ಚರಂಡಿಗಳ ಸ್ವಚ್ಛತೆಗೆ ಬ್ಯಾಂಡಿಕೂಟ್ ರೋಬೋಟ್: ಮಳೆಗಾಲಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಬಿಬಿಎಂಪಿ ಸ್ವಚ್ಚತೆಗಾಗಿ ಒಂದು ಹೆಜ್ಜೆ ಮುಂದಿಟ್ಟಿದೆ. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ಈಗಿನಿಂದಲೇ ತಡೆಯಲು ಚಿಂತನೆ ನಡೆಸಿದೆ. ಈಗಾಗಲೇ ಚರಂಡಿ ಶುದ್ಧೀಕರಣದತ್ತ ಕೆಲಸ ಪ್ರಾರಂಭಿಸಿರುವ ಬಿಬಿಎಂಪಿ, ಹೊಸ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಅದೇ 'ಬ್ಯಾಂಡಿಕೂಟ್' ಎಂಬ ರೋಬೋಟ್. ಇದು ಈಗಾಗ್ಲೇ ಚೆನ್ನೈನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಅರೆ-ಸ್ವಾಯತ್ತ ರೋಬೋಟ್. ಇದನ್ನು ಬೆಂಗಳೂರಿನಲ್ಲಿ ಬಳಸುವ ಸಾಧ್ಯತೆಗಳ ಬಗ್ಗೆ ಬಿಬಿಎಂಪಿ ಅಧ್ಯಯನ ಮಾಡುತ್ತಿದೆ.

ಬ್ಯಾಂಡಿಕೂಟ್ ರೋಬೋಟ್ನ ವಿಶೇಷತೆ ಏನು?
ಈ ಬ್ಯಾಂಡಿಕೂಟ್ ರೋಬೋಟ್ ಒಂದು ಸುಧಾರಿತ ತಂತ್ರಜ್ಞಾನ ಹೊಂದಿರುವ ರೋಬೋಟ್. ಇದರು ಕಿರಿದಾದ ಒಳಚರಂಡಿ ಮಾರ್ಗದಲ್ಲಿ ಸಂಚರಿಸಿ, ಕಸವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವ ಒಂದು ಅರೆ-ಸ್ವಾಯತ್ತ ರೋಬೋಟ್ ಆಗಿದೆ. ಇದನ್ನು ಮ್ಯಾನುಯಲ್ ಸ್ಯಾವೇಜ್ ಕ್ಲೀನಿಂಗ್ ಎನ್ನಬಹುದು. ಅಂದರೆ ಇದು ಮಾನವರ ಮೂಲಕ ಚರಂಡಿ ಶುದ್ಧೀಕರಣ ಮಾಡುವ ಯಂತ್ರವಾಗಿದೆ. ಈ ರರೋಬೋಟ್ನ ದೂರ ನಿಯಂತ್ರಣದ ಮೂಲಕ ಚಾಲನೆ ಮಾಡಬಹುದಾಗಿದೆ. ಡ್ರೋನ್ ತಂತ್ರಜ್ಞಾನದಂತೆಯೇ ಇರುತ್ತದೆ. ಇದು ಯಾವುದೇ ಕಾರಣಕ್ಕೂ ಕಾರ್ಮಿಕರ ಜೀವಕ್ಕೆ ಅಪಾಯ ತರುವುದಿಲ್ಲ. ಅಷ್ಟೇ ಅಲ್ಲ ಇದು ಕಸದ ಸಮಸ್ಯೆ ಬಗೆಹರಿಸಲು ಸಹಾಯಕವಾಗುವ ಸಾಧನವಾಗಿದೆ.
ಮಳೆಗಾಲಕ್ಕೆ ಮುಂಚಿತ ಸಿದ್ಧತೆಗಳ ಭಾಗವಾಗಿ ಉಪಯೋಗ:
ಇನ್ನೇನು ಮಳೆಗಾಲ ಹತ್ತಿರದಲ್ಲೇ ಇದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಅತಿಹೆಚ್ಚು ಮಳೆ ಬಂದರೆ ಪ್ರವಾಹದ ಸ್ಥಿತಿ ಉಂಟಾಗುತ್ತದೆ. ಹೀಗಾಗಿಯೇ ಬಿಬಿಎಂಪಿ ಮೊದಲೇ ಎಚ್ಚೆತ್ತುಕೊಂಡಿದೆ. ಅದರಲ್ಲೂ ಚರಂಡಿಗಳು ತುಂಬಿದ್ದರೆ ಸಾರ್ವಜನಿಕರಿಗೆ ಭಾರಿ ತೊಂದರೆ ಉಂಟಾಗುತ್ತದೆಂದು ಈ ಕ್ರಮ ತೆಗೆದುಕೊಂಡಿದೆ. ಪ್ರವಾಹಕ್ಕೆ ಕಾರಣವಾಗುವ ಮುಚ್ಚಿದ ಚರಂಡಿಗಳನ್ನು ಸ್ವಚ್ಚಗೊಳಿಸುವ ಉದ್ದೇಶ ಹೊಂದಲಾಗಿದೆ. ಚರಂಡಿಗಳನ್ನು ಶುದ್ಧಗೊಳಿಸಲು ಈ ಹೊಸ ತಂತ್ರಜ್ಞಾನಗಳನ್ನು ಪ್ರಯೋಗಿಸಲು ಬಿಬಿಎಂಪಿ ಮುಂದಾಗಿದೆ. ಚೆನ್ನೈನಲ್ಲಿ ಈ ರೋಬೋಟ್ಗಳ ಪರಿಣಾಮಕಾರಿತ್ವವನ್ನು ಪರಿಶೀಲಿಸಿ, ಬೆಂಗಳೂರಿನಲ್ಲಿ ಸಹ ಬಳಸುವ ಆಯ್ಕೆ ಪರಿಶೀಲಿಸುತ್ತೇವೆ ಎಂದ, ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಮಾಹಿತಿ ನೀಡಿದ್ದಾರೆನ್ನಲಾಗಿದೆ.
ಮಳೆಗಾಲದ ಪ್ರವಾಹ ತಡೆಯಲು ಕ್ರಮ:
ಅಂದಹಾಗೆ ಬಿಬಿಎಂಪಿ ನೀಡಿರುವ ವರದಿಯ ಅನುಸಾರ, 209 ಪ್ರವಾಹಪೀಡಿತ ವಲಯಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ನೀರು ನಿಂತು ಸಂಚಾರವನ್ನು ತಡೆಯುವ ಸಾಧ್ಯತೆ ಹೆಚ್ಚು ಇರುವುದು ಕಂಡುಬಂದಿದೆ. ಹೀಗಾಗಿ ಇವುಗಳನ್ನು ಸರಿಪಡಿಸಲು, ಧಿಕಾರಿಗಳಿಗೆ ತುರ್ತು ಕ್ರಮಗಳನ್ನು ಜಾರಿಗೆ ತರಲು ಸೂಚನೆ ನೀಡಲಾಗಿದೆ. ಅಲ್ಲದೇ ಸಂಚಾರ ಇಲಾಖೆ ಸಹಯೋಗದೊಂದಿಗೆ ಪ್ರವಾಹದ ಮಾರ್ಗಗಳನ್ನು ಗುರುತಿಸಿ ಸೌಲಭ್ಯ ಒದಗಿಸಲಾಗುತ್ತಿದೆ.
ರಸ್ತೆ ಗುಂಡಿಗಳ ದುರಸ್ತಿಗೂ ಗಮನ:
ಇನ್ನು ನಗರದಾದ್ಯಂತ 812 ಗುಂಡಿಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಈಗಾಗಲೇ 245 ಸ್ಥಳಗಳಲ್ಲಿ ದುರಸ್ತಿ ಪೂರ್ಣಗೊಂಡಿದೆ. ನಾಗರಿಕರು ಈ ಬಗ್ಗೆ ದೂರುಗಳನ್ನು ಸಲ್ಲಿಸಬಹುದಾಗಿದೆ. ಬಿಬಿಎಂಪಿಯು ಈ ಪ್ರಕ್ರಿಯೆಯನ್ನು ಕ್ರಮಬದ್ಧವಾಗಿ ನಡೆಸುತ್ತಿದೆ
ಬಿಬಿಎಂಪಿ ಶುದ್ಧತಾ ಅಭಿಯಾನ:
ಇನ್ನು 2024ರ ಏಪ್ರಿಲ್ 22ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಆರಂಭವಾದ 10 ದಿನಗಳ ಶುದ್ಧತಾ ಅಭಿಯಾನವು ಜನ ಪ್ರತಿಕ್ರಿಯೆ ಹಾಗೂ ಅಗತ್ಯದ ಹಿನ್ನೆಲೆಯಲ್ಲಿ ಒಂದು ತಿಂಗಳಿಗೆ ವಿಸ್ತರಿಸಲಾಗಿದೆ. ಈ ಅಭಿಯಾನವು ಮುಖ್ಯವಾಗಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಮಾರುಕಟ್ಟೆ ಪ್ರದೇಶಗಳು ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ. ಇಲ್ಲಿಯವರೆಗೆ ಈ ಅಭಿಯಾನದಡಿಯಲ್ಲಿ ನಗರದ 90% ಕಪ್ಪು ಚುಕ್ಕೆಗಳು, ಅಂದರೆ ಬೃಹತ್ ಮಲಿನ ಪ್ರದೇಶಗಳು ಶುದ್ಧಗೊಳಿಸಲಾಗಿದೆ. ಪಾಲಿಕೆ ನಗರವನ್ನು ಗಚ್ಚಾಗಿ, ಸ್ವಚ್ಛವಾಗಿ ಉಳಿಸುವುದಕ್ಕಾಗಿ ದಿನನಿತ್ಯ ಕಾರ್ಯನಿರ್ವಹಿಸುತ್ತಿದೆ.
ಒಟ್ಟಿನಲ್ಲಿ ಈ ಬ್ಯಾಂಡಿಕೂಟ್ ರೋಬೋಟ್ ಬಳಕೆಯಿಂದ ಮಾನವ ಸಹಾಯದ ಅವಲಂಬನೆ ಕಡಿಮೆಯಾಗುತ್ತದೆ. ಚರಂಡಿ ಶುದ್ಧೀಕರಣದ ವೇಗ ಮತ್ತು ದಕ್ಷತೆ ಹೆಚ್ಚುತ್ತದೆ. ಮಳೆಗಾಲದಲ್ಲಿ ಪ್ರವಾಹದ ಅಪಾಯವು ಕಡಿಮೆಯಾಗುವ ಸಾಧ್ಯತೆ. ಪೂರಕವಾಗಿ ಬೆಂಗಳೂರಿನಲ್ಲಿ ಸಾವಧಾನಿ ಕ್ರಮಗಳು ಮುಂಚಿತವಾಗಿ ಕೈಗೊಳ್ಳಲಾಗುತ್ತಿವೆ. ಬಿಬಿಎಂಪಿಯ ಈ ಹೊಸ ಪ್ರಯೋಗವು ಬೆಂಗಳೂರಿನಲ್ಲಿ ತಂತ್ರಜ್ಞಾನ ಆಧಾರಿತ ಮಹಾನಗರ ಆಡಳಿತದತ್ತ ಸಾಗುತ್ತಿರುವ ಸ್ಪಷ್ಟ ಸೂಚನೆ. ಬೃಹತ್ ನಗರದಲ್ಲಿ ಸ್ವಚ್ಛತೆ, ಸುರಕ್ಷತೆ ಮತ್ತು ಕಾರ್ಯನಿರ್ವಹಣಾ ದಕ್ಷತೆ ಹೆಚ್ಚಿಸಲು ಇಂಥ ಹೊಸ ಉಪಕರಣಗಳ ಅನ್ವಯವು ಬಹುಮುಖ ಪ್ರಯೋಜನ ನೀಡುವ ನಿರೀಕ್ಷೆಯಿದೆ.
More From GoodReturns

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications