ಬೆಂಗಳೂರು, ಮಾರ್ಚ್ 17: ಕೆಲವು ಜನರು ಚಿಕ್ಕ ವಯಸ್ಸಿನಲ್ಲಿಯೇ ಸೋಲಿನ ಮತ್ತು ವೈಫಲ್ಯಗಳ ರುಚಿಯನ್ನು ನೋಡಿರುತ್ತಾರೆ. ಆದರ ಹೊರತಾಗಿಯೂ ಅವರು ಹೆಜ್ಜೆ ಮುಂದಿಟ್ಟು ಯಶ ಗಳಿಸುತ್ತಾರೆ. ಇದು ಅವರ ಜೀವನವನ್ನು ಸ್ಫೂರ್ತಿದಾಯಕ ಯಶಸ್ಸಿನ ಕಥೆಗಳಾಗಿ ಪರಿವರ್ತಿಸುತ್ತದೆ.
ಕಠಿಣ ಪರಿಶ್ರಮ ಮತ್ತು ನಿರಂತರ ಕೆಲಸದಲ್ಲಿ ನಂಬಿಕೆಯಿಟ್ಟು ಯಶ ಕಂಡ ವ್ಯಕ್ತಿ ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ನ ಅಧ್ಯಕ್ಷರಾದ 74 ವರ್ಷದ ಆರ್ಜಿ ಚಂದ್ರಮೊಗನ್. ಅವರು ಶಾಲೆ ಬಿಟ್ಟ ವಿದ್ಯಾರ್ಥಿಯಾಗಿ ಬಂಡಿಗಳಿಂದ ಐಸ್ಕ್ರೀಮ್ ಮಾರಾಟ ಮಾಡಲು ಪ್ರಾರಂಭಿಸಿದರು ಮತ್ತು ಈಗ ಭಾರತದ ಅತಿದೊಡ್ಡ ಖಾಸಗಿ ಡೈರಿ ಕಂಪನಿಗಳನ್ನು ಹೊಂದಿರುವ ವ್ಯಾಪಾರ ಉದ್ಯಮಿಯಾಗಿದ್ದಾರೆ.

ಚೆನ್ನೈನ ತಿರುತಂಗಲ್ ನಿವಾಸಿಯಾದ ಚಂದ್ರಮೊಗನ್ ಹಣಕಾಸಿನ ಸಮಸ್ಯೆಯಿಂದಾಗಿ ತನ್ನ ಶಾಲೆಯನ್ನು ತೊರೆದವರು. ಜೀವನಕ್ಕಾಗಿ ಅವರ ಕುಟುಂಬವು ತಮ್ಮ ಎಲ್ಲಾ ಆಸ್ತಿಯನ್ನು ಮಾರಾಟ ಮಾಡಿತ್ತು. ಅವರ ತಂದೆ ಒಂದು ಸಣ್ಣ ಪೂರೈಕೆ ಅಂಗಡಿಯನ್ನು ಹೊಂದಿದ್ದಾಗ ಚಂದ್ರಮೊಗನ್ ಅವರು ಟಿಂಬರ್ ಡಿಪೋದಲ್ಲಿ 65 ರೂ.ಗೆ ಕೆಲಸ ಮಾಡಲು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು. ನಂತರ 1970 ರಲ್ಲಿ ಅವರು ಆ ಕೆಲಸವನ್ನು ತೊರೆದರು ಮತ್ತು 250 ಚದರ ಅಡಿ ಕೊಠಡಿಯಲ್ಲಿ ಕೇವಲ ಮೂರು ಕಾರ್ಮಿಕರೊಂದಿಗೆ ಐಸ್ ಕ್ರೀಮ್ ವ್ಯಾಪಾರವನ್ನು ಸ್ಥಾಪಿಸಿದರು. ಆಗ ಅವರು ಕೇವಲ 13,000 ರೂಪಾಯಿಗಳನ್ನು ಹೂಡಿಕೆ ಮಾಡಿ 15 ತಳ್ಳುಗಾಡಿಗಳಲ್ಲಿ ಐಸ್ ಕ್ರೀಮ್ ಮಾರಾಟ ಆರಂಭಿಸಿದ್ದರು.
ಅವರ ಕಂಪನಿಯು ಆರಂಭಿಕ ತಿಂಗಳುಗಳಲ್ಲಿ ಬದುಕುಳಿಯಲು ಹೆಣಗಾಡುತ್ತಿತ್ತು. ಅದರೆ ಅದು ಮೊದಲ ವರ್ಷದಲ್ಲಿಯೇ ರೂ 1.5 ಲಕ್ಷಕ್ಕಿಂತ ಹೆಚ್ಚು ಗಳಿಸಿತು, ಚಂದ್ರಮೊಗನ್ಗೆ ಹಸಿರು ಚಾಲನೆ ನೀಡಿತು. 1981 ರಲ್ಲಿ ಐಸ್ ಕ್ರೀಮ್ ಉದ್ಯಮದ ಸೇವೆಯಲ್ಲಿನ ಅಂತರವನ್ನು ವಿಶ್ಲೇಷಿಸಿದ ನಂತರ ಚಂದ್ರಮೊಗನ್ ರೂಪಾಂತರದ ಹಂತವನ್ನು ತಲುಪಿದರು. ಸಣ್ಣ ನಗರಗಳ ಮಾರುಕಟ್ಟೆಯನ್ನು ತಲುಪುವ ಮಾಡುವ ಮೂಲಕ ಚಂದ್ರಮೊಗನ್ ಅವರು ತಮ್ಮ ಅರುಣ್ ಐಸ್ ಕ್ರೀಮ್ ಬ್ರ್ಯಾಂಡ್ ಅನ್ನು ತಮಿಳುನಾಡಿನ ಮಾರುಕಟ್ಟೆ ನಾಯಕರಾಗಿ ಹೊರಹೊಮ್ಮಿದರು. 1986 ರಲ್ಲಿ ಅವರು ತಮ್ಮ ಬ್ರ್ಯಾಂಡ್ ಹೆಸರನ್ನು ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ ಎಂದು ಬದಲಿಸಿದರು.
ಪ್ರಸ್ತುತ ಇದು ಭಾರತದ ಅತಿದೊಡ್ಡ ಖಾಸಗಿ ಡೈರಿ ಕಂಪನಿಗಳಲ್ಲಿ ಒಂದಾಗಿದೆ. ಇದು 20,000 ಕೋಟಿ ರೂ.ಗಳಷ್ಟು ದೊಡ್ಡ ಆದಾಯವನ್ನು ಗಳಿಸುತ್ತದೆ. ಫೋರ್ಬ್ಸ್ ಶ್ರೀಮಂತರ ಪಟ್ಟಿಯ ಪ್ರಕಾರ ಚಂದ್ರಮೊಗನ್ ಅವರ ನಿವ್ವಳ ಮೌಲ್ಯವು ರೂ 13,000 ಕೋಟಿ ($ 1.7 ಬಿಲಿಯನ್) ದಾಟಿದೆ. ಅವರ ಉತ್ಪನ್ನಗಳನ್ನು 42 ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಚಂದ್ರಮೋಗನ್ ಅವರ ಪುತ್ರ ಸಿ ಸತ್ಯನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications