
ಎಷ್ಟು ಆದಾಯ ಇರುವವರು ರಿಟರ್ನ್ ಸಲ್ಲಿಸಬೇಕು, ಎಲ್ಲಿ ಸಲ್ಲಿಸಬೇಕು, ಹೇಗೆ ಸಲ್ಲಿಸಬೇಕು, ಸರಕಾರದಿಂದ ನಮಗೇನಾದರೂ ಹಣ ಮರುಪಾವತಿ ಆಗಬೇಕಾ ಎಂಬಿತ್ಯಾದಿ ಪ್ರಶ್ನೆಗಳು ಅನೇಕ ನೌಕರರಲ್ಲಿ ಎದ್ದಿರುತ್ತವೆ. ಅಂಥವರಿಗಾಗಿ ಕೇಂದ್ರ ಸರಕಾರ ಶುಕ್ರವಾರ ಸುದ್ದಿಯೊಂದನ್ನು ಬಿಡುಗಡೆ ಮಾಡಿದೆ.
ಅದೇನೆಂದರೆ, ವಾರ್ಷಿಕ ಆದಾಯ 5 ಲಕ್ಷ ರು.ಗಿಂತ ಕಡಿಮೆ ಇರುವ, ಸಂಬಳ ಪಡೆಯುವ ನೌಕರರು ಪ್ರಸಕ್ತ ವರ್ಷದಿಂದ ಐಟಿ ರಿಟರ್ನ್ಸ್ ಫೈಲ್ ಮಾಡುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ವಾರ್ಷಿಕ ಆದಾಯ 5 ಲಕ್ಷ ರು.ಗಿಂತ ಕಡಿಮೆ ಇರಬೇಕು ಮತ್ತು ಬ್ಯಾಂಕ್ ಉಳಿತಾಯದ ಹಣದಿಂದ ಬರುವ ವಾರ್ಷಿಕ ಬಡ್ಡಿ 10 ಸಾವಿರ ರು.ಗಿಂತ ಕಡಿಮೆ ಇರಬೇಕು. ಅಂಥವರಿಗೆ ಮಾತ್ರ ಈ ವಿನಾಯಿತಿ ಲಭ್ಯ.
ಆದರೆ, ಹೆಚ್ಚುವರಿ ಹಣವನ್ನು ಸರಕಾರಕ್ಕೆ ಪಾವತಿಸಿದ್ದರೆ, ಆ ಹಣ ಪಡೆಯಬೇಕೆಂದು ಬಯಸುವವರು, ಅವರ ಆದಾಯ 5 ಲಕ್ಷ ರು.ಗಿಂತ ಕಡಿಮೆ ಇದ್ದರೂ ಐಟಿ ರಿಟರ್ನ್ಸ್ ಫೈಲ್ ಮಾಡಲೇಬೇಕು. ಬ್ಯಾಂಕ್ ಡೆಪಾಸಿಟ್ ಗಳಿಕೆಯ ಜೊತೆ 5 ಲಕ್ಷ ರು.ಗಿಂತ ಕಡಿಮೆ ಆದಾಯ ಇರುವ ಸಂಬಳದಾರರ ಸಂಖ್ಯೆ ದೇಶದಲ್ಲಿ 85 ಲಕ್ಷದಷ್ಟಿದೆ. ಈ ಎಲ್ಲರಿಗೂ ಈ ವಿನಾಯಿತಿ ದೊರೆಯಲಿದೆ.
ವಿನಾಯಿತಿ ಪಡೆಯಲು ಇಲ್ಲಿ ಇನ್ನೊಂದು ಷರತ್ತಿದೆ. ಅದೇನೆಂದರೆ, ಪ್ರತಿ ತಿಂಗಳು ಆದಾಯದಿಂದ ತೆರಿಗೆ ಕಡಿತ ಆಗಿರುವ ಬಗ್ಗೆ ಉದ್ಯೋಗದಾತನಿಂದ ಫಾರ್ಮ್ 16ರಲ್ಲಿ ಸರ್ಟಿಫಿಕೇಟ್ ಪಡೆದಿರಬೇಕು. ಹಾಗೆಯೆ, ಬ್ಯಾಂಕ್ ಡೆಪಾಸಿಟ್ ನಿಂದ ಸಿಗುವ ಗಳಿಕೆಯ ಬಗ್ಗೆ ಉದ್ಯೋಗದಾತನಿಗೆ ವರದಿ ಸಲ್ಲಿಸಿರಬೇಕು.
ರಿಟರ್ನ್ಸ್ ಎಲ್ಲಿ ಸಲ್ಲಿಸಬೇಕು? : ಯಾರು ಬೇಕಾದರೂ ಆನ್ಲೈನ್ ಮುಖಾಂತರ ಐಟಿ ರಿಟರ್ನ್ಸ್ ಸಲ್ಲಿಸಬಹುದಾಗಿದೆ. ಕರ್ನಾಟಕದ ಆದಾಯ ತೆರಿಗೆ ಪಾವತಿದಾರರಿಗೆ ಇಲ್ಲಿ ಸಂಪೂರ್ಣ ವಿವರ ನೀಡಲಾಗಿದೆ. ಐಟಿ ರಿಟರ್ನ್ ಫಾರ್ಮ್ ಎಲ್ಲಿ ಪಡೆಯಬಹುದು, ಹೇಗೆ ತುಂಬುವುದು, ಯಾವ ವಿಳಾಸಕ್ಕೆ ಕಳಿಸಬೇಕು ಎಂಬಿತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ. ಆದಾಯ ತೆರಿಗೆ ಪಾವತಿಸುವುದನ್ನು ಮರೆಯಬೇಡಿ. ಮರೆತರೆ ಮಹಾಲಕ್ಷ್ಮಿ ವರ ನೀಡಲಾರಳು!
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications