ನವದೆಹಲಿ, ಏಪ್ರಿಲ್ 1: ಅಧಿಕ ವೇತನದ ಉದ್ಯೋಗ ಪಡೆಯುವುದು ಎಲ್ಲರಿಂದಲೂ ಆಗುವುದಿಲ್ಲ. ಆದರೆ ಐಐಎಂ, ಐಐಟಿಗಳಿಂದ ಪದವಿ ಪಡೆದ ಜನರು ಸಾಮಾನ್ಯವಾಗಿ ಉತ್ತಮ ಸಂಬಳದ ನೌಕರಿಗಳನ್ನು ಪಡೆಯುತ್ತಾರೆ. ಆದರೆ ಇಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಓದದಿದ್ದರೂ ಕೆಲವರು ಕೋಟಿಗಟ್ಟಲೆ ವೇತನದ ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಟ್ಯಾಲೆಂಟ್ ಡಿಕ್ರಿಪ್ಟ್ನ ಸಂಸ್ಥಾಪಕಿ ಮತ್ತು ಸಿಇಒ ಅರುಷಿ ಅಗರ್ವಾಲ್. ಅವರು ತನ್ನ ಸ್ವಂತ ಸಂಸ್ಥೆಯನ್ನು ಪ್ರಾರಂಭಿಸಲು 1 ಕೋಟಿ ರೂಪಾಯಿ ಆಫರ್ನ ಉದ್ಯೋಗವನ್ನು ತಿರಸ್ಕರಿಸಿದವರು.

2020 ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅರುಷಿ ಅವರು ಕೇವಲ 1 ಲಕ್ಷ ರೂಪಾಯಿಯೊಂದಿಗೆ ತನ್ನ ಉದ್ಯಮ ಪ್ರಯಾಣವನ್ನು ಪ್ರಾರಂಭಿಸಿದರು. ಅರುಷಿ ಅಗರ್ವಾಲ್ ಅವರು ಜೇಪೀ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಿಂದ ಬಿಟೆಕ್ ಹಾಗೂ ಎಂಟೆಕ್ ಪದವಿ ಪಡೆದಿದ್ದಾರೆ. ಅವರು ಕಾಲೇಜಿನಲ್ಲಿ ಓದುತ್ತಲೇ ಐಐಟಿ ದೆಹಲಿಯಿಂದ 3 ತಿಂಗಳ ಇಂಟರ್ನ್ಶಿಪ್ ಕೂಡ ಮಾಡಿದರು.
2021 ರಲ್ಲಿ ಅವರು ಐಐಎಂ ಬೆಂಗಳೂರಿನಿಂದ ತಮ್ಮ ಕಾರ್ಯನಿರ್ವಾಹಕ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು. ಕ್ಯಾಂಪಸ್ ಪ್ಲೇಸ್ಮೆಂಟ್ ಪಡೆಯದವರಿಗೆ ಸಹಾಯ ಮಾಡಲು ಅವಳು ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಿ ತನ್ನದೇ ಆದ ಟ್ಯಾಲೆಂಟ್ ಡೀಕ್ರಿಪ್ಟ್ ಅನ್ನು ಪ್ರಾರಂಭಿಸಿದರು. ವರದಿ ಪ್ರಕಾರ ಆಕೆಯ ಸಂಸ್ಥೆಯು 50 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ತಿಳಿದು ಬಂದಿದೆ.
ಟ್ಯಾಲೆಂಟ್ ಡೀಕ್ರಿಪ್ಟ್ ಅಡಿಯಲ್ಲಿ ಉದ್ಯೋಗಾಕಾಂಕ್ಷಿಗಳು ಹ್ಯಾಕಥಾನ್ ಮೂಲಕ ವರ್ಚುವಲ್ ಸ್ಕಿಲ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಇದರ ನಂತರ ಅವರು ನೇರವಾಗಿ ಉದ್ಯೋಗಕ್ಕಾಗಿ ಸಂದರ್ಶನಗಳಲ್ಲಿ ಪಾಲ್ಗೊಳ್ಳಬಹುದು. ಸಂಸ್ಥೆಯು ಈಗ ವಿಶ್ವದಾದ್ಯಂತ 10 ಲಕ್ಷ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ.
ಅರುಷಿ ಅಗರ್ವಾಲ್ ಸದ್ಯ ಘಾಜಿಯಾಬಾದ್ನ ನೆಹರು ನಗರದಲ್ಲಿ ನೆಲೆಸಿದ್ದಾರೆ. ಮೂಲತಃ ಅವರು ಮೊರಾದಾಬಾದ್ಗೆ ಸೇರಿದವರು. ಅರುಷಿ 28 ವರ್ಷ ವಯಸ್ಸಿನ ಯುವ ಉದ್ಯಮಿಯಾಗಿದ್ದು, ತನ್ನ ಅಜ್ಜನನ್ನು ತನ್ನ ಆರಾಧ್ಯ ದೈವವೆಂದು ಪರಿಗಣಿಸಿದ್ದಾರೆ. ಅರುಷಿ ತಂದೆ ಅಜಯ್ ಗುಪ್ತಾ ಉದ್ಯಮಿ ಮತ್ತು ತಾಯಿ ಗೃಹಿಣಿ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications