ಕರ್ನಾಟಕ ರಾಜ್ಯ ಮತ್ತೊಂದು ಅಭಿವೃದ್ಧಿಯ ಪಥದತ್ತ ಮುಖ ಮಾಡುತ್ತಿದೆ. ಕನಾfಟಕ ತಾಂತ್ರಿಕ ಉನ್ನತೀಕರಣ ಮಂಡಳಿ (KCTU) ಮೂಲಕ, ರಾಜ್ಯದ ಕೈಗಾರಿಕೆಗಳು ಹಾಗೂ ವಾಣಿಜ್ಯ ಇಲಾಖೆಯು ಹೊಸ ನೀತಿಯ ಕರಡು ರಚನೆಗೆ ಸಲಹೆಗಾರರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಟೆಂಡರ್ ಕೂಡ ಕರೆದಿದೆ.

MSME ಉತ್ತೇಜನಕ್ಕೆ ಪ್ರೋತ್ಸಾಹ:
ಈ ಒಂದು ಪ್ರಕ್ರಿಯೆ ರಾಜ್ಯಾದ್ಯಂತ ಇರುವ MSME ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರೋತ್ಸಾಹ ಮತ್ತು, ರಿಯಾಯಿತಿಗಳ ಸಮಗ್ರ ಪ್ಯಾಕೇಜ್ನ ಒಳಗೊಂಡಿರುತ್ತದೆ ಎನ್ನಬಹುದು. ಸಲಹೆಗಾರರನ್ನು ನೇಮಿಸಿಕೊಳ್ಳುತ್ತಿರುವುದರ ಹಿಂದೆ ಒಂದು ಅತ್ಯದ್ಭುತ ಉದ್ದೇಶವಿದೆ. ಸಲಹೆಗಾರರ ಕೆಲಸವೇನೆಂದರೆ ಭೂದೃಶ್ಯವನ್ನು ಅಧ್ಯಯನ ಮಾಡುತ್ತಾರೆ. ಅಷ್ಟೇ ಅಲ್ಲ MSME ವ್ಯವಸ್ಥೆದೆ ಹೆಸರುವಾಸಿಯಾಗಿರುವ ರಾಜ್ಯಗಳ ನೀತಿಗಳ ವಿರುದ್ಧ..ಅಂದರೆ ಗುಜರಾತ್, ತೆಲಂಗಾಣ, ಮಹಾರಾಷ್ಟ್ರ ಮತ್ತು ತಮಿಳುನಾಡು ಸೇರಿ ಹಲವು ರಾಜ್ಯಗಳ, ನೀತಿಗಳ ವಿರುದ್ಧ ಕರ್ನಾಟಕ ರಾಜ್ಯದ ವಿಧಾನವನ್ನು ಮಾನದಂಡವಾಗಿ ಪರಿಶೀಲಿಸುತ್ತಾರೆ. ಇದು ಅವರ ಕೆಲಸವಾಗಿರುತ್ತದೆ.
ಇದೇ ಮೊದಲ ಬಾರಿ ಈ ನಿರ್ಧಾರ:
ಇನ್ನು MSMEಗಳ ಪ್ರಚಾರಕ್ಕಾಗಿ ನಿರ್ದಿಷ್ಟವಾಗಿ ಮೀಸಲಾದ, ನೀತಿಯನ್ನು ರೂಪಿಸುತ್ತಿರುವ ಇದೇ ಮೊದಲು ಎನ್ನಬಹುದು. ಇದು ಭಾರತದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಬುನಾದಿಯಾಗುತ್ತದೆ. ಸದ್ಯ ನಮ್ಮ ರಾಜ್ಯದಲ್ಲಿ ಸಮಾಜದ ವಿವಿಧ ವರ್ಗಗಳಿಗೆ ಉದ್ಯೋಗ ನೀಡುವ MSME ವಲಯವು, ಅಭಿವೃದ್ಧಿ ಸೃಷ್ಟಿಸುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಹೀಗಾಗಿ ಈ ಒಂದು ಪ್ರಕ್ರಿಯೆಯನ್ನು ಕೈಗಾರಿಕಾ ಸಂಘಗಳು, ಸ್ವಾಗತಿಸಿವೆ. ಕರ್ನಾಟಕದಲ್ಲಿ ಪ್ರತ್ಯೇಕ MSME ನೀತಿಯನ್ನು ನಾವು ಬಹಳ ದಿನಗಳಿಂದ ಕೇಳುತ್ತಿದ್ದೇವೆ ಎಂದು FKCCI ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದರು.
ಇನ್ನು ಈ ಒಂದು ಮೀಸಲಾದ ನೀತಿಯು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಉತ್ತಮ ಗುರಿಯನ್ನು ಅನುಮತಿಸುತ್ತದೆ ಎಂದು, FKCCI ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದರು. ಅಲ್ಲದೇ ಹೆಚ್ಚುತ್ತಿರುವ ವೇತನ, ವಿದ್ಯುತ್ ವೆಚ್ಚಗಳು ಮತ್ತು ನಿಯಂತ್ರಕ ಶುಲ್ಕಗಳನ್ನು ನಿಭಾಯಿಸುವಲ್ಲಿ, ಹೆಚ್ಚಿನ ಸವಾಲುಗಳನ್ನು MSME ಎದುರಿಸುತ್ತಿರುವ ಬಗ್ಗೆ ಗಮನ ಹರಿಸಿದ್ದಾರೆ.
ಇನ್ನು ಅಧಿಕಾರಿಗಳ ಪ್ರಕಾರ ಈಗಾಗಲೇ MSMEಗಳನ್ನು ಬೆಂಬಲಿಸಲು, ವಿವಿಧ ಯೋಜನೆಗಳು ಇವೆ. ಹೀಗಿದ್ದರೂ ಹೆಚ್ಚು ಉದ್ದೇಶಿತ ಮಧ್ಯಸ್ಥಿಕೆಗಳನ್ನು ನೀಡುವ ಸ್ವತಂತರ ನೀತಿಯ ಅವಶ್ಯಕತೆ ಹೆಚ್ಚಾಗಿದೆ. ಅಲ್ಲದೇ ಸಲಹೆಗಾರರು ತಮ್ಮ ಅನುಷ್ಠಾನದಲ್ಲಿ ಹಲವು ರೀತಿಯ ಅಡಚಣೆಗಳನ್ನು ನಿಭಾಯಿಸುತ್ತಾರೆ. ಅದರ ಜೊತೆಗೆ ಸಮಸ್ಯೆಗಳನ್ನು ಸರಿಪಡಿಸುವ ಕ್ರಮಗಳನ್ನು ಕೂಡ ಶಿಫಾರಸು ಮಾಡುತ್ತಾರೆ. ಅವರು ಮಾಡುವ ಅಧ್ಯಯನಗಳು ಪ್ರಾದೇಶಿಕತೆಗೆ ಸೀಮಿತವಾಗಿರದೇ, ರಾಷ್ಟ್ರ, ಅಂತಾರಾಷ್ಟ್ರೀಯ ಘಟಕಗಳನ್ನು ಕೂಡ ಒಳಗೊಂಡಿರುತ್ತದೆ. ಅಲ್ಲದೇ ಇತರ ರಾಜ್ಯಗಳಲ್ಲಿ ಮತ್ತು MSMEಗಳು ಆರ್ಥಿಕತೆಯ ಬಲವಾದ ಭಾಗವಾಗಿರುವ ದೇಶಗಳಲ್ಲಿ ಯಶಸ್ವಿ MSME ನೀತಿಗಳನ್ನು ಪರಿಶೀಲಿಸುತ್ತದೆ.
ಇನ್ನು ಕರ್ನಾಟಕವು ಭಾರತೀಯ MSMEಗಳು ಜಾಗತಿಕವಾಗಿ ಸ್ಪರ್ಧಿಸುವ ಬಗ್ಗೆ ಖಚಿತಪಡಿಸಿಕೊಳ್ಳಲು, ಜಾಗತಿಕ ವಿಶ್ಲೇಷಣೆಯು ಸರಿಯಾದ ಮಧ್ಯಸ್ಥಿಕೆಗಳನ್ನು ಗುರುತಿಸಲು ಸಹಾಯ ಮಾಡಲಾಗುತ್ತದೆ ಎಂದು ಟೆಂಡರ್ ದಾಖಲೆ ಹೇಳುತ್ತದೆ. ಸದ್ಯ ಕರಡು ನೀತಿಯ ಗುರಿ ಏನಿದೆ ಎಂದರೆ, ಧ್ಯೇಯ, ತಂತ್ರಗಳು, ನಿರೀಕ್ಷಿತ ಫಲಿತಾಂಶಗಳು ಮತ್ತು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ವಿವರಿಸುತ್ತದೆ.
ಅಂದಹಾಗೆ ಕರಡು ಸಿದ್ಧಪಡಿಸಿದ ನಂತರವೇ ಅನುಷ್ಠಾನಗೊಳಿಸಲೂ ಆಗುವುದಿಲ್ಲ. ಅದನ್ನು ಮೊದಲು ವಿವಿಧ ಸರ್ಕಾರಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಮತ್ತು ಪ್ರಮುಖ MSME ಪಾಲುದಾರರ ನಡುವೆ ಪ್ರತಿಕ್ರಿಯೆಯಾಗಿ ವಿತರಿಸಲಾಗುತ್ತೆ. ಸಲಹೆಗಾರರು ಕನಿಷ್ಠ ನಾಲ್ಕು ವಿಭಾಗೀಯ ಮಟ್ಟದ ಮತ್ತು ಎರಡು ರಾಜ್ಯ ಮಟ್ಟದ ಸಭೆಗಳನ್ನು ನಡೆಸಿ, ಸರ್ಕಾರದ ಅನುಮೋದನೆಗಾಗಿ ಸಲ್ಲಿಸುವ ಮೊದಲು ಒಳಹರಿವುಗಳನ್ನು ಸಂಗ್ರಹಿಸಿ ಕರಡನ್ನು ಅದಕ್ಕೆ ಅನುಗುಣವಾಗಿ ಪರಿಷ್ಕರಿಸುತ್ತಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications