For Quick Alerts
For Daily Alerts
ಇನ್ಫೋಸಿಸ್ ಗೆ ನಾರಾಯಣ ಮೂರ್ತಿ ಮರಳಿ ಬರುವರೆ?
ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಟಿ.ವಿ. ಮೋಹನ್ ದಾಸ್ ಪೈ ಅವರು ನಾರಾಯಣ ಮೂರ್ತಿಯವರು ನಿವೃತ್ತ ಅಧ್ಯಕ್ಷರಾಗಿ ಮರಳಿ ಬರುವುದನ್ನು ಸ್ವಾಗತಿಸಿದ್ದಾರೆ.
|
ನಾರಾಯಣ ಮೂರ್ತಿ ಮರಳಿ ಬರುವುದರಿಂದ ಬ್ರ್ಯಾಂಡ್ ಸುಧಾರಣೆಯಾಗಲಿದ್ದು, ಕಾರ್ಪೋರೇಟ್ ಆಡಳಿತ ಮತ್ತು ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಲಿದೆ ಎಂದಿದ್ದಾರೆ.
ದೇಶದ ಆದರ್ಶ ಉದ್ಯಮಿಗಳಾದ ಜೆ.ಆರ್.ಡಿ ಟಾಟಾ ಮತ್ತು ಧೀರೂಬಾಯಿ ಅಂಬಾನಿ ಅವರ ಸಾಲಿನಲ್ಲಿ ನಾರಾಯಣ ಮೂರ್ತಿಯವರು ನಿಲ್ಲುತ್ತಾರೆ. ಹೀಗಾಗಿ ಇನ್ಫೋಸಿಸ್ ಗೆ ನಿವೃತ್ತ ಅಧ್ಯಕ್ಷರಾಗಿ ಮರಳಬೇಕು ಎನ್ನುವುದು ನನ್ನ ವೈಯಕ್ತಿಕ ಬೆಂಬಲ ಎಂದಿದ್ದಾರೆ.
ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣಮೂರ್ತಿ ಯವರು ಸಂಸ್ಥೆಗೆ ಮರಳಿ ಬಂದಲ್ಲಿ ನಿರ್ದೇಶಕ ಮಂಡಳಿಯು ಅದನ್ನು ಖಂಡಿತವಾಗಿಯೂ ಪರಿಗಣಿಸಲಿದೆ ಎಂದು ಇನ್ಫೊಸಿಸ್ ಸಹ ಅಧ್ಯಕ್ಷ ರವಿ ವೆಂಕಟೇಶನ್ ಸ್ಪಷ್ಟಪಡಿಸಿದ್ದಾರೆ.
English summary
Bring back Narayana Murthy as Chairman Emeritus, says ex- CFO of Infosys
Story first published: Saturday, August 12, 2017, 13:17 [IST]