15ನೇ ಹಣಕಾಸು ಆಯೋಗ ರಚನೆಗೆ ಅನುಮೋದನೆ
ಕೇಂದ್ರ ಸಚಿವ ಸಂಪುಟ 15ನೇ ಹಣಕಾಸು ಆಯೋಗ ರಚನೆಗೆ ಅನುಮೋದನೆ ನೀಡಿದ್ದು, ಇದು ತೆರಿಗೆ ಸಂಪನ್ಮೂಲಗಳನ್ನು ಮೌಲ್ಯಮಾಪನ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವರಮಾನ ಹಂಚಿಕೆ ಸೂಚಿಸುತ್ತದೆ.
ಕೇಂದ್ರ ಸಚಿವ ಸಂಪುಟ 15ನೇ ಹಣಕಾಸು ಆಯೋಗ ರಚನೆಗೆ ಅನುಮೋದನೆ ನೀಡಿದ್ದು, ಇದು ತೆರಿಗೆ ಸಂಪನ್ಮೂಲಗಳನ್ನು ಮೌಲ್ಯಮಾಪನ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವರಮಾನ ಹಂಚಿಕೆ ಸೂಚಿಸುತ್ತದೆ.
ಆಯೋಗದ ಸದಸ್ಯರು ಮತ್ತು ಶಿಫಾರಸು ಮಾಡಬೇಕಾದ ನಿಬಂಧನಾ ವಿಷಯಗಳ ಕುರಿತು ಕಾಲಕಾಲಕ್ಕೆ ತಿಳಿಸಲಾಗುವುದು. 2020ರ ಏಪ್ರಿಲ್ 1ರ ಮುನ್ನ ಆಯೋಗವು ತನ್ನ ಶಿಫಾರಸುಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಹಣಕಾಸು ಆಯೋಗದ ಕುರಿತು
ಪ್ರತಿ ಐದು ವರ್ಷಕ್ಕೆ ಒಮ್ಮೆ ಸಂವಿಧಾನದ ಕಲಂ 280ರ ಅನ್ವಯ ಹಣಕಾಸು ಆಯೋಗ ರಚನೆ ಮಾಡಲಾಗುತ್ತದೆ. ಆಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ತೆರಿಗೆ ವರಮಾನವನ್ನು ಹಂಚಿಕೆ ಮಾಡುವ ನಿಬಂಧನೆ ಕುರಿತು ಮಾಹಿತಿ ಒದಗಿಸುತ್ತದೆ. ಇದು ವರದಿ ನೀಡಲು ಸಾಮಾನ್ಯವಾಗಿ 2 ವರ್ಷಗಳ ಕಾಲಾವಧಿ ತೆಗೆದುಕೊಳ್ಳುತ್ತದೆ. ಹಣಕಾಸು ಆಯೋಗ ಈ ಬಾರಿ ಜಿಎಸ್ಟಿಯ ಪರಿಣಾಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಹೂಡಿಕೆ ಯೋಜನೆ: ಭದ್ರ ಹೂಡಿಕೆ ಯೋಜನೆಯನ್ನು ರೂಪಿಸುವುದು ಹೇಗೆ?
2013ರ ಜನವರಿ ತಿಂಗಳಲ್ಲಿ 14ನೇ ಹಣಕಾಸು ಆಯೋಗವನ್ನು ರಚಿಸಲಾಗಿತ್ತು. 14ನೇ ಹಣಕಾಸು ಆಯೋಗದ ಶಿಫಾರಸು 2015ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ರವರೆಗೆ ಜಾರಿಯಲ್ಲಿರಲಿವೆ.