ಭಾರತ ಅನೇಕ ಪ್ರಥಮಗಳಿಗೆ, ಸಾಧನೆ-ಸಾಹಸಗಳಿಗೆ ಪಾತ್ರವಾಗಿರುವ ದೇಶ. ಆರ್ಥಿಕತೆ, ತಂತ್ರಜ್ಞಾನ, ನವೋದ್ಯಮ ಹೀಗೆ ಅನೇಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಾ ವೇಗವಾಗಿ ಬೆಳೆಯುತ್ತಿರುವ ದೇಶ.
ಭಾರತದಲ್ಲಿ ವಿಶ್ವದ ಶ್ರೀಮಂತ ಉದ್ಯಮಿಗಳಿದ್ದಾರೆ. ಜತೆಗೆ ಏಷಿಯಾದ ಸಿರಿವಂತ ಬಿಲಿಯನೇರ್ ಗಳ ಪಟ್ಟಿಯಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ.
ಬ್ಯುಸಿನೆಸ್ ಇನ್ಸೈಡರ್ ನಿಯತಕಾಲಿಕೆ ಭಾರತದಲ್ಲಿ 2015ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿಯನ್ನು ಮಾಡಿದೆ. ಕಲಾನಿಧಿ ಮಾರನ್ ಮೊದಲ ಸ್ಥಾನದಲ್ಲಿ, ಪವನ್ ಮಂಜುಲ್ ಐದನೇ ಮತ್ತು ಮುರುಳಿ ಕೆ ದಿವಿ ಹತ್ತನೇ ಸ್ಥಾನದಲ್ಲಿದ್ದಾರೆ. ಅದರ ವಿವರ ಇಲ್ಲಿದೆ ನೋಡಿ.
ಕಲಾನಿಧಿ ಮಾರನ್
ಕಲಾನಿಧಿ ಮಾರನ್ ಭಾರತೀಯ ಮಾದ್ಯಮದ ಬ್ಯಾರನ್ ಆಗಿದ್ದಾರೆ. ಇವರು 56.25 ಕೋಟಿ ರೂಪಾಯಿ ವಾರ್ಷಿಕ ವೇತನವನ್ನು ಪಡೆಯುತ್ತಿದ್ದಾರೆ.
ಪ್ರಸ್ತುತ ಏಷಿಯಾದಲ್ಲಿಯೇ ಅತಿಹೆಚ್ಚು ಲಾಭದಲ್ಲಿರುವ ಮೀಡಿಯಾ ಸಂಸ್ಥೆ ಸನ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಕಲಾನಿಧಿ ಮಾರನ್ ದೂರದರ್ಶನ ವಾಹಿನಿಗಳು, ಪತ್ರಿಕೆಗಳು, ಸಾಪ್ತಾಹಿಕಗಳು, ಎಫ್ಎಂ ರೇಡಿಯೋ ಕೇಂದ್ರ, ಡಿಟಿಎಚ್ ಸೇವೆ ಮತ್ತು ಚಿತ್ರ ನಿರ್ಮಾಣ ಸಂಸ್ಥೆಗಳನ್ನು ಹೊಂದಿದ್ದಾರೆ.
ಕಾವೇರಿ ಕಲಾನಿಧಿ
ಇವರು ಕಲಾನಿಧಿ ಮಾರನ್ ಹೆಂಡತಿಯಾಗಿದ್ದು, ಸನ್ ಟಿವಿ ನೆಟ್ವರ್ಕ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಕಾವೇರಿ ಕಲಾನಿಧಿ ಭಾರತದ ಎರಡನೇ ಅತಿಹೆಚ್ಚು ಸಂಭಾವನೆ ಪಡೆಯುವ ಸಿಇಒ ಆಗಿದ್ದು, ಇವರ ವಾರ್ಷಿಕ ಸಂಭಾವನೆ 56.24 ಕೋಟಿ ರೂಪಾಯಿ ಆಗಿದೆ.
ಫಾರ್ಚುನ್ ನಿಯತಕಾಲಿಕೆ ಪ್ರಕಾರ ಇವರು ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಸಿಇಒ.
ನವೀನ್ ಜಿಂದಾಲ್
ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಡೆಟ್ ಸಂಸ್ಥೆಯಲ್ಲಿ ನವೀನ್ ಜಿಂದಾಲ್ ಅಧ್ಯಕ್ಷರಾಗಿದ್ದಾರೆ. ಇವರು ಪಾರ್ಲಿಮೆಂಟಿನ ಸದಸ್ಯರಾಗಿದ್ದು, ಹರಿಯಾಣದ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ನವೀನ್ ಜಿಂದಾಲ್ ರ ವಾರ್ಷಿಕ ಸಂಭಾವನೆ 54.98 ಕೋಟಿ ಆಗಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಕುಮಾರ್ ಮಂಗಳಂ ಬಿರ್ಲಾ
ಕುಮಾರ್ ಮಂಗಳಂ ದಿತ್ಯ ಬಿರ್ಲಾ ಗ್ರೂಪ್ ನ ಪ್ರಸ್ತುತ ಚೇರಮನ್ ಆಗಿದ್ದಾರೆ. ಇವರು ತಮ್ಮ ತಂದೆಯ ನಿಧನದ ನಂತರ 1995ರಲ್ಲಿ 28 ವಯಸ್ಸಿನಲ್ಲಿ ಬಿರ್ಲಾ ಗ್ರೂಪಿನ ಅಧ್ಯಕ್ಷರಾದರು.
1995ರಲ್ಲಿದ್ದ 2 ಬಿಲಿಯನ್ ಡಾಲರ್ ವಹಿವಾಟನ್ನು ಇಂದು 40 ಬಿಲಿಯನ್ ಡಾಲರ್ ನಷ್ಟು ಹೆಚ್ಚಿಸಿದ್ದು, ಕುಮಾರ್ ಮಂಗಳಂ ಬಾರತ ಮತ್ತು ಜಾಗತಿಕವಾಗಿ 17 ವರ್ಷಗಳಲ್ಲಿ 26ಸ್ವಾಧೀನಗಳನ್ನು ಮಾಡಿದ್ದಾರೆ.
ಕುಮಾರ್ ಮಂಗಳಂ ಬಿರ್ಲಾ ವಾರ್ಷಿಕ ಸಂಭಾವನೆ 49.62 ಕೋಟಿ.
ಪವನ್ ಮಂಜುಲ್
ಪವನ್ ಮಂಜುಲ್ ಹೀರೋ ಮೋಟೊ ಕಾರ್ಪ್ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿದ್ದು, ಭಾರತದಲ್ಲಿ ಅತಿಹೆಚ್ಚು ವೇತನ ಪಡೆಯುವ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇವರ ವಾರ್ಷಿಕ ವೇತನ 32.80 ಕೋಟಿ ಆಗಿದೆ.
ಹೀರೋ ಮೋಟೊ ಕಾರ್ಪ್ ನ ಯಶಸ್ಸಿನ ಹಿಂದಿರುವ ಪ್ರಮುಖ ಆಧಾರ ಸ್ಥಂಭವಾಗಿದ್ದಾರೆ. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಲಕ್ನೋ ಮಂಡಳಿಯ ಸದಸ್ಯರಾಗಿದ್ದಾರೆ.
ಬ್ರಿಜ್ ಮೋಹನ್ ಲಾಲ್ ಮಂಜುಳ್
ಇವರು ಹೀರೊ ಗ್ರೂಪ್ ನ ಸಂಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷರಾಗಿದ್ದಾರೆ. ವಾರ್ಷಿಕ ವೇತನ 32.63 ಕೋಟಿ ಆಗಿದೆ.
ಬ್ರಿಜ್ ಮೋಹನ್ ಲಾಲ್ ಮಂಜುಳ್ ಆರ್ಬಿಐ ಮಂಡಳಿಯ ಸದಸ್ಯರಾಗಿದ್ದಾರೆ. ಭಾರತ ಸರ್ಕಾರದ ಪದ್ಮ ಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ.
ಸುನೀಲ್ ಕಾಂತ್ ಮಂಜುಳ್
ಸುನೀಲ್ ಕಾಂತ್ ಮಂಜುಳ್ ಇವರನ್ನು 2011ರಲ್ಲಿ ಹೀರೋ ಮೋಟೊ ಕಾರ್ಪ್ ಸಂಸ್ಥೆ ಜಂಟಿ ನಿರ್ವಾಹಕ ನಿರ್ದೇಶಕರಾಗಿ ಐದು ವರ್ಷಗಳ ಕಾಲದ ಅವಧಿಗೆ ನೇಮಕ ಮಾಡಿದೆ.
2006ರಲ್ಲಿ ನಿರ್ದೇಶಕರ ಮಂಡಳಿಗೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ನೇಮಿಸಲಾಯಿತು.
ಇವರ ವಾರ್ಷಿಕ ಸಂಭಾವನೆ 31.51 ಕೋಟಿ ಆಗಿದೆ.
ಪಿಆರ್ ರಾಮಸುಬ್ರಮ್ಹಣ್ಯ ರಾಜಾ
ಪಿಆರ್ ರಾಮಸುಬ್ರಮ್ಹಣ್ಯ ರಾಜಾ ರಾಮ್ಕೊ ಸಿಮೆಂಟ್ ಕಂಪನಿಯ ಅಧ್ಯಕ್ಷ ಮತ್ತು ನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇವರ ವಾರ್ಷಿಕ ಸಂಭಾವನೆ 30.96 ಕೋಟಿ.
ಸಿಮೆಂಟ್, ಪವನ ಶಕ್ತಿ ಉತ್ಪಾದನೆ, ಒಣ ಗಾರೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಪಿಆರ್ ರಾಮಸುಬ್ರಮ್ಹಣ್ಯ ರಾಜಾ ರಾಮ್ಕೊ ಸಿಮೆಂಟ್ ಕಂಪನಿಯನ್ನು ಯಶಸ್ಸಿನತ್ತ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಂಜೋ ನಕಾನಿಸಿ
ಶಿಂಜೋ ನಕಾನಿಸಿ 2007ರಿಂದ ಮಾರುತಿ ಸುಜುಕಿಯ ಚುಕ್ಕಾಣಿಯನ್ನು ಹಿಡಿದಿದ್ದು, ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇವರ ವಾರ್ಷಿಕ ವೇತನ 30.90 ಕೋಟಿ.
ಶಿಂಜೋ ನಕಾನಿಸಿ ಸುಜುಕಿ ಮೋಟಾರ್ ಕಾರ್ಪೊರೇಷನ್ ನಲ್ಲಿ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಆಗಿದ್ದಾರೆ.
ಮುರುಳಿ ಕೆ ದಿವಿ
ದಿವಿ ಲ್ಯಾಬೊರೇಟರಿಸ್ ನಲ್ಲಿ ಮುರುಳಿ ಕೆ ದಿವಿ ಚೇರಮನ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇವರ ವಾರ್ಷಿಕ ಸಂಭಾವನೆ ರೂ. 26.46 ಕೋಟಿ.
ಔಷಧಿಯ ಉದ್ಯಮದಲ್ಲಿ 30 ವರ್ಷಗಳಿಗಿಂತಲೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.
ಮುರುಳಿ ಕೆ ದಿವಿ ಅಮೆರಿಕನ್ ಔಷಧೀಯ ಅಸೋಸಿಯೇಷನ್, ಅಮೇರಿಕನ್ ಕಾಸ್ಮೆಟಿಕ್ ಸೊಸೈಟಿ, ಅಮೆರಿಕನ್ ಕೆಮಿಕಲ್ ಸೊಸೈಟಿ ಮತ್ತು ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಎಂಜಿನೀಯರ್ಸ್ ಮುಂತಾದ ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications