
ಡಿಎಂಕೆ ಅಧಿನಾಯಕ ಅವರ ಎಂ ಕರುಣಾನಿಧಿ ಅವರ ಅಳಿಯ ಮುರಸೋಳಿ ಮಾರನ್ ಮಕ್ಕಳಾದ ಕಳಾನಿಧಿ ಮಾರನ್ ಹಾಗೂ ದಯಾನಿಧಿ ಮಾರನ್ ಅವರು ಪ್ರಭಾವಿ ಉದ್ಯಮಿಗಳಾಗಿದ್ದಾರೆ. ಕಳಾನಿಧಿ ಮಾರನ್ ಪತ್ನಿ ಕೊಡಗು ಮೂಲದ ಕಾವೇರಿ ಅವರು ಸನ್ ನೆಟ್ವರ್ಕ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ.
ಹೀಗಾಗಿ ಡಿಎಂಕೆಯಲ್ಲಿ ಏನಾದರೂ ಅನಾಹುತವಾದರೆ ಪರೋಕ್ಷವಾಗಿ ಸನ್ ನೆಟ್ ವರ್ಕ್ ಹಾಗೂ ಸ್ಪೈಸ್ ಜೆಟ್ ಷೇರುಗಳು ಏರುಪೇರಾಗುತ್ತದೆ. ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದವರು. ಈಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿರುವ ಮಾರನ್ ಬ್ರದರ್ಸ್ ಗೆ ಶ್ರೀಲಂಕಾ ಆಟಗಾರರಿಗೆ ತಂಡದಲ್ಲಿ ಆಡಲು ಅನುಮತಿ ನೀಡದೆ ಇರಬೇಕಾದ ಪರಿಸ್ಥಿತಿ ಒದಗಿದೆ.
ನೆಲ ಕಚ್ಚಿದ ಷೇರುಗಳು: ಮಂಗಳವಾರ ಸನ್ ಟಿವಿ ಷೇರುಗಳು ಮಧ್ಯಾಹ್ನ 16.40ರ ವೇಳೆಗೆ ಬಿಎಸ್ ಇ ನಲ್ಲಿ 410.95 ರು ನಂತೆ ಶೇ 5.98 ರು ನಷ್ಟು ಕುಸಿತ ಕಂಡು 5.98 ರು ಕಳೆದುಕೊಂಡಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ 412.40 ರು ನಂತೆ ಶೇ 5.74ರ ರಷ್ಟು ಕುಸಿತ ಕಂಡು 25.10 ರು ಕಳೆದುಕೊಂಡಿದೆ.
ಇದೇ ರೀತಿ ಸ್ಪೈಸ್ ಜೆಟ್ ಷೇರುಗಳು ಬಿಎಸ್ ಇನಲ್ಲಿ 31.85 ರು ನಂತೆ ಶೇ 4.35 ರಷ್ಟು ಕುಸಿತ ಕಂಡಿದೆ. ಎನ್ ಎಸ್ ಇನಲ್ಲಿ ಕಳೆದ 30 ದಿನಗಳಿಂದ ವಹಿವಾಟು ನಡೆಸಿಲ್ಲ. ಸನ್ ಟಿವಿ ಷೇರುಗಳು ಇದೇ ಪರಿಸ್ಥಿತಿಯಲ್ಲಿ ಹೆಚ್ಚು ಕಮ್ಮಿ ಎರಡು ಮೂರು ದಿನವಾದರೂ ಮುಂದುವರೆಯುವ ಸಾಧ್ಯತೆಯಿದೆ.
ಮಾರನ್ ಬ್ರದರ್ಸ್ ಈ ಎರಡು ಕಂಪನಿಗಳಲ್ಲದೆ ರೆಡ್ ಎಫ್ ಎಂ, ಸೂರ್ಯನ್ ಎಫ್ ಎಂ, ದಿನಕರನ್, ಕುಂಕುಮಂ ಸೇರಿದಂತೆ ಹಲವು ಪತ್ರಿಕೆಗಳನ್ನು ಹೊಂದಿದ್ದಾರೆ. ಸನ್ ಡಿಟಿಎಚ್, ಸನ್ ಪಿಕ್ಚರ್ಸ್, ಸನ್ 18 ಜೊತೆಗೆ ಹೊಸದಾಗಿ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡ ಕೂಡಾ ಸೇರಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications
