ಬೆಂಗಳೂರು, ಮಾರ್ಚ್ 06 : ಭಾರತದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಅವರ ಸಂಬಳ ಶೇ.9.7ರಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಇನ್ನೇನಿದೆ?
ಇಷ್ಟು ಮಾತ್ರವಲ್ಲ, ಅತ್ಯುತ್ತಮ ಸಾಧನೆ ತೋರಿದ ನೌಕರರು ಶೇ.15.6ರವರೆಗೆ ಸಂಬಳ ಏರಿಕೆಯನ್ನು ನಿರೀಕ್ಷಿಸಬಹುದು. ಸಾಧನೆಯ ಅಳತೆಗೋಲು ಒಂದೊಂದು ಕಂಪನಿಯಲ್ಲಿ ಒಂದೊಂದು ರೀತಿಯಿರುತ್ತದೆ. ಕಳೆದ ವರ್ಷಕ್ಕಿಂತ ಈ ವರ್ಷ ಸಂಬಳ ಏರಿಕೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.
Aon ಎಂಬ ಮಾನವ ಸಂಪನ್ಮೂಲ ಕನ್ಸಲ್ಟನ್ಸಿ ಕಂಪನಿ, ವಾರ್ಷಿಕ ಸಂಬಳ ಏರಿಕೆ ಕುರಿತಂತೆ ಸಮೀಕ್ಷೆ ನಡೆಸಿದ್ದು, ಶೇ.9.7ರಷ್ಟು ಪಗಾರ ಏರುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಕಳೆದ ವರ್ಷ ವಿವಿಧ ಉದ್ಯಮಗಳಲ್ಲಿ ಶೇ.9.5ರಷ್ಟು ಸಂಬಳ ಏರಲಿದೆ ಎಂದು ಅಂದಾಜಿಸಲಾಗಿತ್ತು.

ದೇಶದಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿರುವುದರಿಂದ, ಹಣದುಬ್ಬರ ಇಳಿದಿರುವುದರಿಂದ ಹಲವಾರು ಕಂಪನಿಗಳಲ್ಲಿ ಉತ್ತಮ ವಹಿವಾಟು ನಡೆದು, ವ್ಯಾಪಾರದಲ್ಲಿ ಪ್ರಗತಿ ಕಂಡುಬಂದಿದೆ ಎಂದು ಸಮೀಕ್ಷೆ ತಿಳಿಸಿದೆ. ಈ ಕಾರಣದಿಂದಾಗಿ ವೈಯಕ್ತಿಕ ಸಾಧನೆಯ ಆಧಾರದ ಮೇಲೆ ಸಂಬಳ ಏರಿಕೆಯನ್ನು ನೌಕರರು ನಿರೀಕ್ಷಿಸಬಹುದು.
ಅಲ್ಲದೆ, ಸಾಧಾರಣ ಸಾಧನೆ ಮಾಡಿದ ನೌಕರ ಮತ್ತು ಅತ್ಯುತ್ತಮ ಸಾಧನೆ ತೋರಿದ ನೌಕರರ ನಡುವಿನ ಸಂಬಳ ಏರಿಕೆಯ ಪ್ರಮಾಣವೂ 1.9ರಷ್ಟು ಹೆಚ್ಚಿದೆ. ಅತ್ಯುತ್ತಮ ಸಾಧನೆ ತೋರಿದ ವ್ಯಕ್ತಿ ಅತೀಹೆಚ್ಚು ಅಂದರೆ, ಅಂದಾಜು ಶೇ.15.6ರಷ್ಟು ಸಂಬಳದಲ್ಲಿ ಏರಿಕೆ ಕಾಣಬಹುದು.
2017ರಲ್ಲಿ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯ ಅಳವಡಿಕೆಯಿಂದಾಗಿ ವ್ಯಾಪಾರ ತುಸು ಕುಸಿದು ಸಂಬಳ ಏರಿಕೆಯ ಮೇಲೂ ಪರಿಣಾಮ ಬೀರಿತ್ತು. ಆಗ ಶೇ.9.3ರಷ್ಟು ಮಾತ್ರ ಸಂಬಳ ಏರಿಕೆ ಆಗಿತ್ತು. ಇದೀಗ ಜಿಎಸ್ಟಿ ದರಗಳಲ್ಲಿ ಕೂಡ ಇಳಿಕೆ ಮಾಡಲಾಗಿರುವುದರಿಂದ ವ್ಯಾಪಾರದಲ್ಲಿಯೂ ಏರಿಕೆ ಕಂಡಿದೆ.
Aon ಪ್ರಕಾರ, ಒಂದಂಕಿ ಸಂಬಳ ಏರಿಕೆಗಿಂತ ಎರಡಂಕಿ ಸಂಬಳ ಏರಿಸಬಹುದಾದವು ಗ್ರಾಹಕ ಸೇವಾಧಾರಿತ ಇಂಟರ್ನೆಟ್ ಕಂಪನಿಗಳು, ವೃತ್ತಿಪರ ಸೇವಾ ಕಂಪನಿಗಳು, ಜೀವ ವಿಜ್ಞಾನ ಕಂಪನಿ, ಗ್ರಾಹಕ ಉತ್ಪನ್ನ, ಆಟೋಮೊಟೀವ್/ವಾಹನ ನಿರ್ಮಾಣ ಕಂಪನಿಗಳಲ್ಲಿ ನೌಕರರ ಸಂಬಳದಲ್ಲಿ ಹೆಚ್ಚಿನ ಏರಿಕೆ ಕಂಡುಬರಲಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications