ಬೆಂಗಳೂರು, ಜುಲೈ 2: ಕಾನೂನು ಬದ್ಧವಾಗಿ ತೆರಿಗೆ ಉಳಿತಾಯ ಮಾಡಲು ಹಲವಾರು ದಾರಿಗಳಿವೆ. ನೀವೇನಾದರೂ ತೆರಿಗೆ ಉಳಿಸಲು ಬಯಸಿದರೆ ಡೊನೇಷನ್ ಕೊಡಬಹುದು. ಹೀಗೆ ಮಾಡಿದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ ಅಡಿಯಲ್ಲಿ ವಿನಾಯಿತಿ ಕ್ಲೇಮ್ ಮಾಡಬಹುದು. ಇದರಿಂದ ನಿಮ್ಮ ಟ್ಯಾಕ್ಸೆಬಲ್ ಇನ್ಕಮ್ ಕಡಿಮೆ ಆಗುತ್ತದೆ. ಇನ್ವೆಸ್ಟ್ಮೆಂಟ್ ಮತ್ತು ಡೊನೇಷನ್ ಎರಡರಲ್ಲೂ ಆದಾಯ ತೆರಿಗೆ ಉಳಿತಾಯ ಮಾಡಬಹುದು.
ಹಾಗಿದ್ದರೆ ಇನ್ವೆಸ್ಟ್ಮೆಂಟ್ ಮತ್ತು ಡೊನೇಷನ್ ಎರಡನ್ನೂ ಒಟ್ಟಿಗೆ ಮಾಡಬಹುದಾ? ಖಂಡಿತ ಮಾಡಬಹುದು. ಎಚ್ಡಿಎಫ್ಸಿ ಚಾರಿಟಿ ಫಂಡ್ ಫಾರ್ ಕ್ಯಾನ್ಸರ್ ಕ್ಯೂರ್ ಮ್ಯೂಚುಯಲ್ ಫಂಡ್ ಇಂಥ ಹೂಡಿಕೆಯ ಅವಕಾಶ ಮಾಡಿಕೊಡುತ್ತಿದೆ.

ಇಲ್ಲಿ ನಮಗೆ ಡಿವಿಡೆಂಡ್ ರೂಪದಲ್ಲಿ ನಿಮಗೆ ನಿಯಮಿತವಾಗಿ ರಿಟರ್ನ್ಸ್ ಸಿಗ್ತಾ ಇರುತ್ತದೆ. ಈ ಫಂಡ್ ಮೇಲೆ ಯಾವುದೇ ಫಂಡ್ ಹೌಸ್ ಶುಲ್ಕ ವಿಧಿಸಲ್ಲ ಅನ್ನೋದು ಗಮನಿಸಬೇಕಾದ ಸಂಗತಿ. ಇದರಲ್ಲಿ ಸಿಗುವ ರಿಟರ್ನ್ಸ್ ನ ಇಂತಿಷ್ಟು ಭಾಗವನ್ನ ನೀವು ಡೊನೇಟ್ ಮಾಡುವುಕ್ಕೂ ಆಯ್ಕೆ ಮಾಡಬಹುದು.
ಇದಕ್ಕಾಗಿ ನೀವು ಇನ್ಕಮ್ ಡಿಸ್ಟ್ರಿಬ್ಯೂಷನ್ ಕಮ್ ಕ್ಯಾಪಿಟಲ್ ವಿತ್ ಡ್ರಾಅಲ್ (ಐಡಿಸಿಡಬ್ಲ್ಯು) ಆಯ್ಕೆಯನ್ನು ಸೆಲೆಕ್ಟ್ ಮಾಡ್ಕೋಬೇಕು. ನಿಮ್ಮ ಗಳಿಕೆಯ ನಿರ್ದಿಷ್ಟ ಪಾಲನ್ನು ಭಾರತೀಯ ಕ್ಯಾನ್ಸರ್ ಸಂಸ್ಥೆಗೆ ದಾನ ಕೊಡಲಾಗುತ್ತದೆ. ಈ ಸಂಸ್ಥೆ ಈ ಹಣವನ್ನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸುತ್ತೆದೆ.
ಇಲ್ಲಿ ನಿಮಗೆ ಎರಡು ಆಯ್ಕೆಗಳು ಸಿಗುತ್ತವೆ. ನಿಮ್ಮ ಪ್ರಾಫಿಟ್ನ ಶೇಕಡ 50 ರಷ್ಟನ್ನು ಅಥವಾ ಶೇಕಡ 75 ರಷ್ಟನ್ನ ಡೊನೇಟ್ ಮಾಡಬಹುದು. ಈ ರೀತಿಯ ಹೂಡಿಕೆ ಮೂಲಕ, ನೀವು ನಿಮ್ಮ ದಾನದ ಉದ್ದೇಶವನ್ನೂ ಕೂಡ ಈಡೇರಿಸಿಕೊಳ್ಳಬಹುದು ಮತ್ತು ಡೊನೇಷನ್ ಮೇಲೆ ಶೇಕಡ 50ರಷ್ಟು ತೆರಿಗೆ ವಿನಾಯಿತಿಯ ಲಾಭ ಸಹ ಪಡೆಯಬಹುದು.
ಪ್ರತಿ ವರ್ಷ, ಅನೇಕರು ತೆರಿಗೆ ಉಳಿತಾಯಕ್ಕಾಗಿ ಚಾರಿಟೆಬಲ್ ಸಂಸ್ಥೆಗಳಿಗೆ ದಾನ ಮಾಡ್ತಾರೆ. ಅಂತಹವರಿಗೆ ದಾನದ ಜೊತೆಗೆ ಕಡಿಮೆ ರಿಸ್ಕ್ ಇರೋ ಹೂಡಿಕೆ ಆಯ್ಕೆ ಕೂಡ ದೊರೆಯುವಂತಿದ್ದರೆ ಇಂಥ ಅವಕಾಶ ಯಾಕೆ ಮಿಸ್ ಮಾಡಿಕೊಳ್ಳಬೇಕು ಅಲ್ಲವೆ?
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications