ಈ ವರ್ಷ ದೇಶದಾದ್ಯಂತ ಐಐಟಿಗಳಲ್ಲಿನ 30 ಕಂಪನಿಗಳನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ಇವುಗಳಲ್ಲಿ 28 ಸ್ಟಾರ್ಟ್ಅಪ್ ಗಳು ಸೇರಿವೆ. ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ಐಐಟಿಗಳು ಈ ಕ್ರಮ ಕೈಗೊಳ್ಳಲು ಮುಂದಾಗಿವೆ.
ಈ ಕಂಪನಿಗಳನ್ನು ಯಾತಕ್ಕಾಗಿ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟಿದೆ ಎಂಬುದರ ಸಂಕ್ಷೀಪ್ತ ವಿವರ ಮತ್ತು ಆ ಕಂಪನಿಗಳ ಮಾಹಿತಿ ಇಲ್ಲಿದೆ.
ಕಂಪನಿಗಳಿಗೆ ಎಚ್ಚರಿಕೆ
ನವೋದ್ಯಮಗಳು ಕ್ಯಾಂಪಸ್ ಸಂದರ್ಶನ ನಡೆಸಿದ ನಂತರ ಉದ್ಯೋಗ ನೀಡದೆ ಸತಾಯಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಇದಲ್ಲದೆ 12 ಕಂಪನಿಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.
ವಿದ್ಯಾರ್ಥಿಗಳ ಹಿತಾಸಕ್ತಿ
ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ಐಐಟಿಗಳು ಈ ಕ್ರಮ ಕೈಗೊಳ್ಳಲು ಮುಂದಾಗಿವೆ. ಈ ಹಿನ್ನೆಲೆ ಐಐಟಿಗಳ ನೇಮಕಾತಿ ಸಮಿತಿಗಳು ಆಗಸ್ಟ್ 14ರಂದು ಐಐಟಿ ಕಾನ್ಪುರದಲ್ಲಿ ನಡೆದ ಸಭೆಯಲ್ಲಿ ಈ ತಿರ್ಮಾನವನ್ನು ತೆಗೆದುಕೊಂಡಿವೆ ಎಂದು ಎಐಐಪಿಸಿ ಸಮಿತಿ ತಿಳಿಸಿದೆ.
ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಲು ಕಾರಣ
* ಉದ್ಯೋಗ ಪ್ರಸ್ತಾಪಗಳನ್ನು ರದ್ದುಗೊಳಿಸಿರುವುದು.
* ಸೇರ್ಪಡೆ ದಿನಾಂಕದಲ್ಲಿ ವಿಳಂಬ
* ವೇತನ ಪ್ಯಾಕೇಜ್ ನಲ್ಲಿ ಕಡಿತ
ಫ್ಲಿಪ್ಕಾರ್ಟ್ ವಿರುದ್ಧ ಕ್ರಮ ಕೈಗೊಂಡಿಲ್ಲ
ಎಐಐಪಿಸಿ ಫ್ಲಿಪ್ಕಾರ್ಟ್ ವಿರುದ್ದ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಫ್ಲಿಪ್ಕಾರ್ಟ್ ಆರಂಭದ ಹಂತದ ಬಿಕ್ಕಟ್ಟು ಮತ್ತು ಗೊಂದಲಗಳನ್ನು ಸರಿಪಡಿಸಿಕೊಂಡಿದೆ ಎಂದು ಎಐಐಪಿಸಿ ತಿಳಿಸಿದೆ.
ಕಪ್ಪು ಪಟ್ಟಿಗೆ ಸೇರಿದ ಕಂಪನಿಗಳು
* ಜೆಟ್ಟಾಟ
* ಪೆಪ್ಪರ್ ಟ್ಯಾಪ್
* ನೌಫ್ಲೋಟ್ಸ್
* ಜಿಂಪ್ಲಿ
* ಬಾಬಾಜಾಬ್ಸ್
*ಪೋರ್ಟಿ ಮೆಡಿಕಲ್
* ಹೋಪ್ ಸ್ಕಾಚ್
* ಕ್ರೆಯಾನ್ ಡೇಟಾ ಇಂಡಿಯಾ
* ಗ್ಲೋವ್ ಹೋಮ್ಸ್ ಟೆಕ್ನಾಲಜೀಸ್
* ಟೆಸ್ಕಾರ್ ಸಾಪ್ಟವೇರ್
* ಗ್ರೋಫರ್ಸ್
* ಫಂಡಮೆಂಟಲ್ ಎಜ್ಯುಕೇಶನ್
*ಕ್ಲಿಕ್ ಲ್ಯಾಬ್ಸ್
* ಮೆಡ್ ಇತ್ಯಾದಿ ಕಂಪನಿಗಳು ಸೇರಿವೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications