ಯಾವುದಾದರೂ ಹಬ್ಬಗಳು ಬಂದಾಗ, ಸಾರ್ವತ್ರಿಕ ರಜೆ (Holiday) ಘೋಷಣೆಯಾದಾಗ, ಶನಿವಾರ-ಭಾನುವಾರ ಭಾರತೀಯ ಷೇರು ಮಾರುಕಟ್ಟೆಗಳು ಮುಚ್ಚಲ್ಪಡುತ್ತದೆ. ಇದೀಗ ನವೆಂಬರ್ 5 ರ ಗೊಂದಲ ಹೂಡಿಕೆದಾರರಲ್ಲಿ ಮನೆ ಮಾಡಿದೆ. ಗುರು ನಾನಕ್ ಜಯಂತಿ (Guru Nanak Jayanti 2025) ಪ್ರಯುಕ್ತ ಭಾರತೀಯ ಷೇರು ಮಾರುಕಟ್ಟೆಗಳಾದ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ (BSE)ಗಳು ನಾಳೆ ಅಂದರೆ ನವೆಂಬರ್ 5 ರಂದು ಮುಚ್ಚಿರುತ್ತದೆಯೇ? ತೆರೆದಿರುತ್ತದೆಯೇ? ಎಂಬ ಪ್ರಶ್ನೆ ಮೂಡಿದೆ. ಇದೀಗ ಈ ಗೊಂದಲಗಳಿಗೆ ಸ್ಪಷ್ಟನೆ ಇಲ್ಲಿದೆ ಓದಿ.

ನವೆಂಬರ್ 5, ಗುರು ನಾನಕ್ ಜಯಂತಿ ಹಿನ್ನೆಲೆ ನಾಳೆ ಒಂದು ದಿನ ಭಾರತೀಯ ಷೇರು ಮಾರುಕಟ್ಟೆಗೆ ರಜೆ ಘೋಷಣೆ ಮಾಡಲಾಗಿದೆ. ಸಿಖ್ ಸಮುದಾಯದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಗುರುನಾನಕ್ ಜಯಂತಿ ಕೂಡಾ ಒಂದು. ಅದೇ ಕಾರಣದಿಂದ ಈ ನಿರ್ಧಾರ ಕೈಗೊಂಡಿದ್ದು, ಈ ದಿನ ಷೇರು ಮಾರುಕಟ್ಟೆಯಲ್ಲಿ ಯಾವುದೇ ಬೆಳವಣಿಗೆಗಳು ನಡೆಯುವುದಿಲ್ಲ ಎಂದು ಹೇಳಲಾಗಿದೆ.
ನವೆಂಬರ್ 5 ರಂದು ಷೇರು ಮಾರುಕಟ್ಟೆಗೆ ರಜೆ:
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ರಜಾ ದಿನಗಳ ಅಧಿಕೃತ ವೇಳಾಪಟ್ಟಿಯ ಪ್ರಕಾರ, ದೇಶದ ಹಲವು ಕಡೆಗಳಲ್ಲಿ ಗುರು ನಾನಕ್ ಜಯಂತಿಯನ್ನು ಬಹಳ ಪವಿತ್ರವಾಗಿ ಆಚರಿಸುವುದರಿಂದ ಈ ದಿನ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೇ ನವೆಂಬರ್ 5 ರಂದು, ಈಕ್ವಿಟಿ, ಡೆರಿವೇಟಿವ್ಸ್, ಸೆಕ್ಯುರಿಟೀಸ್ ಲೆಂಡಿಂಗ್ ಆಂಡ್ ಬಾರೋಯಿಂಗ್ ಮತ್ತು ಕರೆನ್ಸಿ ಡೆರಿವೇಟಿವ್ಸ್ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಯಾವುದೇ ಕಾರ್ಯಾಚರಣೆ ಇರುವುದಿಲ್ಲ ಎನ್ನಲಾಗಿದೆ. ಇನ್ನು ಕ್ಯಾಲೆಂಡರ್ ಪ್ರಕಾರ ಇನ್ನು ಗುರುನಾನಕ್ ಜಯಂತಿ ಮತ್ತು ಡಿಸೆಂಬರ್ 25 ಕ್ರಿಸ್ಮಸ್ ಪ್ರಯುಕ್ತ ಮಾತ್ರ ಷೇರು ಮಾರುಕಟ್ಟೆಗೆ ರಜೆ ಇರಲಿದೆ. ಇದರೊಂದಿಗೆ ಪ್ರತೀ ಶನಿವಾರ ಮತ್ತು ಭಾನುವಾರ ಕೂಡಾ ಮುಚ್ಚಿರುತ್ತದೆ.
ನವೆಂಬರ್ 5 ರಂದು ಷೇರು ಮಾರುಕಟ್ಟೆಗೆ ರಜೆ ಇರಲಿದೆ. ಆದ್ರೆ ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ (MCX) ಮಾತ್ರ ಭಾಗಶಃ ವಹಿವಾಟು ನಡೆಸಲಿದೆ ಎಂದು ವರದಿಯಾಗಿದೆ. ಅಂದರೆ MCX ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಮುಚ್ಚಿದ್ದರೆ, ಸಂಜೆ 5 ರಿಂದ ರಾತ್ರಿ 11:30 ಅಥವಾ 11:55 ವರೆಗೆ ಎಂದಿನಂತೆ ವಹಿವಾಟು ನಡೆಸಲಿದೆ ಎನ್ನಲಾಗಿದೆ. ಆದ್ದರಿಂದ ಈ ಟೈಮಲ್ಲಿ ಹೂಡಿಕೆದಾರರು ತನ್ನ ಸರಕು ವಹಿವಾಟು ನಡೆಸಬಹುದು.
ಗುರು ನಾನಕ್ ಜಯಂತಿ ಏಕೆ ಆಚರಿಸುತ್ತಾರೆ?
ಸಿಖ್ ಧರ್ಮದ ಸಂಸ್ಥಾಪಕ ಮತ್ತು ಸಿಖ್ ಗುರುಗುಳಾದ ಗುರುನಾನಕ್ ದೇವ್ ಜಿ ಅವರ ಜನ್ಮದಿನವನ್ನಾಗಿ ಈ ದಿನ ಆಚರಿಸಲಾಗುತ್ತದೆ. ಇನ್ನು ಗುರು ನಾನಕ್ ಜಯಂತಿಯನ್ನು "ಗುರುಪುರಬ್" ಅಥವಾ "ಪ್ರಕಾಶ್ ಪರ್ವ್" ಅಂತಾನೂ ಕರೆಯುತ್ತಾರೆ. ಇನ್ನು ಗುರುನಾನಕ್ ಹಬ್ಬ, ಹಿಂದೂ ಪಂಚಾಂಗದ ಕಾರ್ತಿಕ ಮಾಸದ ಹುಣ್ಣಿಮೆಯ ದಿನದಂದು, ಬಹುತೇಕ ನವೆಂಬರ್ ತಿಂಗಳಲ್ಲಿ ಬರುತ್ತದೆ.
ಗುರು ನಾನಕ್ ಜಯಂತಿಯಂದು ಪ್ರಪಂಚದಾದ್ಯಂತ ಸಿಖ್ ಸಮುದಾಯದವರು ಅತ್ಯಂತ ಪವಿತ್ರವಾಗಿ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಭಕ್ತರು ಕೀರ್ತನೆಗಳು, ಮೆರವಣಿಗೆಗಳನ್ನು ನಡೆಸಲಾಗುತ್ತದೆ. ಅಲ್ಲದೇ ಈ ದಿನ ಗುರುದ್ವಾರಗಳಲ್ಲಿ ಆಯೋಜಿಸಲಾದ ಸಮುದಾಯ ಭೋಜನಗಳನ್ನು ಸಹ ಆಯೋಜಿಸಲಾಗಿದೆ. ಗುರು ನಾನಕ್ ಅವರ ಬೋಧನೆಯನ್ನು ಇಲ್ಲಿ ಪ್ರತಿಬಿಂಬಿಸಲಿದ್ದು, ಹಲವರಿಗೆ ಸ್ಪೂರ್ತಿ ನೀಡಲಿದೆ.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications