ಬೆಂಗಳೂರು, ಆಗಸ್ಟ್ 31: ಹಳೆ ಪಿಂಚಣಿ ವ್ಯಸ್ಥೆ ಮತ್ತು ಹೊಸ ಪಿಂಚಣಿ ವ್ಯವಸ್ಥೆ ಬಗ್ಗೆ ಎದ್ದಿರುವ ಗೊಂದಲಳು ಹಾಗೆ ಇವೆ. ಇದೆಲ್ಲದರ ನಡುವೆಯೇ ಕೇಂದ್ರ ಸರ್ಕಾರ ಖಚಿತ ಕನಿಷ್ಠ ಪಿಂಚಣಿಯನ್ನು ನೀಡುವ ಏಕೀಕೃತ ಪಿಂಚಣಿ ವ್ಯವಸ್ಥೆ ಅಥವಾ ಯುನಿಫೈಡ್ ಪೆನ್ಶನ್ ಸ್ಕೀಮ್ (ಯುಪಿಎಸ್) ಪ್ರಕಟಿಸಿದೆ. ಹಾಗಿದ್ದರೆ ಈ ಯೋಜನೆ ಈಗಿರುವ ಯೋಜನೆಗಳಿಗಿಂತ ಹೇಗೆ ಭಿನ್ನವಾಗಿದೆ? ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಸರ್ಕಾರಿ ಉದ್ಯೋಗಿಗಳಿಗೆ ಖಚಿತ ಪಿಂಚಣಿ, ಕುಟುಂಬ ಪಿಂಚಣಿ ನೀಡುವುದಕ್ಕೆ ಈ ಯೋಜನೆಯಲ್ಲಿ ಮೊದ ಆದ್ಯತೆ ನೀಡಲಾಗಿದೆ. ಈ ಯೋಜನೆಯು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯೋಜನ ಒದಗಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯೋಜನೆಯನ್ನು ಅನಾವರಣ ಮಾಡುವ ವೇಳೆ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿದ್ದು ಇದು ಸರ್ಕಾರಿ ನೌಕರರಿಗೆ ಮೂರು ಬಗೆಯ ಪಿಂಚಣಿ ಲಾಭಗಳನ್ನು ಒದಗಿಸುವ ಗುರಿ ಹೊಂದಿದೆ. ನೂತನ ಪಿಂಚಣಿ ಯೋಜನೆಯು 2025ರ ಏಪ್ರಿಲ್ 1ರಿಂದ ಅಸ್ತಿತ್ವಕ್ಕೆ ಬರಲಿದೆ. ಹಾಗಿದ್ದರೆ ಈ ಯೋಜನೆಯ ಪ್ರಮುಖ ಅಂಶಗಳ ಬಗ್ಗೆ ಒಂದಿಷ್ಟು ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಆಯ್ಕೆ ಕಡ್ಡಾಯ ಏನಿಲ್ಲ-ಖಚಿತ ಪಿಂಚಣಿ:
ಯುಪಿಎಸ್ ಆಯ್ಕೆಯು ಕೇಂದ್ರ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿರುವುದಿಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ಮತ್ತು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ನಡುವೆ ಆಯ್ಕೆ ಮಾಡಲು ಉದ್ಯೋಗಿಗಳಿಗೆ ಅವಕಾಶ ಇರಲಿದೆ. ಈ ಯೋಜನೆಯು, ಕನಿಷ್ಠ 25 ವರ್ಷ ಸೇವೆ ಸಲ್ಲಿಸಿರುವ ಸರ್ಕಾರಿ ನೌಕರರು ನಿವೃತ್ತಿಗೂ ಕೊನೆಯ 12 ತಿಂಗಳ ಮುನ್ನ ಪಡೆಯುವ ಸರಾಸರಿ ಮೂಲ ವೇತನದ ಶೇ. 50ರಷ್ಟು ಮೊತ್ತವನ್ನು ಖಾತರಿಪಡಿಸುತ್ತದೆ.
ಕುಟುಂಬಕ್ಕೆ ಪಿಂಚಣಿ: ಉದ್ಯೋಗಿಯ ಮರಣದ ಸನ್ನಿವೇಶಗಳಲ್ಲಿ, ಪಿಂಚಣಿದಾರನ ಕುಟುಂಬವು ಅವರ ಸಾವಿನ ಸಮಯದಲ್ಲಿ ಶೇ. 60ರಷ್ಟು ಪಿಂಚಣಿ ಪಡೆಯಲಿದೆ. ಇದಕ್ಕೆ ಒಂದಿಷ್ಟು ನಿಯಮಗಳನ್ನು ತಿಳಿಸಲಾಗಿದೆ.
ಕನಿಷ್ಠ ಭರವಸೆ ಪಿಂಚಣಿ: ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ಮಾಸಿಕ 10 ಸಾವಿರ ರೂ ಪಿಂಚಣಿಯ ಭರವಸೆಯನ್ನು ಈ ಯೋಜನೆ ಒದಗಿಸುತ್ತದೆ. ಅಂದರೆ ನಿವೃತ್ತಿ ನಂತರ ಕನಿಷ್ಠ 10 ಸಾವಿರ ಪಿಂಚಣಿಯನ್ನು ಪಡೆದುಕೊಳ್ಳುವುದು ಫಿಕ್ಸ್ ಆಗಿರುತ್ತದೆ.
ಸರ್ಕಾರದ ಕೊಡುಗೆ ಪಾಲು ಏರಿಕೆ:
ಪ್ರಸ್ತುತ ಇರುವ ಪಿಂಚಣಿ ಯೋಜನೆ ಅನ್ವಯ, ಉದ್ಯೋಗಿಗಳು ತಮ್ಮ ವೇತನದ ಶೇ 10ರಷ್ಟು ಪಾಲನ್ನು ನೀಡಿದರೆ, ಕೇಂದ್ರ ಸರ್ಕಾರವು ಶೇ 14ರಷ್ಟು ಪಾಲು ನೀಡುತ್ತಿದೆ. ಏಕೀಕೃತ ಪಿಂಚಣಿ ಯೋಜನೆ ಅಡಿಯಲ್ಲಿ ಇದನ್ನು ಶೇ18ಕ್ಕೆ ಹೆಚ್ಚಿಸಲಾಗುತ್ತದೆ.
ಈ ಯೋಜನೆ ಅಡಿ ನಿವೃತ್ತಿ ಸಂದರ್ಭದಲ್ಲಿ, ಪ್ರತಿ ಆರು ತಿಂಗಳು ಸೇವೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಗ್ರಾಚುಯಿಟಿ ಮತ್ತು ಮಾಸಿಕ ವರಮಾನದ (ಸಂಬಳ+ ತುಟ್ಟಿಭತ್ಯೆ) ಹತ್ತನೇ ಒಂದು ಭಾಗದ ಜತೆಗೆ ಒಟ್ಟು ಮೊತ್ತವನ್ನು ನಿವೃತ್ತಿ ದಿನಾಂಕದಂದು ಪಾವತಿಸಲಾಗುತ್ತದೆ
ಯುಪಿಎಸ್ ಯೋಜನೆಯಿಂದ ಇಂಡೆಕ್ಸೇಶನ್ ಲಾಭ: ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಕೇಂದ್ರ ಸರ್ಕಾರಿ ನೌಕರರಿಗೆ ಸ್ಥಿರ ಪಿಂಚಣಿ ಖಾತ್ರಿಪಡಿಸುವುದು ಅಲ್ಲದೆ ಯುಪಿಎಸ್ ಯೋಜನೆಯಿಂದ ಇಂಡೆಕ್ಸೇಶನ್ ಲಾಭ ನೀಡುತ್ತದೆ. ಹಳೆ ಪಿಂಚಣಿ ಸ್ಕೀಮ್ ನಲ್ಲಿದ್ದ ಇಂಡೆಕ್ಸೇಶನ್ ಲಾಭವನ್ನು ಇಲ್ಲಿ ಪರಿಚಯಿಸಲಾಗಿದೆ. ಹೊಸ ಪಿಂಚಣಿ ಯೋಜನೆಯಲ್ಲಿ ಈ ಅಂಶ ತಗೆದುಹಾಕಲಾಗಿತ್ತು. ಇಂಡೆಕ್ಸೇಶನ್ ಪರಿಣಾಮ ಹಣದುಬ್ಬರ ದರಕ್ಕೆ ಅನುಗುಣವಾಗಿ ಸರ್ಕಾರಿ ನೌಕರರ ಪಿಂಚಣಿ ಮೊತ್ತ ಏರಿಕೆಯಾಗುತ್ತಿರುತ್ತದೆ. ಅಂದರೆ ಯಾವ ರೀತಿ ಬೆಲೆ ಏರಿಕೆ ಸಾಗುತ್ತದೆಯೋ ಆ ರೀತಿ ಪಿಂಚಣಿ ಪ್ರಮಾಣದಲ್ಲಿಯೂ ಏರಿಕೆ ಕಾಣುತ್ತದೆ ಎಂದು ಸರಳವಾಗಿ ಹೇಳಬಹುದು.
ಈ ಹೊಸ ಯೋಜನೆಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 6250 ಕೋಟಿ ಹೊರೆ ಬೀಳಲಿದೆ. 23 ಲಕ್ಷ ಜನ ನೌಕರರಿಗೆ ನೆರವಾಗಲಿದ್ದು ಸರ್ಕಾರ ನೀಡುತ್ತಿದ್ದ ಕೊಡುಗೆಯನ್ನು ಶೇ. 14 ರಿಂದ ಶೇ. 18.5ಕ್ಕೆ ಏರಿಕೆ ಮಾಡಲಾಗುತ್ತಿದೆ
More From GoodReturns

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ



Click it and Unblock the Notifications