್ರಮ ವಹಿಸಿದರು. ಇದರ ಹೊರತಾಗಿಯೂ ಕೀಟಗಳ ಬಾಧೆಯಿಂದ ಕೃಷಿಯನ್ನು ಸಂಪೂರ್ಣವಾಗಿ ರಕ್ಷಿಸಲು ಸಾವಯವ ವಿಧಾನ ಸಾಕಾಗಲ್ಲ ಎಂಬ ವಿಚಾರ ಅವರ ಅರಿವಿಗೆ ಬಂದಿತ್ತು. ಹೆಚ್ಚುವರಿಯಾಗಿ, ರಾಜೀವ್ ದೊಡ್ಡ ಪ್ರಮಾಣದ ಸಾವಯವ ಅಥವಾ ನೈಸರ್ಗಿಕ ಕೃಷಿಯ ಆರ್ಥಿಕ ಮತ್ತು ಶ್ರಮ-ತೀವ್ರ ಸ್ವಭಾವವನ್ನು ಒಪ್ಪಿಕೊಳ್ಳುತ್ತಾರೆ, ಇದು ಒಟ್ಟಾರೆ ಇಳುವರಿಯನ್ನು ಕಡಿಮೆ ಮಾಡುತ್ತದೆ. VNR ಸೀಡ್ಸ್ ಕಂಪೆನಿಯಿಂದ ಯಶಸ್ವಿ ಶೇಷ-ಮುಕ್ತ ಥಾಯ್ ಪೇರಳೆ ಕೃಷಿಗೆ ರಾಜೀವ್ ಅವರ ಪ್ರಯಾಣವು ಸುಸ್ಥಿರ ಕೃಷಿಯನ್ನು ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಸಹೋದ್ಯೋಗಿಗಳಿಗೆ ಸ್ಪೂರ್ತಿದಾಯಕ ಉದಾಹರಣೆಯಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications