ಇಂದು ರಾಜ್ಯ, ದೇಶದೆಲ್ಲೆಡೆ ಶ್ರೀರಾಮನವಮಿ ಸಂಭ್ರಮ ಜೋರಾಗಿದೆ. ಜನರೆಲ್ಲ ಶ್ರೀರಾಮನ ಧ್ಯಾನದಲ್ಲಿ ಮೊಳಗಿದ್ದಾರೆ. ಭಕ್ತಿ-ಭಾವದಿಂದ ಶ್ರೀರಾಮನ ಆರಾಧನೆ ಮಾಡುತ್ತಿದ್ದಾರೆ. ಈ ಹಬ್ಬದ ಹಿನ್ನೆಲೆ ಇಂದು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಂದು ಮಹತ್ವವಾದ ಆದೇಶವೊಂದನ್ನು ಹೊರಡಿಸಿದೆ. ಅದೇನೆಂದರೆ ರಾಮನವಮಿ ದಿನವಾದ ಇಂದು ಹಾಗೂ ನಾಳೆ ನಹರದಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ಮಾಡುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ತಿಳಿಸಿದೆ.

ಈ ನಿರ್ಧಾರವನ್ನು ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಪಾಲಿಕೆಯ ವ್ಯಾಪ್ತಿಗೆ ಒಳಪಟ್ಟ ಎಲ್ಲಾ 8 ವಲಯಗಳಲ್ಲೂ ಈ ಆದೇಶ ಅನ್ವಯವಾಗಲಿದೆ. ಅಲ್ಲದೇ ಇದರಲ್ಲಿ ಮಾಂಸದ ಅಂಗಡಿಗಳು, ಮೀಟ್ ಮಾರ್ಕೆಟ್ಗಳು, ಸ್ನಾಟರ್ಹೌಸ್ಗಳು ಮತ್ತು ಮೀಟ್ ಪ್ರಾಸೆಸಿಂಗ್ ಘಟಕಗಳು ಸೇರಿವೆ. ಇವುಗಳು ಬಿಬಿಎಂಪಿ ಹೊರಡಿಸಿರುವ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಆದೇಶಕ್ಕೆ ಕಾರಣ..?
ಇಂದು ರಾಮನವಮಿ. ಇದು ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದು. ಭಗವಾನ್ ಶ್ರೀ ರಾಮಚಂದ್ರನ ಜನ್ಮದಿನವಾದ ಇಂದು ಪ್ರಾಣಿಹಿಂಸೆ ಮಾಡಬಾರದು ಎಂಬುದು ಮುಖ್ಯ ಉದ್ದೇಶ. ಅಲ್ಲದೇ ಈ ದಿನದಲ್ಲಿ ಲಕ್ಷಾಂತರ ಭಕ್ತರು ಉಪವಾಸ ಪಾಲನೆ, ದೇವಾಲಯಗಳ ಪ್ರವೇಶ, ಹಾಗೂ ಶ್ರೀರಾಮನ ಭಜನೆ-ಪಾರಾಯಣಗಳಲ್ಲಿ ತೊಡಗಿರುತ್ತಾರೆ. ಹೀಗೆ ಧಾರ್ಮಿಕ ಶ್ರದ್ಧೆ ಮತ್ತು ಸಾಮೂಹಿಕ ಭಾವನೆಗಳ ಹಿನ್ನೆಲೆಯಲ್ಲಿಯೇ, ಮಾನವೀಯತೆಯ ಪ್ರಜ್ವಲನದ ಸಂದೇಶ ನೀಡುವ ಈ ಹಬ್ಬದ ದಿನ, ಮಾಂಸ ಮಾರಾಟ ನಿಷೇಧಿಸುವ ಮೂಲಕ ಬಿಬಿಎಂಪಿ ಧಾರ್ಮಿಕ ಸಹಿಷ್ಣುತೆ ಮತ್ತು ನಾಗರಿಕ ಶಿಸ್ತಿಗೆ ಆದರ್ಶದ ಮಾದರಿಯಾಗಿ ನಿಂತಿದೆ.
ನಿಷೇಧ ಉಲ್ಲಂಘಿಸಿದರೆ ಕ್ರಮ:
ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಪರಿಹಾರಾತ್ಮಕ ಮತ್ತು ದಂಡಾತ್ಮಕ ಕ್ರಮಗಳು ಜರುಗಿಸಲ್ಪಡುವ ಸಂಭವವಿದೆ. ನಿಗದಿತ ಆದೇಶ ಪಾಲಿಸದ ಅಂಗಡಿಗಳ ಮೇಲೆ ದಂಡ ವಿಧಿಸಬಹುದು. ಅನುಮತಿ ಪರವಾನಗಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು. ವರದಿ ದಾಖಲೆಗಳ ಆಧಾರದ ಮೇಲೆ ಮರು ಪರಿಶೀಲನೆ ನಡೆಯಬಹುದು..ಈ ಎಲ್ಲಾ ಸಾಧ್ಯಗಳಿವೆ. ಹೀಗಾಗಿ ನಿಯಮ ಪಾಲಿಸುವುದು ಕಡ್ಡಾಯವಾಗಿದೆ.
ಸಾರ್ವಜನಿಕರ ಪ್ರತಿಕ್ರಿಯೆ:
ಇನ್ನು ಬಿಬಿಎಂಪಿಯ ಈ ನಿರ್ಧಾರಕ್ಕೆ ಸಾರ್ವಜನಿಕರು ಕೂಡ ಹೆಚ್ಚಾಗಿ ಬೆಂಬಲ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಹಬ್ಬದ ಪವಿತ್ರತೆಯನ್ನು ಕಾಪಾಡುವ ಸರಿಯಾದ ಹೆಜ್ಜೆ ಎಂದು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಅಧಿಕಾರಿಗಳು ಹೇಳಿರುವುದೇನೆಂದರೆ, ಇದು ಕೇವಲ ಒಂದು ದಿನದ ತಾತ್ಕಾಲಿಕ ಕ್ರಮ ಮತ್ತು ಬಿಬಿಎಂಪಿಯ ನಿಯಮಾನುಸಾರವೇ ನಡೆಯುತ್ತಿದೆ ಎನ್ನಲಾಗಿದೆ.
ಅಂದಹಾಗೆ ಬಿಬಿಎಂಪಿ ಇದೇ ರೀತಿ ಹಲವಾರು ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ, ಮಾಂಸ ಮಾರಾಟ ನಿಷೇಧವನ್ನು ಜಾರಿಗೆ ತಂದಿದೆ. ಮಹಾವೀರ ಜಯಂತಿ, ಗಾಂಧೀ ಜಯಂತಿ, ಸರಸ್ವತಿ ಪೂಜೆ, ಮಹಾ ಶಿವರಾತ್ರಿ, ಯುಗಾದಿ ಹೀಗೆ ಹಲವು ಹಬ್ಬಗಳ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧಿಸಿದೆ. ಇದು ಒಂದು ನಿಯಮಿತ ಧೋರಣೆಯ ಭಾಗವಾಗಿದ್ದು, ಸಾಮಾಜಿಕ ಸಮರಸ್ಯಕ್ಕೆ ಉತ್ತೇಜನ ನೀಡುವ, ಹಾಗೂ ಸಾಮಾನ್ಯ ಜನರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ.
ಅಂದಹಾಗೆ ಬಿಬಿಎಂಪಿಯ ಆದೇಶದ ಮೂಲಕ, ಶ್ರದ್ಧಾ, ಶಿಸ್ತು ಮತ್ತು ನಾಗರಿಕ ಜವಾಬ್ದಾರಿಯ ಸಮ್ಮಿಲನ ಕಂಡುಬರುತ್ತದೆ. ಇದು ಒಂದು ದಿನದ ನಿಷೇಧವಾಗಿದ್ದರೂ, ಅದರ ಸಾಂಸ್ಕೃತಿಕ ಹಾಗೂ ರಾಜಕೀಯ ಪೈಪೋಟಿಯ ಪರಿಣಾಮಗಳು ಹೆಚ್ಚು ಸಮಯವರೆಗೆ ಚರ್ಚೆಗೆ ಸ್ಪೂರ್ತಿಯಾಗಬಹುದು. ಮುಂದೆ ಇಂತಹ ನಿರ್ಧಾರಗಳ ಪರಿಣಾಮಕಾರಿತ್ವವನ್ನು ಮಾದರಿ ರೂಪದಲ್ಲಿ ಬಳಸಿ, ಇತರ ನಗರಗಳಿಗೂ ಹಮ್ಮಿಕೊಳ್ಳಬಹುದಾಗಿದೆ. ಅಂತಿಮವಾಗಿ, ಬಿಬಿಎಂಪಿಯ ಇಂತಹ ಕ್ರಮಗಳು ನಗರದ ಸಂಸ್ಕೃತಿಯ ಬಗೆಯ ಮುನ್ನೋಟವಷ್ಟೇ ಅಲ್ಲ, ನಾಗರಿಕ ಜವಾಬ್ದಾರಿಯತ್ತ ಒಗ್ಗಟ್ಟಿನ ಹೆಜ್ಜೆಯೂ ಆಗಿವೆ. ಶ್ರೀ ರಾಮನವಮಿಯಂತಹ ಹಬ್ಬಗಳು, ಭಕ್ತಿ ಮತ್ತು ಶ್ರದ್ಧೆಗೆ ಮಾತ್ರ ಸೀಮಿತವಲ್ಲ, ಅವು ಸಮಾಜದ ಒಳಹೊರೆಯ ಮೌಲ್ಯಗಳನ್ನು ಪುನರ್ಸ್ಥಾಪಿಸುವ ಸಮಯಗಳಾಗಿರುತ್ತವೆ.


Click it and Unblock the Notifications