ಪ್ರಸ್ತುತ ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಕುರಿತಾಗಿ ಚರ್ಚೆಗಳು ಜೋರಾಗಿ ನಡೆದಿವೆ. ಬೇರೆ ಬೇರೆ ವಲಯಗಳಿಂದ ಗ್ರಾಹಕರು, ವಿಶ್ಲೇಷಕರು, ಪಂಡಿತರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಪ್ರಸ್ತುತ ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ(goods and services tax) ಕುರಿತಾಗಿ ಚರ್ಚೆಗಳು ಜೋರಾಗಿ ನಡೆದಿವೆ. ಬೇರೆ ಬೇರೆ ವಲಯಗಳಿಂದ ಗ್ರಾಹಕರು, ವಿಶ್ಲೇಷಕರು, ಪಂಡಿತರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಏನಿದು ಜಿಎಸ್ಟಿ? ಇದರ ಪ್ರಯೋಜನಗಳೇನು? ಯಾಕೆ ವಿಧಿಸಬೇಕು? ಇದರ ಅಗತ್ಯವೇನು? ಇತ್ಯಾದಿ ಪ್ರಶ್ನೆಗಳನ್ನು ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಕೇಳಿರುತ್ತೇವೆ. ಅಲ್ಲದೇ ಕೆಲ ಪ್ರಶ್ನೆಗಳು, ಗೊಂದಲಗಳು ನಮ್ಮ ಸುತ್ತ ಗಿರಕಿ ಹೊಡೆಯುತ್ತಲೇ ಇರುತ್ತವೆ.....
ಏನಿದು ಜಿಎಸ್ಟಿ?
ಸರಕು ಮತ್ತು ಸೇವೆಗಳ (ತಯಾರಿ, ಮಾರಾಟ, ಬಳಕೆ) ಮೇಲೆ ವ್ಯಾಪಕ ಮತ್ತು ಸಮಗ್ರ ಆಧಾರಿತ ತೆರಿಗೆಯನ್ನು ವಿಧಿಸುವ ವ್ಯವಸ್ಥೆ. ಸರಕಿನ ತಯಾರಿಕೆ ಹಂತದಿಂದ ಪ್ರಾರಂಭಿಸಿ ಅಂತಿಮ ಬಳಕೆಯ ಎಲ್ಲಾ ಹಂತದವರೆಗೆ ಈ ತೆರಿಗೆಯನ್ನು ವಿಧಿಸಲಾಗುವುದು. ಜಿಎಸ್ಟಿ ರಾಷ್ಟ್ರಮಟ್ಟದ ತೆರಿಗೆ ವ್ಯವಸ್ಥೆಯಾಗಿದೆ.
ಜಿಎಸ್ಟಿ ಉದ್ದೇಶ?
- ರಾಜ್ಯಗಳು ವಿವಿಧ ತೆರಿಗೆಗಳನ್ನು ವಿಧಿಸುವ ಬಹು ತೆರಿಗೆ ಪದ್ಧತಿಯನ್ನು ರದ್ದುಪಡಿಸುವುದು
- ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವುದು
- ಇಡೀ ದೇಶದಲ್ಲಿ ಒಂದೇ ರೀತಿಯ ಅರ್ಥವ್ಯವಸ್ಥೆ ರೂಪಿಸುವುದು. ಒಂದು ದೇಶ, ಒಂದು ತೆರಿಗೆ ಇದರ ಧ್ಯೇಯ.
ಜಿಎಸ್ಟಿಯೊಳಗೆ ಅಂತರ್ಗತಗೊಳ್ಳಲಿರುವ ತೆರಿಗೆಗಳು
ಕೇಂದ್ರ ಸರ್ಕಾರದ ತೆರಿಗೆಗಳು
- ಕೇಂದ್ರೀಯ ಅಬಕಾರಿ ಸುಂಕ
- ಅಬಕಾರಿ ಸಂ(ಔಷಧೀಯ ಮತ್ತು ಟಾಯ್ಲೆಟ್ ತಯಾರಿಕೆಗಳ ಮೇಲೆ)
- ಹೆಚ್ಚುವರಿ ಅಬಕಾರಿ ಸುಂಕ(ಜವಳಿ ಉತ್ಪನ್ನಗಳು)
- ಹೆಚ್ಚುವರಿ ಸೀಮಾ ಶುಲ್ಕ
- ವಿಶೇಷ ಹೆಚ್ಚುವರಿ ಸೀಮಾ ಶುಲ್ಕ
- ಸೇವಾ ತೆರಿಗೆ
- ಸರ್ಚಾಜ್ ಮತ್ತು ಸೇಸ್
ರಾಜ್ಯ ಸರ್ಕಾರ
- ರಾಜ್ಯದ ಮೌಲ್ಯವರ್ಧನೆ ತೆರಿಗೆ(ವ್ಯಾಟ್)
- ಕೇಂದ್ರ ಮಾರಾಟ ತೆರಿಗೆ
- ಐಷಾರಾಮಿ, ಮನರಂಜನಾ ತೆರಿಗೆ
- ಪ್ರವೇಶ ತೆರಿಗೆ(ಎಲ್ಲಾ ವಿಧ)
- ಜಾಹೀರಾತು ತೆರಿಗೆ
- ಖರೀದಿ ತೆರಿಗೆ ಲಾಟರಿ, ಬೆಟ್ಟಿಂಗ್, ಜೂಜಾಟ
- ರಾಜ್ಯ ಸರ್ಕಾರದ ಸರ್ಚಾಜ್, ಸೆಸ್
ಪ್ರಯೋಜನಗಳು
- ಎಲ್ಲ ಪರೋಕ್ಷ ತೆರಿಗೆಗಳು ಜಿಎಸ್ಟಿಯಲ್ಲಿ ಅಂತರ್ಗತಗೊಳ್ಳುತ್ತವೆ.
- ಜನರಲ್ಲಿ ಸ್ವಯಂ ಪ್ರೇರಿತ ತೆರಿಗೆ ಪಾವತಿಗೆ ಪ್ರೋತ್ಸಾಹ ನೀಡುತ್ತದೆ.
- ಉದ್ಯಮಗಳು ತೆರಿಗೆ ಪಾವತಿಸುವ ವ್ಯವಸ್ಥೆ ಸರಳವಾಗುತ್ತದೆ. ಪ್ರತಿಯೊಬ್ಬರಲ್ಲೂ ತೆರಿಗೆ ಬದ್ಧತೆ ಹೆಚ್ಚುತ್ತದೆ.
- ಉತ್ಪಾದನೆ ಮತ್ತು ವಿತರಣೆ ಹಂತಗಳಲ್ಲಿ ಪಾವತಿಸಿದ ತೆರಿಗೆ ಪ್ರಮಾಣವನ್ನು ಅಂತಿಮ ಹಂತದಲ್ಲಿ ಕಳೆಯಲು ಅವಕಾಶ ಇದೆ. (Read more: GST)
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications