ದಿವಾಳಿಯತ್ತ ಅನಿಲ್ ಅಂಬಾನಿ ರಿಲಯನ್ಸ್: ಷೇರು ಮೌಲ್ಯವೂ ಕುಸಿತ
ನವದೆಹಲಿ, ಫೆಬ್ರವರಿ 4: ಅತ್ತ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಉಳಿದ ದೂರಸಂಪರ್ಕ ಕಂಪೆನಿಗಳನ್ನು ಹಿಂದಿಕ್ಕಿ ಲಾಭದತ್ತ ನುಗ್ಗಿದ್ದರೆ, ಇತ್ತ ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಮ್ಯುನಿಕೇಷನ್ ದಿವಾಳಿಯಾಗುವ ಅಪಾಯಕ್ಕೆ ಸಿಲುಕಿದೆ.
42 ಸಾವಿರ ಕೋಟಿ ರೂಪಾಯಿ ಸಾಲದ ಹೊರೆಯಲ್ಲಿರುವ ಆರ್ಕಾಂ, ಮಾರುಕಟ್ಟೆಯಲ್ಲಿ ತನ್ನ ಷೇರುಗಳ ಮೌಲ್ಯಗಳನ್ನು ಸಹ ಕಳೆದುಕೊಂಡಿದೆ.
ಬಜೆಟ್ ನಂತರ ಚಿನ್ನ, ಬೆಳ್ಳಿ ಬೆಲೆ ಏರಿಕೆ
ಸುಮಾರು 40 ಕಂಪೆನಿಗಳಿಗೆ ಸಾಲ ಸಂದಾಯ ಮಾಡಬೇಕಿರುವ ಆರ್ಕಾಂ, ರಾಷ್ಟ್ರೀಯ ಕಂಪೆನಿ ಲಾ ನ್ಯಾಯಾಧಿಕರಣದಲ್ಲಿ ದಿವಾಳಿತನ ಕಾಯ್ದೆಯಡಿ ರಕ್ಷಣೆಯ ಮೊರೆ ಹೋಗಿದೆ.
ಗ್ರಾಹಕರಿಗೆ ಸಿಹಿಸುದ್ದಿ! ಎಲ್ಪಿಜಿ ಸಿಲಿಂಡರ್ ದರ ಇಳಿಕೆ
ಸಂಸ್ಥೆ ಈ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಆರ್ಕಾಂ ಷೇರು ಮೌಲ್ಯ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮಾರುಕಟ್ಟೆ ಅಂತ್ಯದ ವೇಳೆಗೆ 11.60 ರೂ. ಮೌಲ್ಯ ಹೊಂದಿದ್ದ ಆರ್ಕಾಂ, ಸೋಮವಾರ ಶೇ 34.9ರಷ್ಟು ಮೌಲ್ಯ ಕಳೆದುಕೊಂಡು 7.55 ರೂ.ಗೆ ಕುಸಿತ ಕಂಡಿತು.
ಬಜೆಟ್ 2019: ಸರಕಾರದ ಪ್ರತಿ ರುಪಾಯಿ ಆದಾಯ ಹಾಗೂ ಖರ್ಚು ಹೇಗೆ?
ಅನಿಲ್ ಅಂಬಾನಿ ಮಾಲೀಕತ್ವದ ಸ್ವತ್ತುಗಳ ಮಾರಾಟ ಮಾಡುವ ಮೂಲಕ ಸಾಲ ತೀರಿಸಲು ನಿಗದಿತ ಅವಧಿಯಲ್ಲಿ ಸಾಧ್ಯವಾಗಿಲ್ಲ.