ಕೃತಕ ಬುದ್ಧಿಮತ್ತೆ..ಅಂದರೆ Artificial intelligence (AI)..ಈ ತಂತ್ರಜ್ಞಾನ ಜಗತ್ತಿನೆಲ್ಲೆಡೆ ವ್ಯಾಪಿಸಿದೆ. ಎಐ ಇಲ್ಲದೇ ಎಲ್ಲ ಕೆಲಸವೂ ಅಪೂರ್ಣವಾಗುತ್ತದೆಯೋ ಎಂಬಷ್ಟು ಭಾಸವಾಗುತ್ತಿದೆ. ಈ ತಂತ್ರಜ್ಞಾನ ಎಷ್ಟು ಪ್ರಯೋಜನಕಾರಿಯಾಗಿದೆ ಎಂದರೆ, ಎಲ್ಲವನ್ನೂ ತ್ವರಿತವಾಗಿ ಒದಗಿಸಿಬಿಡುತ್ತದೆ. ಎಲ್ಲ ಕೆಲಸವನ್ನೂ ಮನುಷ್ಯರಿಗಿಂತ ಅಚ್ಚುಕಟ್ಟಾಗಿ ಮಾಡುತ್ತದೆ. ಇದೆಷ್ಟು ಉತ್ತಮ ಎಂಬುದಕ್ಕೆ ಡಚ್ ಟೆಕ್ ಉದ್ಯಮಿ ಪೀಟರ್ ಲೆವೆಲ್ಸ್ ಎಂಬುವರ ಸಾಧನೆಯೇ ಉದಾಹರಣೆಯಾಗುತ್ತದೆ. ಅಂದರೆ ಪೀಟರ್ ಲೆವೆಲ್ಸ್ ಅವರು, AI ಪರಿಕರಗಳನ್ನು ಬಳಸಿ ತನ್ನ 1 ಮಿಲಿಯನ್ ಡಾಲರ್ ವ್ಯವಹಾರವನ್ನು ನಿರ್ಮಿಸಿದ್ದಾರೆ.

ಹೌದು, ಇತ್ತೀಚೆಗೆ ಪೀಟರ್ ತನ್ನ AI-ಚಾಲಿತ ಫ್ಲೈಟ್ ಸಿಮ್ಯುಲೇಟರ್ ಗೇಮ್ ಮೂಲಕ ಇಂಟರ್ನೆಟ್ನ ಗಮನ ಸೆಳೆದಿದ್ದಾರೆ. ಈ ಗೇಮ್ ಕೇವಲ 17 ದಿನಗಳಲ್ಲಿ ವಾರ್ಷಿಕ ಪುನರಾವರ್ತಿತ ಆದಾಯ ನೀಡಿದೆ. ಅಂದರೆ ಬರೋಬ್ಬರಿ1 ಮಿಲಿಯನ್ ಡಾಲರ್ನ ತಲುಪಿದೆ.
38 ವರ್ಷದ ಉದ್ಯಮಿಯಾದ ಪೀಟರ್ ತಮ್ಮ ಯೋಜನೆಗಳನ್ನು ಅಭಿವೃದ್ಧಿಪಡಿಸಲು AI-ಚಾಲಿತ ಯಾಂತ್ರೀಕೃತ ಮತ್ತು ನೋ-ಕೋಡ್ ಪರಿಕರಗಳನ್ನು ಬಳಸುತ್ತಾರೆ. ಹೀಗಾಗಿ ಇವರು AI ಯೋಜನೆಗಳನ್ನು ರಚಿಸುವುದರಲ್ಲಿ ಮತ್ತು ಬಹು ಯಶಸ್ವಿ ವ್ಯವಹಾರಗಳನ್ನು ಆರಂಭಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಹೊಸ ಉದ್ಯಮವಾದ fly.pieter.comಅನ್ನು AI ಕೋಡಿಂಗ್ ಪರಿಕರಗಳನ್ನು ಬಳಸಿ ನಿರ್ಮಿಸಿದ್ದರು. ಇದು ಬ್ರೌಸರ್ ಆಧಾರಿತ AI-ಚಾಲಿತ ಫ್ಲೈಟ್ ಸಿಮ್ಯುಲೇಟರ್ ಆಗಿದ್ದು, ಇದು ಈಗ 1 ಮಿಲಿಯನ್ ಡಾಲರ್ ವ್ಯವಹಾರವಾಗಿದೆ.
ಪೀಟರ್ ಲೆವೆಲ್ಸ್ಗೆ ಮಾಸಿಕ ಹಿಂತಿರುಗುವ ಆದಾಯ 87 ಸಾವಿರ ಡಾಲರ್ಗಳು. ಇದು ವಾರ್ಷಿಕ ಪುನರಾವರ್ತಿತ ಆದಾಯ 1 ಮಿಲಿಯನ್ ಡಾಲರ್ಗಿಂತಲೂ ಹೆಚ್ಚು. ಆದರೆ ಎಐ ತಂತ್ರಜ್ಞಾನದಿಂದ ಈಗ ಕೇವಲ 17 ದಿನಗಳಲ್ಲಿ ಸೊನ್ನೆಯಿಂದ 1 ಮಿಲಿಯನ್ ಡಾಲರ್ಗೆ ಆದಾಯ ಎರಿಕೆಯಾಗಿದೆ. ಅಲ್ಲದೇ ಅವರು ಶೀಘ್ರದಲ್ಲೇ ತಮ್ಮ ವ್ಯವಹಾರದ ಗುರಿಯನ್ನು, ತಿಂಗಳಿಗೆ ತಿಂಗಳಿಗೆ $100,000 ತಲುಪುವ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಈ ಫ್ಲೈಟ್ ಸಿಮ್ಯುಲೇಟರ್ ಆಟಕ್ಕೆ ಸಹಾಯವಾಗಿದ್ದು Three.js ಮತ್ತು Cursorನಂತಹ AI-ಚಾಲಿತ ಪರಿಕರಗಳು. ಅಂದರೆ ಈ ಪರಿಕರಗಳನ್ನು ಬಳಸಿಕೊಂಡು, ಪೀಟರ್ ಈ ಫ್ಲೈಟ್ ಸಿಮ್ಯುಲೇಟರ್ ಅನ್ನು ರಚಿಸಿದ್ದಾರೆ. ಕೇವಲ ಮೂರು ಗಂಟೆಗಳಲ್ಲಿ ಆರಂಭಿಕ ಆವೃತ್ತಿಯನ್ನು ತಯಾರಿಸಿದ್ದಾರೆ. ಈ ಗೇಮ್ F-16, ಸೆಸ್ನಾ 172, A-10 ವಾರ್ಥಾಗ್, SAM ಟ್ಯಾಂಕ್, ಏಲಿಯನ್ ಟ್ರಯಾಂಗಲ್, ಮತ್ತು ಬಜೂಕಾ ಹೊಂದಿರುವ ವಿವಿಧ ವಿಮಾನಗಳನ್ನು ಆಯ್ಕೆ ನೀಡುತ್ತದೆ. ಪ್ರತಿಯೊಂದು ವಿಮಾನವು ತನ್ನದೇ ಆದ ವಿಶೇಷ ಗುಣಲಕ್ಷಣಗಳನ್ನು ಹೊಂದಿದೆ, ಹಾಗು ಇದು ವೇಗ, ಎತ್ತರ, ಮತ್ತು ಫೈರ್ಪವರ್ನಿಂದ ವಿಭಿನ್ನವಾಗುತ್ತದೆ.
ಅಂದಹಾಗೆ ಈ ಎಐ ತಂತ್ರಜ್ಞಾನ ಎಷ್ಟು ಉತ್ತಮವೋ ಇದರಿಂದ ಅಷ್ಟೇ ದೊಡ್ಡ ದುಷ್ಪರಿಣಾಮ ಇದೆ. ಅದು ಹೇಗೆ ಅಂದರೆ ಇತ್ತೀಚೆಗೆ ತಂತ್ರಜ್ಞಾನ ಕಂಪನಿಗಳು ತಮ್ಮ ವೆಚ್ಚ ಕಡಿಮೆ ಮಾಡಿಕೊಳ್ಳಲು, ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅದರಂತೆ ಎಐ ತಂತ್ರಜ್ಞಾನ ಬೆಳವಣಿಗೆ ಕಂಡಷ್ಟು ಇದು ಉದ್ಯೋಗವಕಾಶಗಳ ಮೇಲೆ ದುಷ್ಟಪರಿಣಾಮ ಬೀರುತ್ತದೆ. ಮನುಷ್ಯರು ಮಾಡುವ ಎಲ್ಲಾ ಕೆಲಸಗಳನ್ನು ಎಐ ತಂತ್ರಜ್ಞಾನ ಮಾಡಿದರೆ ಉದ್ಯೋಗಿಗಳು ನಿರುದ್ಯೋಗಿಗಳಾಗಬೇಕಾಗುತ್ತದೆ. AI ಬಳಸಿ ಬಿಸಿನೆಸ್ ಕಾರ್ಯಗಳನ್ನು ಸಧಾರಣಗೊಳಿಸುವುದರಿಂದ ಉದ್ಯೋಗಗಳಲ್ಲಿ ಕೆಲವು ಬದಲಾವಣೆಗಳು ಮತ್ತು ಸವಾಲುಗಳು ಉಂಟಾದಿವೆ. ಇಲ್ಲಿವೆ ಕೆಲವೊಂದು ಪ್ರಮುಖ ಪ್ರಭಾವಗಳು:
ಉದ್ಯೋಗಕ್ಕೆ ಕೊಡಲಿ:
AI ತಂತ್ರಜ್ಞಾನಗಳು ಸ್ವಯಂಚಾಲಿತ ಮಾಡಿರುವುದರಿಂದ, ಅನೇಕ ಉದ್ಯೋಗಗಳು ಇಲ್ಲವೆ ನೀರಸವಾಗುತ್ತಿವೆ. ಉದಾಹರಣೆಗೆ, ಕಾರ್ಖಾನೆಗಳಲ್ಲಿ ಮತ್ತು ಸ್ಟೋರ್ನಲ್ಲಿ ಕಾರ್ಯನಿರ್ವಹಿಸುವ ಕೆಲಸಗಳು, ಲೋಡ್-ಅಂಡ್-ಅನ್ಲೋಡ್ ಕಾರ್ಯಗಳು, ಕ್ಲಿನಿಂಗ್, ಮತ್ತು ಗ್ರಾಹಕ ಸೇವೆಗಳಲ್ಲಿ ಹೆಚ್ಚಿನ ಕೆಲಸಗಳು AI ಅಥವಾ ರೋಬೋಟ್ಗಳಿಗೆ ಹೊರಹಾಕಲ್ಪಟ್ಟಿವೆ. ಇದು ಮಾನವನಿಗೆ ಕೆಲಸದ ಅವಕಾಶಗಳನ್ನು ಕಡಿಮೆ ಮಾಡಬಹುದು.
ಆರ್ಥಿಕ ಅಸ್ಥಿರತೆ:
AI ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಉದ್ಯಮಗಳು ಹೆಚ್ಚಿನ ಹಣವನ್ನು ಹೂಡುತ್ತಿರುವಾಗ, ಕೆಲವೊಂದು ಕಾರ್ಮಿಕ ವರ್ಗಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲು ಸಾಧ್ಯವಿದೆ. ಈ ಪ್ರಕ್ರಿಯೆ ಆರ್ಥಿಕ ಅಸ್ಥಿರತೆಗೆ ಕಾರಣವಾಗಬಹುದು, ಏಕೆಂದರೆ ಕೆಲವು ಉದ್ಯೋಗಿಗಳು ಇನ್ನೂ ತಂತ್ರಜ್ಞಾನದಲ್ಲಿ ನಿಪುಣರಾಗಿರಲು ಸಿದ್ಧರಾಗಿಲ್ಲ. ಅಲ್ಲದೇ ಅವರ ಆರ್ಥಿಕ ಸ್ಥಿತಿಯೂ ಕುಂದು ಹೋಗುತ್ತದೆ. ಇದರಿಂದ ಜೀವನ ನಡೆಸಲು ಕಷ್ಟಸಾಧ್ಯವಾಗುತ್ತದೆ.
ಮಾನವನ ಕೌಶಲ್ಯ ಕಲಿಕೆಗೂ ಕೊಡಲಿ:
AI ಯಂತ್ರಗಳು ಸಾಮಾನ್ಯವಾಗಿ ನಿಖರವಾದ ಕೆಲಸಗಳನ್ನು, ಗಣಿತೀಯ ತರ್ಕವನ್ನು ಮತ್ತು ಕೆಲಸವನ್ನು ಸರಳಗೊಳಿಸುವುದನ್ನು ಉತ್ತಮವಾಗಿ ನಿರ್ವಹಿಸುತ್ತವೆ. ಆದರೆ, ನಿರ್ಧಾರಗಳನ್ನು ಮಾಡಲು, ರಚನಾತ್ಮಕ ಚಿಂತನೆಗಳು, ನಿರ್ವಹಣೆ, ಮತ್ತು ಆತ್ಮವಿಶ್ವಾಸಗಳನ್ನು ಬಳಸುವ ಮಾನವನ ಕೌಶಲ್ಯಗಳು ಕಡಿಮೆಯಾಗಬಹುದು. ಆಗ ಎಲ್ಲಾ ಕೆಲಸವೂ ಯಂತ್ರಾಧಾರಿತವಾಗುತ್ತವೆ.
ಜವಾಬ್ದಾರಿ ಕೊರತೆ:
AI ಯಂತ್ರಗಳು ದೋಷಗಳನ್ನು ಮಾಡಿದರೆ, ಅವುಗಳಿಗೆ ಹೊಣೆಗಾರಿಕೆ ಒತ್ತಡವಾಗುವುದಿಲ್ಲ. ಸ್ವಯಂಚಾಲಿತ ವಾಹನಗಳು ಅಪಘಾತಗಳನ್ನು ಮಾಡುವಾಗ, ಅದರ ಹಿಂದೆ ಇರುವ ಪ್ರೋಗ್ರಾಮಿಂಗ್ ಅಥವಾ ಕಂಪನಿ ಯಾವ ನಿಟ್ಟಿನಲ್ಲಿ ಹೊಣೆಗಾರಿಯಾಗುತ್ತದೆ ಎನ್ನುವುದು unclear ಆಗಿರಬಹುದು. ಇದರಿಂದ ಪ್ರತಿಫಲಗಳು ಮತ್ತು ಅಸಮಾಧಾನ ಸಂಭವಿಸಬಹುದು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications