ಅಯೋಧ್ಯೆ ರಾಮಮಂದಿರಕ್ಕೆ 52 ಲಕ್ಷ ರೂ. ದೇಣಿಗೆ ಕೊಟ್ಟ 14 ವರ್ಷದ ಬಾಲಕಿ ಭಾವಿಕಾ ಮಹೇಶ್ವರಿ

ಸೂರತ್‌, ಜನವರಿ 22: ಸೂರತ್‌ನ ಹದಿನಾಲ್ಕು ವರ್ಷದ ಬಾಲಕಿಯೊಬ್ಬಳು ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ 52 ಲಕ್ಷ ರೂ. ದೇಣಿಗೆ ನೀಡಿದ್ದಾಳೆ. ಸೂರತ್‌ ಭಾವಿಕಾ ಮಹೇಶ್ವರಿ ಅವರು ರಾಮ್ ಕಥಾಸ್ ನಡೆಸಿ ಸಂಗ್ರಹಿಸಿದ ಮೊತ್ತವನ್ನು ದೇಣಿಗೆ ನೀಡಿದ್ದಾಳೆ.

ಭಾವಿಕಾ 10 ನೇ ವಯಸ್ಸಿನಲ್ಲಿಯೇ ರಾಮ್ ಕಥಾಗಳನ್ನು ನಡೆಸಲು ಪ್ರಾರಂಭಿಸಿದವರು. ಅವರು ಅದನ್ನು 15 ಕ್ಕೂ ಹೆಚ್ಚು ಬಾರಿ ನಿರೂಪಿಸಿದ್ದಾರೆ. ಅವರು ಕೋವಿಡ್ ಐಸೋಲೇಶನ್ ಸೆಂಟರ್‌ಗಳು ಮತ್ತು ಲಾಜ್‌ಪೋರ್ ಜೈಲಿನಂತಹ ಹಲವಾರು ಸ್ಥಳಗಳಲ್ಲಿ ರಾಮ್ ಕಥಾಗಳನ್ನು ನಡೆಸಿದ್ದಾರೆ. ಕಥಾ ಸಂದರ್ಭದಲ್ಲಿ ಜೈಲಿನ ಕೈದಿಗಳು 1 ಲಕ್ಷ ರೂ. ನೀಡಿದ್ದಾರೆ. ಭಾವಿಕಾ ಮಹೇಶ್ವರಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು 'ಸಂಘಷ್ ಸೇ ಶಿಖರ್ ತಕ್' ಎಂಬ ಪುಸ್ತಕವನ್ನು ಬರೆದಿದ್ದಾರೆ.

ಅಯೋಧ್ಯೆ ರಾಮಮಂದಿರಕ್ಕೆ 52 ಲಕ್ಷ ರೂ. ದೇಣಿಗೆ ಕೊಟ್ಟ ಬಾಲಕಿ

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ:

ರಾಮಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಅಯೋಧ್ಯೆಗೆ ಆಗಮಿಸಿದ್ದಾರೆ. ಪ್ರಾಣ ಪ್ರತಿಷ್ಠಾ ಸಮಾರಂಭವು ಮಧ್ಯಾಹ್ನ 12:20 ಕ್ಕೆ ಪ್ರಾರಂಭವಾಗಿದೆ, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ನೂತನವಾಗಿ ನಿರ್ಮಿಸಲಾಗಿರುವ ದೇವಾಲಯದಲ್ಲಿ 51 ಅಡಿಯ ರಾಮಲಲ್ಲಾ ವಿಗ್ರಹವನ್ನು ಇಂದು ಪ್ರತಿಷ್ಠಾಪಿಸಲಾತ್ತದೆ.

ಮೋದಿಯವರು ರಾಮಲಲ್ಲಾ ವಿಗ್ರಹವನ್ನು ಅನಾವರಣಗೊಳಿಸುವ ಧಾರ್ಮಿಕ ಕ್ರಿಯೆಯನ್ನು ಮಾಡುತ್ತಾರೆ, ನಂತರ 'ಮಹಾ ಆರತಿ' ಮಾಡುತ್ತಾರೆ. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಗಾಯಕ ಸೋನು ನಿಗಮ್ ಅವರು 'ರಾಮ್ ಸಿಯಾ ರಾಮ್' ಹಾಡಿದ್ದಾರೆ.

ದೇಶಾದ್ಯಂತ ಇರುವ ಭಕ್ತರು ತಮ್ಮ ಮನೆಗಳಲ್ಲಿ ದೀಪಾಲಂಕಾರ ಮಾಡುವ ಮೂಲಕ ರಾಮಮಂದಿರ ಉದ್ಘಾಟನೆಯನ್ನು ದೀಪಾವಳಿಯಂತೆ ಆಚರಿಸುವಂತೆ ಮನವಿ ಮಾಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+