500 ವರ್ಷಗಳ ಹೋರಾಟ, ಹಲವಾರು ಗಲಭೆಗಳ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಲಾಯಿತು. 2024, ಜನವರಿ 22 ರಲ್ಲಿ ಭವ್ಯವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ದೇಗುಲವನ್ನು ಉದ್ಘಾಟಿಸಲಾಯಿತು. ಆ ಸಂದರ್ಭದಲ್ಲಿ ಸಹಸ್ರಾರು ಭಕ್ತರು, ರಾಮನ ದರ್ಶನವನ್ನು ಪಡೆಯಲು ಅಯೋಧ್ಯೆಗೆ ಭಾಗವಹಿಸಿದ್ದರು. ಇದೀಗ ರಾಮಲಲ್ಲಾ ಪ್ರತಿಷ್ಠಾಪನೆಯಾಗಿ 2 ವರ್ಷ ಪೂರ್ಣವಾಗುತ್ತಿದೆ. ಈ ಮಧ್ಯೆ ಕರ್ನಾಟಕ ಮೂಲಕ ಬೆಂಗಳೂರಿನ ಕಲಾವಿದೆ ಜಯಶ್ರೀ ಫಣೀಶ್ ಎಂಬವರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ 20 ರಿಂದ 30 ಕೋಟಿ ರೂ. ಮೌಲ್ಯದ ಚಿನ್ನದ ರಾಮನ ಮೂರ್ತಿಯನ್ನು ದೇಣಿಗೆಯಾಗಿ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವಕ್ಕೆ ಸಜ್ಜಾಗುತ್ತಿದ್ದಂತೆ, ಚಿನ್ನ, ಬೆಳ್ಳಿ, ವಜ್ರಗಳು ಹಾಗೂ ಅಮೂಲ್ಯ ಕಲ್ಲುಗಳಿಂದ ನಿರ್ಮಿಸಿದ ಭವ್ಯ ವಿಗ್ರಹವೊಂದು ದೇಣಿಗೆಯಾಗಿ ತಲುಪಿದೆ. 10 ಅಡಿ ಎತ್ತರ, 8 ಅಡಿ ಅಗಲ ಮತ್ತು 500 ಕೆಜಿ ತೂಕದ ಈ ವಿಗ್ರಹವು ಸದ್ಯ ಭಾರೀ ಗಮನ ಸೆಳೆಯುತ್ತಿದೆ.
ಇನ್ನು ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯ ಡಾ.ಅನಿಲ್ ಮಿಶ್ರಾ ಅವರು ಮಾತನಾಡಿದ್ದು, ಕರ್ನಾಟಕದ ಕಲಾವಿದೆ ಜಯಶ್ರೀ ಫಣೀಶ್ ಎಂಬ ಭಕ್ತರೊಬ್ಬರು ಸುಮಾರು ₹25-30 ಕೋಟಿ ಮೌಲ್ಯದ ಈ ರಾಮ ವಿಗ್ರಹವನ್ನು ಆಯೋಧ್ಯೆಯ ರಾಮಮಂದಿರಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಚಿನ್ನ, ಬೆಳ್ಳಿ, ವಜ್ರಗಳು, ಪಚ್ಚೆ, ನೀಲಮಣಿ ರತ್ನಗಳು ಮತ್ತು ಇತರ ಅಮೂಲ್ಯ ಕಲ್ಲುಗಳಿಂದ ನಿರ್ಮಾಣವಾಗಿರುವ ಇದು ದಕ್ಷಿಣ ಭಾರತದ ಶಿಲ್ಪಕಲಾ ಪರಂಪರೆಯನ್ನು ಎತ್ತಿ ತೋರಿಸುತ್ತದೆ.
10 ಅಡಿ ಎತ್ತರ ಮತ್ತು ಸುಮಾರು 8 ಅಡಿ ಅಗಲದ ಈ ವಿಗ್ರಹವು ಬರೋಬ್ಬರಿ 500 ಕೆಜಿ (5 ಕ್ವಿಂಟಾಲ್) ತೂಕವಿದೆ ಎಂದು ಹೇಳಲಾಗಿದೆ. ವಿಗ್ರಹದ ಪರಿಶೀಲನೆ ನಡೆಸಿದ ತಜ್ಞರು, ಇದರಲ್ಲಿ ಬಳಸಿರುವ ಲೋಹಗಳು ಮತ್ತು ರತ್ನಗಳ ಬಗ್ಗೆಯೂ ನಿಖರವಾಗಿ ಗುರುತಿಸಿದ್ದಾರೆ. ಇನ್ನು ಈ ವಿಗ್ರಹವು ಮಂಗಳವಾರ ಸಂಜೆ ಅಯೋಧ್ಯೆ ತಲುಪಿದೆ ಎನ್ನಲಾಗಿದೆ.
ಡಿಸೆಂಬರ್ 29 ರಿಂದ ಜನವರಿ 2ರ ನಡುವೆ ನಡೆಯಲಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇದನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಗ್ರಹದ ಸ್ಥಾಪನೆಗೂ ಮೊದಲು ಎಲ್ಲಾ ತಾಂತ್ರಿಕ ಹಾಗೂ ಶಾಸ್ತ್ರಗಳ ವಿವರಗಳನ್ನು ಪರಿಶೀಲಿಸುತ್ತಿದೆ.
ಈ ಭವ್ಯ ವಿಗ್ರಹವನ್ನು ಮಂದಿರ ಆವರಣದಲ್ಲಿರುವ ಸಂತ ತುಳಸಿದಾಸ ದೇವಾಲಯದ ಸಮೀಪದ ಅಂಗದ್ ಟೀಲಾ ಎಂಬ ಸ್ಥಳದಲ್ಲಿ ಇಡುವ ಸಾಧ್ಯತೆ ಹೆಚ್ಚಿದೆ. ಅನಾವರಣ ಸಮಾರಂಭದ ನಂತರ ದೇಶದಾದ್ಯಂತದ ಸಂತರು ಮತ್ತು ಋಷಿಮುನಿಗಳ ಭಾಗವಹಿಸುವಿಕೆಯೊಂದಿಗೆ ಮಹಾಮಸ್ತಕಾಭಿಷೇಕ ಶಾಸ್ತ್ರ ಕೂಡಾ ನಡೆಯಲಿದೆ.
ಇನ್ನು ಜಯಶ್ರೀ ಫಣೀಶ್ ಇದೇ ಮೊದಲಲ್ಲ, ಈ ಹಿಂದೆಯೂ ದೇಶಾದ್ಯಂತ ಹಲವು ದೇವಾಲಯಗಳಿಗೆ ಇದೇ ರೀತಿಯ ಕಲಾಕೃತಿಯಗಳನ್ನು ಸ್ವಯಂಪ್ರೇರಿತವಾಗಿ ದೇಣಿಗೆಯಾಗಿ ನೀಡಿದ್ದಾರೆ. ಈ ಬಾರಿ ಅಯೋಧ್ಯೆ ರಾಮ ಮಂದಿರಕ್ಕೂ ರಾಮನ ವಿಗ್ರಹವನ್ನು ಕಾಣಿಕೆಯಾಗಿ ನೀಡಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications