ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ನೂರಾರು ಮಂದಿ ಉಸಿರು ಚೆಲ್ಲಿದ ಘಟನೆ ಅದು. ದೆಹಲಿ ವಿಮಾನ ನಿಲ್ದಾಣದಿಂದ ಹೊರಟು ದುರಂತಕ್ಕೀಡಾದ ಎಐ-171 ವಿಮಾನ ಅಪಘಾತದಲ್ಲಿ, ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬಗಳಿಗೆ ಏನು ಕೊಟ್ಟರೂ ಕಡಿಮೆಯೇ. ಆದರೂ ದಯೆ ತೋರಿರುವ ಏರ್ ಇಂಡಿಯಾ ಸಂಸ್ಥೆ ಪರಿಹಾರ ಘೋಷಿಸಿದೆ.

ಹೌದು, ಈ ಘಟನೆಯಿಂದ ಜೀವ ಕಳೆದುಕೊಂಡ 229 ಪ್ರಯಾಣಿಕರಲ್ಲಿ ಈಗಾಗಲೇ 147 ಮಂದಿ ಪ್ರಯಾಣಿಕರ ಕುಟುಂಬಗಳಿಗೆ ಹಾಗೂ ಅಪಘಾತದ ಸ್ಥಳದಲ್ಲೇ ಮೃತಪಟ್ಟುಹೋಗಿದ 19 ಮಂದಿಯ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ವಿಮಾನಯಾನ ಸಂಸ್ಥೆಯ ಪ್ರಕಾರ, ಈ ಪಾವತಿ ಅಂತಿಮ ಪರಿಹಾರದ ಭಾಗವಾಗಿದ್ದು, ಮುಂದಿನ ಹಂತದ ಪರಿಹಾರ ಮೌಲ್ಯದಲ್ಲಿ ಈ ಮೊತ್ತವನ್ನು ಖಚಿತಪಡಿಸಲಾಗುವುದು. ಇನ್ನುಳಿದ 52 ಪ್ರಯಾಣಿಕರ ಸಂಬಂಧಿಕರ ದಾಖಲೆ ಪರಿಶೀಲನೆ ಪ್ರಗತಿಯಲ್ಲಿದ್ದು, ಅವರು ಅರ್ಹರಾಗಿದ್ದಾರೆ ಎಂಬ ದೃಢೀಕರಣದ ಬಳಿಕ, ಅವರಿಗೂ ಹಂತ ಹಂತವಾಗಿ ಪರಿಹಾರವನ್ನು ಒದಗಿಸಲಾಗುವುದು.
ಅಪಘಾತದಿಂದ ಪ್ರಭಾವಿತರಾದ ಕುಟುಂಬಗಳ ನೋವು ಮತ್ತು ನಷ್ಟಕ್ಕೆ ಏರ್ ಇಂಡಿಯಾ ಭಾವಪೂರ್ಣ ಸಂತಾಪ ವ್ಯಕ್ತಪಡಿಸಿದೆ. ಈ ವಿಪತ್ತಿನ ಸಂದರ್ಭದಲ್ಲಿ ಅವರು ಭರವಸೆಯನ್ನು ಸಂಸ್ಥೆ ನೀಡಿದೆ. ಏರ್ ಇಂಡಿಯಾ ನೀಡಿದ ಹೇಳಿಕೆಯಲ್ಲಿ, "ಪೀಡಿತ ಕುಟುಂಬಗಳ ತ್ವರಿತ ಆರ್ಥಿಕ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಒಂದು ತಿಂಗಳ ಹಿಂದೆಯೇ 25 ಲಕ್ಷದ ಮಧ್ಯಂತರ ಪರಿಹಾರ ಬಿಡುಗಡೆ ಪ್ರಕ್ರಿಯೆ ಆರಂಭಿಸಲಾಯಿತು" ಎಂಬ ಮಾಹಿತಿಯನ್ನು ಕೂಡ ಬಹಿರಂಗಪಡಿಸಲಾಗಿದೆ.
ಟಾಟಾ ಗ್ರೂಪ್ಸ್ ಕೂಡ ಈ ದುರಂತಕ್ಕೆ ಸಂಬಂಧಿಸಿದಂತೆ ಒಂದು ವಿಶೇಷ ಟ್ರಸ್ಟ್ - 'ದಿ ಎಐ-171 ಮೆಮೋರಿಯಲ್ ಅಂಡ್ ವೆಲ್ಫೇರ್ ಟ್ರಸ್ಟ್' ಅನ್ನು ಸ್ಥಾಪಿಸಿದೆ. ಈ ಟ್ರಸ್ಟ್ನ್ನು ಸಂಪೂರ್ಣವಾಗಿ ಅಪಘಾತ ಸಂತ್ರಸ್ತರ ಸಹಾಯಕ್ಕಾಗಿ ಬಳಸಲಾಗುವುದು ಎಂದು ಅದು ತಿಳಿಸಿದೆ. ಈ ಟ್ರಸ್ಟ್ ಮೃತರಾಗಿರುವ ಪ್ರತಿಯೊಬ್ಬ ಪ್ರಯಾಣಿಕರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರವನ್ನು ನೀಡುವ ಭರವಸೆಯನ್ನು ನೀಡಿದ್ದು, ಘಟನೆಯಲ್ಲಿ ಪೀಡಿತರಾದ ಇತರರಿಗೆ ಸಹಾಯಹಸ್ತ ನೀಡಲು ಸಹ ಪ್ರಯತ್ನಿಸಲಾಗುತ್ತಿದೆ.
ಅದರಲ್ಲಿ ವಿಶೇಷವಾಗಿ, ಬಿಜೇ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೂಲಸೌಕರ್ಯವನ್ನು ಪುನರ್ನಿರ್ಮಿಸಲು ಟ್ರಸ್ಟ್ ನೆರವು ಒದಗಿಸಲಿದೆ. ಅಪಘಾತದ ಸಂದರ್ಭದಲ್ಲಿ ಮೊದಲಿನಿಂದಲೇ ಸಕ್ರಿಯವಾಗಿದ್ದ ವೈದ್ಯಕೀಯ ಸಿಬ್ಬಂದಿ, ರಕ್ಷಣಾ ದಳಗಳು, ದುರಂತ ನಿರ್ವಹಣಾ ತಜ್ಞರು, ಸಮಾಜಸೇವಕರು ಮತ್ತು ಸರ್ಕಾರಿ ಅಧಿಕಾರಿಗಳು ಈ ಘಟನೆದಿಂದ ಎದುರಿಸಿದ ಭೌತಿಕ ಹಾಗೂ ಮಾನಸಿಕ ಆಘಾತವನ್ನು ಪರಿಹರಿಸಲು ಈ ಟ್ರಸ್ಟ್ ನೆರವು ನೀಡಲಿದೆ ಎಂಬುದನ್ನು ಕೂಡ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ರೀತಿಯ ಅಪಘಾತಗಳು ಕೇವಲ ವೈಯಕ್ತಿಕ ಕುಟುಂಬಗಳಿಗೆ ನೋವನ್ನು ಮಾತ್ರವಲ್ಲ, ಸಂಪೂರ್ಣ ಸಮಾಜಕ್ಕೆ ಆಘಾತ ತರುತ್ತವೆ. ಅಂತಹ ಸಂದರ್ಭದಲ್ಲಿ ಈ ರೀತಿಯ ಹಣಕಾಸು ನೆರವು ಕೂಡ ಒಂದು ರೀತಿಯ ಸಹಾನುಭೂತಿ ಸೂಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಸುರಕ್ಷತೆ ಕುರಿತ ಆಳವಾದ ಚರ್ಚೆಗೆ ದಾರಿ ಮಾಡಿಕೊಡಬೇಕೆಂದು ಜನಸಾಮಾನ್ಯರು ಆಶಿಸುತ್ತಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications