ಅಟಾಲ್ ಪಿಂಚಣಿ ಯೋಜನೆ ಅಡಿಯಲ್ಲಿ ಯೋಜನೆಗೆ ನೆಟ್ ಬ್ಯಾಂಕಿಂಗ್ ಅಥವಾ ಆಯಾ ಎಪಿವೈ ಸೇವಾ ಪೂರೈಕೆದಾರರು ನೀಡಿದ ಇತರ ಡಿಜಿಟಲ್ ವಿಧಾನಗಳ ಮೂಲಕ ಚಂದಾದಾರರನ್ನು ನೋಂದಾಯಿಸಲಾಗಿದೆ. ಆದಾಗ್ಯೂ ಅಕ್ಟೋಬರ್ 27, 2021 ರಂದು, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಆಧಾರ್ ಇ ಕೆವೈಸಿ ಬಳಸಿಕೊಂಡು ಆನ್ಲೈನ್ನಲ್ಲಿ ಎಪಿವೈಗೆ ದಾಖಲಾಗುವ ಸೌಲಭ್ಯವನ್ನು ಘೋಷಿಸಿದೆ.
ಸಿಆರ್ಎ (ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ) ಈಗ ಆಧಾರ್ ಇಕೆವೈಸಿ ಆಧಾರಿತ ಆನ್ಲೈನ್ ನೋಂದಣಿ ಪ್ರಕ್ರಿಯೆಯ ಮೂಲಕ ದಾಖಲಾತಿ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಿದೆ. ಆನ್ಲೈನ್ ಮೂಲಕ ಆಧಾರ್ ಎಕ್ಸ್ಎಂಎಲ್-ಆಧಾರಿತ ಆನ್ಬೋರ್ಡಿಂಗ್ಗೆ ಪ್ರವೇಶ ಅವಕಾಶವನ್ನು ಈಗಾಲೇ ಚಂದಾದಾರರಿಗೆ ನೀಡಲಾಗಿದೆ. ಇನ್ನು ಈ ಆನ್ಲೈನ್ನಲ್ಲಿ ಎಪಿವೈಗೆ ದಾಖಲಾಗಲು ಯಾವುದೇ ದಾಖಲೆಗಳ ಅಗತ್ಯ ಇಲ್ಲ.
"ಇ ಕೆವೈಸಿ ತಂತ್ರಜ್ಞಾನದ ಮೂಲಕ ಚಂದಾದಾರರಿಂದ ಪಡೆದ ಆಧಾರ್ ವಿವರಗಳು, ಜನಸಂಖ್ಯಾ ಮಾಹಿತಿ, ಪಿಂಚಣಿ ಮೊತ್ತ, ಪಾವತಿ ವಿಧಾನ, ಸಂಗಾತಿಯ / ನಾಮಿನಿ ಹೆಸರು ಮತ್ತು ಬ್ಯಾಂಕ್ ಖಾತೆ ಮಾಹಿತಿ ಇತ್ಯಾದಿ ಮಾಹಿತಿಯನ್ನು ಚಂದಾದಾರರ ಈ ಚಂದಾದಾರರ ಉಳಿತಾಯ ಬ್ಯಾಂಕ್ ಖಾತೆಯನ್ನು ನಿರ್ವಹಣೆ ಮಾಡುವ ಬ್ಯಾಂಕುಗಳಿಗೆ ನೀಡಬಹುದು. ಎಪಿವೈ ಖಾತೆಯನ್ನು ತೆರೆದ ನಂತರ ಚಂದಾದಾರರ ನಂತರದ ಸೇವೆಯನ್ನು ಆಯಾ ಎಪಿವೈ-ಎಸ್ಪಿ ಮೂಲಕ ನೀಡಲಾಗುವುದು.

ಎಲ್ಲಾ ಎಪಿವೈ ಖಾತೆಗಳನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಆನ್ಲೈನ್ನ ಕಾರ್ಯವಿಧಾನದ ಮೂಲಕ ಅಸ್ತಿತ್ವದಲ್ಲಿರುವ ಎಪಿವೈ ಚಂದಾದಾರರ ಆಧಾರ್ ಲಿಂಕ್ ಕಾರ್ಯವನ್ನು ಸುಲಭಗೊಳಿಸಲಾಗಿದೆ. ಹೆಚ್ಚುವರಿಯಾಗಿ ಎಪಿವೈ-ಎಸ್ಪಿಗಳು ತಮ್ಮ ಸಂಬಂಧಿತ ಚಂದಾದಾರರಿಂದ ಆಧಾರ್ ವಿವರಗಳನ್ನು ಒಪ್ಪಿಗೆಯೊಂದಿಗೆ ಸಂಗ್ರಹ ಮಾಡಬಹುದು. ಎಲ್ಲಾ ಎಪಿವೈ-ಎಸ್ಪಿಗಳೊಂದಿಗೆ ತೊಡಗಿಸಿಕೊಳ್ಳಲು ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಗೆ ಸಲಹೆ ನೀಡಲಾಗಿದೆ.
ಜೂನ್ 1, 2015 ರಿಂದ ಜಾರಿಗೆ ಬರುವಂತೆ, ಭಾರತ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು ಆರಂಭ ಮಾಡಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ತನ್ನ ರಾಷ್ಟ್ರೀಯ ಪಿಂಚಣಿ ಯೋಜನೆಯ ಆಡಳಿತಾತ್ಮಕ ಮತ್ತು ಸಾಂಸ್ಥಿಕ ರಚನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ ಇಪಿಎಫ್ ಅಥವಾ ಯಾವುದೇ ಇತರ ಪಿಂಚಣಿ/ಸಾಮಾಜಿಕ ಭದ್ರತಾ ಯೋಜನೆಯ ಚಂದಾದಾರರು 18- 40 ವರ್ಷದೊಳಗಿನವರಾಗಿದ್ದರೆ ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಬಹುದು.
ಇನ್ನು ಈ ನಡುವೆ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಚಂದಾದಾರರ ಸಂಖ್ಯೆ 31 ಆಗಸ್ಟ್ 2021 ರ ವೇಳೆಗೆ ಶೇ.33.20 ರಷ್ಟು ಅಂದರೆ 304.51 ಲಕ್ಷಕ್ಕೆ ಏರಿಕೆಯಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್ಡಿಎ) ಪ್ರಮುಖ ಪಿಂಚಣಿ ಯೋಜನೆಗಳ ಅಡಿಯಲ್ಲಿ ಚಂದಾದಾರರ ಸಂಖ್ಯೆ ಶೇ.24 ರಷ್ಟು ಅಂದರೆ 4.53 ಕೋಟಿಗೆ ಹೆಚ್ಚಾಗಿದೆ ಎಂದು ವರದಿ ಆಗಿದೆ.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 18 ವರ್ಷದ ವ್ಯಕ್ತಿ ತಿಂಗಳಿಗೆ ಕೇವಲ 42 ರಿಂದ 210 ರೂ.ಗಳನ್ನು ಠೇವಣಿ ಮಾಡಿದರೆ, ತಮ್ಮ 60 ವರ್ಷ ವಯಸ್ಸಿನ ಬಳಿಕ 1 ಸಾವಿರದಿಂದ 5 ಸಾವಿರ ರೂಪಾಯಿಗಳವರಗೆ ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ. ಪ್ರೀಮಿಯಂ ಮೊತ್ತವು ವಯಸ್ಸು ಹೆಚ್ಚಾದಂತೆ ಹೆಚ್ಚಳವಾಗುತ್ತದೆ. ಉದಾಹರಣೆಗೆ ನೀವು 40 ವರ್ಷ ವಯಸ್ಸಿನವರಾಗಿದ್ದರೆ, 1 ರಿಂದ 5 ಸಾವಿರ ಪಿಂಚಣಿಗಾಗಿ ನೀವು ತಿಂಗಳಿಗೆ 291 ರಿಂದ 1454 ರೂ.ಗಳನ್ನು ಜಮಾ ಮಾಡಬೇಕಾಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications