ಕೆಂಪೇಗೌಡ ಏರ್ಪೋರ್ಟ್ಗೆ ಪ್ರಯಾಣಿಸುವವರಿಗೆ ಕಿರಿಕಿರಿ ತಪ್ಪಿಸಲು ಬಿಬಿಎಂಪಿ ಹೊಸ ಯೋಜನೆಗೆ ಬಂದಿದೆ. ಅದೇನೆಂದರೆ ಪ್ರಯಾಣಿಕರು ಸುಗಮವಾಗಿ ಸಂಚರಿಸಲೆಂದು, ಕೆಂಪೇಗೌಡ ಏರ್ಪೋರ್ಟ್ಗೆ ಎರಡು ಲಿಂಕ್ ರಸ್ತೆಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ. ಅದಕ್ಕಾಗಿ ತನ್ನ ವ್ಯಾಪ್ತಿಯನ್ನೂ ಮೀರಿ ಕಾರ್ಯ ನಿರ್ವಹಿಸಲು ಸಜ್ಜಾಗಿದೆ.
ಬಿಬಿಎಂಪಿಗೆ ತನ್ನ ವ್ಯಾಪ್ತಿಗೆ ಒಳಪಡದ ಎರಡು ರಸ್ತೆಗಳನ್ನು ನಿರ್ಮಿಸುವಂತೆ ಸರ್ಕಾರವೇ ಆದೇಶಿಸಿದೆ. ಅದರಂತೆ ಬಿಬಿಎಂಪಿಯು ಯಲಹಂಕ ವಲಯದ ರಸ್ತೆ ಮೂಲ ಸೌಕರ್ಯ ವಿಭಾಗದಿಂದ ಈ ರಸ್ತೆಗಳನ್ನು ನಿರ್ಮಿಸಲು ಮುಂದಾಗಿದೆ. ಅಲ್ಲದೇ ರಸ್ತೆ ನಿರ್ಮಾಣಕ್ಕಾಗಿ ಬೇಕಾದ ಸಿದ್ಧತೆಗಳನ್ನು ಕೂಡ ನಡೆಸುತ್ತಿದೆ. ಅಂದರೆ ರಸ್ತೆ ನಿರ್ಮಾಣಕ್ಕಾಗಿ ಅಗತ್ಯವಿರುವ ಅನುದಾ, ರಸ್ತೆಯ ವಿಸ್ತರಣೆ, ಭೂಸ್ವಾಧೀನಕ್ಕೆ ತಗಲುವ ವೆಚ್ಚ, ಕಟ್ಟಡ ನೆಲಸಮ, ಈಗಾಗಲೇ ಇರುಬ ರಸ್ತೆಗೆ ಮಾಡಬೇಕಿರುಪವ ಮರು ಡಾಂಬರೀಕರಣ ಸೇರಿದಂತೆ ವಿಸ್ತೃತ ಯೋಜನಾ ವರದಿ ತಯಾರಿಸಲು ಟೆಂಡರ್ ಕೂಡ ಆಹ್ವಾನಿಸಲಾಗಿದೆ.

ಇನ್ನು ವಿಮಾನ ನಿಲ್ದಾಣಕ್ಕೆ ಕಲ್ಪಿಸಲು ಬಾಗಲೂರು ಮಾರ್ಗವಾಗಿ ಒಂದು ಪರ್ಯಾಯ ರಸ್ತೆ ನಿರ್ಮಾಣವಾಗುತ್ತಿದೆ. ಅಂದ್ರೆ ಬಾಗಲೂರು ಮುಖ್ಯ ರಸ್ತೆಯಿಂದ ಕಂಟ್ರಿ ಕ್ಲಬ್ ಸಮೀಪ ಒಂದು ಹೊಸ ಲಿಂಕ್ ರಸ್ತೆ ಹಾದು ಹೋಗಲಿದೆ. ಇದನ್ನು ಹೊರತುಪಡಿಸಿಯೇ ಇನ್ನೆರಡು ಲಿಂಕ್ ರಸ್ತೆಗಳನ್ನು ನಿರ್ಮಿಸುವ ಉದ್ದೇಶವಿದೆ. ಬೇಗೂರು ಬಳಿ ಇರುವ ವಿದ್ಯುತ್ ಪ್ರಸರಣಾ ಘಟಕದ ಸಮೀಪದಿಂದ ಸಾದಹಳ್ಳಿ ಗೇಟ್ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಇನ್ನೊಂದಿ ಲಿಂಕ್ ರಸ್ತೆ ನಿರ್ಮಿಸಲಾಗುತ್ತದೆ ಎನ್ನಲಾಗಿದೆ. ಹೊಸದಾಗಿ ನಿರ್ಮಾಣವಾಗಲಿರುವ ಈ ಎರಡೂ ಲಿಂಕ್ ರಸ್ತೆಗಳು, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಒಂದಕ್ಕೊಂದು ಪೂರಕವಾಗಲಿವೆ.
ಅಂದಹಾಗೆ ಈ ಎರಡೂ ಲಿಂಕ್ ರಸ್ತೆಗಳನ್ನು ಹೊಸದಾಗಿಯೇ ನಿರ್ಮಿಸಬೇಕಾಗುತ್ತದೆ. ಏಕೆಂದರೆ ಈ ಭಾಗದಲ್ಲಿ ರೆವಿನ್ಯೂ ಲೇಔಟ್ಗಳಿವೆ. ಅಲ್ಲಿಂದ ಒಂದಷ್ಟು ಮೀಟರ್ ಉದ್ದ ದ ರಸ್ತೆ ಇರುವ ಕಾರಣ, ಅದನ್ನು ಮತ್ತಷ್ಟು ವಿಸ್ತರಿಸಬೇಕಿದೆ. ಇನ್ನುಳಿದ ಭಾಗಗಳಲ್ಲಿ ಹೊಸದಾಗಿ ರಸ್ತೆ ನಿರ್ಮಿಸಬೇಕಿದ್ದು ಅದಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದೆ ಎಂದು ಇಂಜಿನಿಯರ್ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗಾಗಿಯೇ ಟಿಡಿಆರ್ ( ಅಭಿವೃದ್ಧಿ ಹಕ್ಕು ವರ್ಗಾವಣೆ) ಯೋಜನೆ ಅಡಿಯಲ್ಲಿ ರಸ್ತೆಗೆ ಅಗತ್ಯ ಎನಿಸುವ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೂಡ ಯೋಜಿಸಲಾಗಿದೆ. ಡಿಪಿಆರ್ ಸಿದ್ಧಗೊಂಡ ಬಳಿಕವಷ್ಟೇ ಎಷ್ಟು ಪ್ರಮಾಣದಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ಸ್ಪಷ್ಟವಾಗಿ ತಿಳಿಯಲಾಗುತ್ತದೆ. ಸರ್ಕಾರ ನೀಡಿರುವ ಆದೇಶದ ಮೇಲೆ ಬಿಬಿಎಂಪಿ ವತಿಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂಬುದನ್ನು ಕೂಡ ತಿಳಿಸಿದ್ದಾರೆ.
ಇನ್ನು ಈ ಎರಡೂ ಲಿಂಕ್ ರಸ್ತೆಗಳು ಸುಮಾರು 13 ಕಿಲೋಮೀಟರ್ ಉದ್ದದಲ್ಲಿ ನಿರ್ಮಿಸಲಾಗುತ್ತದೆ. ಹಾಗೆಯೇ ಈ ಎರಡೂ ರಸ್ತೆಗಳಿಗೆ ಬಹುತೇಕ ಮಾರ್ಗದುದ್ದಕ್ಕೂ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಅದರಂತೆ ಸರ್ಕಾರ ನಿಗದಿಪಡಿಸಿರುವ ಅನುದಾನ ಭೂಸ್ವಾಧೀನಕ್ಕೇ ಎಲ್ಲಾ ವೆಚ್ಚವಾಗುವ ಸಾಧ್ಯತೆಗಳು ಕೂಡ ಎದ್ದು ಕಾಣುತ್ತಿವೆ. ಇದರ ಜೊತೆಗೆ ಇನ್ನೊಂದು ಸವಾಲೇನೆಂದರೆ ಜಮೀನು ಕಳೆದುಕೊಳ್ಳುವ ಮಾಲೀಕರು ಟಿಡಿಆರ್ ಗೆ ಹೇಗೆ ಒಪ್ಪುತ್ತಾರೋ ಅದನ್ನು ಕೂಡ ಹೇಳಲಾಗದು. ಎರಡು ಲಿಂಕ್ ರಸ್ತೆಗಳ ಮಾರ್ಗದಲ್ಲಿ ಎರಡು ಮೇಲ್ಸವೇತುವೆಯೂ ನಿರ್ಮಿಸಬೇಕಿದೆ. ಜೊತೆಗೆ ಒಂದು ರೈಲ್ವೆ ಸೇತುವೆಯನ್ನೂ ನಿರ್ಮಾಣ ಮಾಡಬೇಕಾಗುತ್ತದೆ. ಇದಕ್ಕೆಲ್ಲ ಅತಿಹೆಚ್ಚು ಅನುದಾನ ಬೇಕಿದೆ. ಆದರೆ ಸರ್ಕಾರ ಈ ನಿಗದಿಪಡಿಸಿರುವ ಅನುದಾನದಿಂದ ಕೊರತೆ ಎದುರಾಗಬಹುದು ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಬೆಂಗಳೂರಿನ ಕೆಲ ನಿವಾಸಿಗಳಿಗೆ ಏರ್ಪೋರ್ಟ್ಗೆ ಹೋಗುವುದೆಂದರೆ ಊರಿಂದೂರಿಗೆ ಹೋಗುವಂತೆ ಭಾಸವಾಗುತ್ತದೆ. ಟ್ರಾಫಿಕ್ ಕಿರಿಕಿರಿ ನಡುವೆ ನಗರ ದಾಟುವುದೇ ದೊಡ್ಡ ಸವಾಲಾಗಿದೆ. ಇದನ್ನೆಲ್ಲ ತಪ್ಪಿಸಿ ಸುಗಮವಾಗಿ ಪ್ರಯಾಣಿಸಿ ಏರ್ಪೋರ್ಟ್ ತಲುಪಲು ಅನುವು ಮಾಡಿ ಕೊಡಲು, ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಅದರ ಭಾಗವಾಗಿ ಲಿಂಕ್ ರಸ್ತೆ ಕಲ್ಪಿಸಿಕೊಡುವುದೂ ಕೂಡ ಒಂದಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications