ಈ ವಾರ ಇಂಡಿಗೋ ಏರ್ಲೈನ್ಸ್ ಸಮಸ್ಯೆಯಿಂದ ಸಾವಿರಾರು ಪ್ರಯಾಣಿಕರು ಅದೆಷ್ಟು ನೋವು ಅನುಭವಿಸಿದರು, ಅದೆಷ್ಟು ಸಮಸ್ಯೆ ಎದುರಿಸಿದರು ಅನ್ನೋದನ್ನ ಬರೀ ಬಾಯಿ ಮಾತಲ್ಲಿ ಹೇಳೋಕಾಗಲ್ಲ. ಕ್ಯಾನ್ಸಲ್ ಆಗಿದ್ದು ಕೇವಲ ವಿಮಾನವಲ್ಲ, ಅದೆಷ್ಟೋ ಜನರ ಕನಸು ಕೂಡ ಎನ್ನಬಹುದು. ಅದೆಷ್ಟೋ ಜನರಿಗೆ ಇದು ಅತಿ ಮುಖ್ಯವಾದ ಪ್ರಯಾಣವಾಗಿತ್ತು. ಇನ್ನೆಷ್ಟೋ ಜನರಿಗೆ ಬದುಕಿನ ಹೊಸ ಆಯಾಮದ ದಾರಿಯಾಗಿತ್ತು. ಹೊಸ ಗುರಿಯ ಮೆಟ್ಟಿಲಾಗಿತ್ತು. ಆದರೆ ಅದೆಲ್ಲ ಒಮ್ಮೆಲೇ ಛಿದ್ರವಾಯಿತು ಎಂದರೆ ತಪ್ಪಾಗಲ್ಲ. ಇಂತಹ ಒಂದು ಸಮಸ್ಯೆಯ ಹಿನ್ನೆಲೆ, ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್ಪ್ರೆಸ್ ಶನಿವಾರ ಪ್ರಯಾಣಿಕರ ಅನಾನುಕೂಲತೆಯನ್ನು ಕಡಿಮೆ ಮಾಡಲು ಹಲವಾರು ತುರ್ತು ಕ್ರಮಗಳನ್ನು ಜಾರಿಗೆ ತಂದಿವೆ. ಅವುಗಳೇನೆಂದು ಇಲ್ಲಿ ತಿಳಿಯಿರಿ.

ಏರ್ ಇಂಡಿಯಾ ತೆಗೆದುಕೊಂಡ ಈ ನಿರ್ಧಾರದಿಂದ, ಪ್ರಯಾಣಿಕರಿಗೆ ಅನುಕೂಲದ ದಾರಿ ತೆರೆದಿದೆ. ಅಂದರೆ ಟಿಕೆಟ್ ದರಗಳು ಮಿತಿಗೊಂಡವು, ಹೆಚ್ಚುವರಿ ವಿಮಾನಗಳ ಅನುಕೂಲತೆ ಸಿಕ್ಕಿತು, ವಿನಾಯಿತಿ ಶುಲ್ಕ ಹಾಗೂ ತಾತ್ಕಾಲಿಕ ಅಪ್ಗ್ರೇಡ್ಗಳು ಸೇರಿದಂತೆ ಹಲವು ಕ್ರಮಗಳು ಈಗ ಜಾರಿಯಲ್ಲಿವೆ.
ಇನ್ನು ಎದುರಾದ ಹಲವು ಸಮಸ್ಯೆಗಳಿಂದ ಪ್ರಯಾಣದ ಬೇಡಿಕೆ ಹೆಚ್ಚಿದ್ದಂತೂ ಸತ್ಯ. ಹೀಗಾಗಿ ಟಿಕೆಟ್ ದರಗಳು ಸ್ವಯಂಚಾಲಿತವಾಗಿ ಏರಿಕೆಯಾಗದಂತೆ ನೋಡಿಕೊಳ್ಳಲು, ಡಿಸೆಂಬರ್ 4ರಿಂದಲೇ ಎಲ್ಲಾ ನೇರ ದೇಶೀಯ ಮಾರ್ಗಗಳಲ್ಲಿ ಎಕಾನಮಿ ಕ್ಲಾಸ್ಗೆ ದರ ಮಿತಿ ಜಾರಿಗೊಳಿಸಲಾಗಿದೆ. ಡಿಸೆಂಬರ್ 6ರಂದು ನಾಗರಿಕ ವಿಮಾನಯಾನ ಸಚಿವಾಲಯ (MoCA) ನೀಡಿದ ನಿರ್ದೇಶನವನ್ನು ಅನುಸರಿಸಿ, ಎರಡೂ ವಿಮಾನಯಾನ ಸಂಸ್ಥೆಗಳು ಈಗ ತಮ್ಮ ಬುಕಿಂಗ್ ವ್ಯವಸ್ಥೆಗಳನ್ನು ಹೊಸ ದರ ಮಿತಿಗೆ ಹೊಂದಿಸುತ್ತಿವೆ.
ಸದ್ಯ ಏರ್ ಇಂಡಿಯಾ ಎಕ್ಸ್ಪ್ರೆಸ್ ಈಗಾಗ್ಲೇ ಈ ಬದಲಾವಣೆಯನ್ನು ಸಂಪೂರ್ಣಗೊಳಿಸಿದೆ. ಹೀಗೆಯೇ ಏರ್ ಇಂಡಿಯಾ ತನ್ನ ವ್ಯವಸ್ಥೆಯಲ್ಲಿ ಹಂತ ಹಂತವಾಗಿ ದರ ನಿಗದಿ ಬದಲಾವಣೆಯನ್ನ ಕೂಡ ಜಾರಿಗೆ ತರುತ್ತಿದೆ. ಸಿಸ್ಟಮ್ ಮೂರನೇ ಪಕ್ಷದ ತಂತ್ರಜ್ಞಾನ ಜೋಡಣೆ ಇದೆ. ಇದರಿಂದ ತಪ್ಪುಗಳಾಗದೇ ಬುಕಿಂಗ್ಗಳಿಗೂ ಅಡ್ಡಿಯಾಗದೇ ಇರುವಂತೆ ನಿಧಾನವಾಗಿ ಅಪ್ಡೇಟ್ ಮಾಡಲಾಗುತ್ತಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಈಗಾಗಲೇ ಈ ಪರಿವರ್ತನೆಯನ್ನು ಪೂರ್ಣಗೊಳಿಸಿದರೆ, ಏರ್ ಇಂಡಿಯಾ ತನ್ನ ವ್ಯವಸ್ಥೆಗಳಲ್ಲಿ ಹಂತ ಹಂತವಾಗಿ ದರ ನಿಗದಿ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಸಿಸ್ಟಮ್ಗಳಲ್ಲಿ ಮೂರನೇ ಪಕ್ಷದ ತಂತ್ರಜ್ಞಾನ ಜೋಡಣೆ ಇರುವುದರಿಂದ, ತಪ್ಪುಗಳು ಆಗದೇ, ಬುಕಿಂಗ್ಗಳಿಗೆ ಅಡ್ಡಿಯಾಗದೇ ಇರುವಂತೆ ನಿಧಾನವಾಗಿ ಅಪ್ಡೇಟ್ ಮಾಡಲಾಗುತ್ತಿದೆ.
ಪ್ರಯಾಣಿಕರಿಗೆ ಸಹಾಯವಾಗುವಂತೆ, ಡಿಸೆಂಬರ್ 4ರ ಒಳಗೆ ಡಿಸೆಂಬರ್ 15ರವರೆಗೆ ಪ್ರಯಾಣಕ್ಕೆ ಮಾಡಿದ ಬುಕಿಂಗ್ಗಳಿಗೆ ಒಂದು ಬಾರಿ ವಿಶೇಷ ಶುಲ್ಕ ವಿನಾಯಿತಿ ನೀಡಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಉಚಿತವಾಗಿ ಮರು ನಿಗದಿಪಡಿಸಬಹುದು ಅಥವಾ ಡಿಸೆಂಬರ್ 8ರೊಳಗೆ ಬದಲಾವಣೆ ಮಾಡಿದರೆ ಯಾವುದೇ ರದ್ದತಿ ಶುಲ್ಕವಿಲ್ಲದೆ ಪೂರ್ಣ ಮರುಪಾವತಿ ಪಡೆಯಬಹುದು. ಆದರೆ, ಅನ್ವಯಿಸುವ ದರ ವ್ಯತ್ಯಾಸಗಳು ಇದ್ದರೆ ಅವು ಮಾತ್ರ ಜಾರಿಗೆ ಬರಲಿವೆ.
ಬುಕಿಂಗ್ ಮರು ನಿಗದಿಪಡಿಸಲು ಅಥವಾ ರದ್ದುಗೊಳಿಸಲು ಬಯಸುವವರು 24x7 ಸಂಪರ್ಕ ಕೇಂದ್ರಗಳು, ಟ್ರಾವೆಲ್ ಏಜೆಂಟ್ಗಳು ಅಥವಾ 'ಟಿಯಾ' ಎಂಬ ಚಾಟ್ಬಾಟ್ (ವಾಟ್ಸಾಪ್, ವೆಬ್ಸೈಟ್, ಅಪ್ಲಿಕೇಶನ್, ಫೇಸ್ಬುಕ್ ಮೆಸೆಂಜರ್) ಮೂಲಕ ಸುಲಭವಾಗಿ ಸೇವೆಯನ್ನು ಪಡೆಯಬಹುದು.
ಕರೆಗಳ ಪ್ರಮಾಣ ಹೆಚ್ಚುತ್ತಿರುವುದರಿಂದ, ಎರಡೂ ವಿಮಾನಯಾನ ಸಂಸ್ಥೆಗಳು ತಮ್ಮ ಕಾಲ್ ಸೆಂಟರ್ಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿವೆ.
ಏರ್ ಇಂಡಿಯಾ ಸಂಪರ್ಕ ಸಂಖ್ಯೆ: +91 11 6932 9333
ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಪರ್ಕ ಸಂಖ್ಯೆ: +91 124 443 5600 / +91 124 693 5600
ಪ್ರಯಾಣಿಕರು ಸಿಕ್ಕಿಬಿಡದಂತೆ ನೋಡಿಕೊಳ್ಳಲು, ಪ್ರಮುಖ ಮಾರ್ಗಗಳಲ್ಲಿ ಹೆಚ್ಚುವರಿ ವಿಮಾನಗಳನ್ನು ಸೇರಿಸಲಾಗುತ್ತಿದೆ. ಜೊತೆಗೆ, ಸಾಧ್ಯವಾದಲ್ಲಿ ಎಕಾನಮಿ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕವಿಲ್ಲದೆ ಮೇಲಿನ ಕ್ಯಾಬಿನ್ಗಳಿಗೆ ತಾತ್ಕಾಲಿಕ ಅಪ್ಗ್ರೇಡ್ ನೀಡಲಾಗುತ್ತದೆ, ಇದರಿಂದ ಆಗಿರುವ ಅಟ್ಟಳಿಕೆಯನ್ನು ಕಡಿಮೆ ಮಾಡಬಹುದು.
ಇದೇ ಸಂದರ್ಭದಲ್ಲಿ, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸಶಸ್ತ್ರ ಪಡೆಯ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ವಿಮಾನಯಾನ ಸಂಸ್ಥೆಗಳ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ಗಳಲ್ಲಿ ವಿಶೇಷ ರಿಯಾಯಿತಿಗಳು ಮುಂದುವರಿಯಲಿವೆ.
ಈ ಹೊಸ ಕ್ರಮಗಳಿಂದ ದೇಶಾದ್ಯಂತ ಇರುವ ಪ್ರಯಾಣಿಕರಿಗೆ ಈಗಿನ ಅಡಚಣೆಯ ನಡುವೆ ಸ್ವಲ್ಪ ಮಟ್ಟಿಗೆ ಸಹಾಯವಾಗುವ ನಿರೀಕ್ಷೆಯಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications