ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಕಟ್ಟಕಡೆಯ ಬಜೆಟ್ ಮಂಡಿಸಲಿದ್ದು, ಜನಪರ ಬಜೆಟ್ ಮಂಡಿಸಲಿದೆಯೇ, ಚುನಾವಣಾ ಬಜೆಟ್ ಮಂಡಿಸಲಿದೆಯೋ ಎಂದು ಇಡೀ ದೇಶವೇ ಚಕಿತದಿಂದ ನೋಡುತ್ತಿದೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅಮೆರಿಕಕ್ಕೆ ತೆರಳಿರುವುದರಿಂದ, ಅವರ ಅನುಪಸ್ಥಿತಿಯಲ್ಲಿ ಅವರ ಖಾತೆಯನ್ನು ನಿಭಾಯಿಸುತ್ತಿರು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 1ರಂದು ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.
ಭಾರತದ ಆರ್ಥಿಕ ಸ್ಥಿತಿ ಅಷ್ಟು ಬಲಿಷ್ಠವಾಗಿ ಇಲ್ಲದಿರುವುದರಿಂದ, ರೈತರು ಸಂಕಷ್ಟದಲ್ಲಿ ಸಿಲುಕಿರುವುದರಿಂದ, ಕಳೆದ ನಲವತ್ತೈದು ವರ್ಷಗಳಲ್ಲಿಯೇ ಉದ್ಯೋಗದ ಕೊರತೆ ಗರಿಷ್ಠವಾಗಿರುವುದರಿಂದ ಮತ್ತು ಅಪನಗದೀಕರಣ ಮತ್ತು ಜಿಎಸ್ಟಿ ಹೊಡೆತಕ್ಕೆ ಸಣ್ಣ ಉದ್ದಿಮೆದಾರರು ಒಳಗಾಗಿರುವುದರಿಂದ ಕೇಂದ್ರ ಸರಕಾರ ಯಾವ ರೀತಿಯ ಬಜೆಟ್ ಮಂಡಿಸಲಿದೆ ಎಂಬುದನ್ನು ಕುತೂಹಲದಿಂದ ಕಾಯುತ್ತಿದ್ದಾರೆ.

ಲೋಕಸಭೆ ಚುನಾವಣೆ ಕೇವಲ ನಾಲ್ಕು ತಿಂಗಳು ಇರುವಾಗ ಈ ಬಜೆಟ್ ಕೇಂದ್ರ ಸರಕಾರಕ್ಕೆ ಮತದಾರರನ್ನು ಓಲೈಸಲು ಅದ್ಭುತ ಅವಕಾಶ ಮಾಡಿಕೊಟ್ಟಿದ್ದರೆ, ಮೋದಿ ಸರಕಾರ ಜನಪರ ಬಜೆಟ್ ಮಂಡಿಸುವ ಬದಲು ಚುನಾವಣಾ ಬಜೆಟ್ ಮಂಡಿಸುತ್ತದೇನೋ ಎಂದು ವಿರೋಧ ಪಕ್ಷದ ಧುರೀಣರು ಎದುರು ನೋಡುತ್ತಿದ್ದಾರೆ.
ಅಲ್ಲದೆ, 2018 ಡಿಸೆಂಬರ್ ನಲ್ಲಿ ಪ್ರಕಟವಾದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವುದರಿಂದ, ಮತದಾರರನ್ನು ಮತ್ತೆ ಗಳಿಸಬೇಕಾದ ಸಾಕಷ್ಟು ಒತ್ತಡದಲ್ಲಿದೆ. ಆ ಚುನಾವಣೆಗಳಲ್ಲಿ ಗ್ರಾಮೀಣ ಜನರು ಮತ್ತು ರೈತಗಣ ಬಿಜೆಪಿಗೆ ಭಾರೀ ರೀತಿಯಲ್ಲಿ ಕೈಕೊಟ್ಟಿತ್ತು. ಅಲ್ಲದೆ, ಅಧಿಕಾರ ವಿರೋಧಿ ಅಲೆ ಕೂಡ ಆಡಿತಾರೂಢ ಬಿಜೆಪಿಗೆ ಮುಳುವಾಗಿತ್ತು.
ನರೇಂದ್ರ ಮೋದಿ ಸರಕಾರ ಈ ಬಜೆಟ್ಟಿನಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಶೇ.7.5ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ರೈಲ್ವೆ ಇಲಾಖೆ, ರಸ್ತೆ ಮತ್ತು ಬಂದರು ವಿಭಾಗದಲ್ಲಿಯೂ ಶೇ.7ರಿಂದ 8ರಷ್ಟು ಹೆಚ್ಚಿನ ಹಣವನ್ನು ವಿನಿಯೋಗಿಸುವ ಸಾಧ್ಯತೆಯಿದೆ. ಜಿಎಸ್ಟಿಯಿಂದಾಗಿ ಖರ್ಚುವೆಚ್ಚದಲ್ಲಿ ಸಾಕಷ್ಟು ಏರುಪೇರಾಗಿರುವುದರಿಂದ ಶ್ರೀಸಾಮಾನ್ಯರು, ಅದರಲ್ಲಿಯೂ ರೈತರು, ಗ್ರಾಮೀಣ ಜನತೆ, ಸಣ್ಣ ಉದ್ದಿಮೆದಾರರು ಮತ್ತು ಪ್ರಮುಖವಾಗಿ ತೆರಿಗೆದಾರರು ತಮಗೇನು ಸಿಗುತ್ತದೆ ಎಂದು ಕಾದು ಕುಳಿತಿದ್ದಾರೆ.
ಮಧ್ಯಂತರ ಕೇಂದ್ರ ಬಜೆಟ್ಟಿನ ಎಲ್ಲ ವಿವರಗಳನ್ನು ಲೈವ್ ಅಪ್ಡೇಟ್ಸ್ ಮೂಲಕ ಒನ್ಇಂಡಿಯಾ ಕನ್ನಡ ಮತ್ತು ಗುಡ್ ರಿಟರ್ನ್ಸ್ ಕನ್ನಡ ಓದುಗರಿಗೆ ಶುಕ್ರವಾರ ನೀಡಲಿದೆ. ಕ್ಷಣಕ್ಷಣದ ಮಾಹಿತಿ, ವಿಶ್ಲೇಷಣೆಗಳು, ಏರಿಕೆ ಇಳಿಕೆಗಳು, ಪ್ರತಿಕ್ರಿಯೆಗಳು, ರುಪಾಯಿ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ವಿನಿಯೋಗವಾಗಲಿದೆ ಇತ್ಯಾದಿ ಮಾಹಿತಿಗಾಗಿ ಈ ತಾಣ ನೋಡುತ್ತಿರೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications