ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ನಿಂದ ನಗರಕ್ಕೆ ಮರಳುತ್ತಿರುವ ಪ್ರಯಾಣಿಕರಿಗೆ ದೊಡ್ಡ ಅಸಮಾಧಾನ ಕಾಡ್ತಿದೆ. ಅದೇನೆಂದರೆ, ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಪ್ರಯಾಣದ ದರ ಇತ್ತೀಚೆಗೆ ಅತಿ ದುಬಾರಿಯಾಗಿದೆ ಎಂಬ ಬೇಸರ ಹೊರ ಹಾಕ್ತಿದ್ದಾರೆ. ಅಂದರೆ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಕ್ಯಾಬ್ ಸೇವೆಗಳು, ಬೇರೆ ರೈಡ್ ಆಪ್ಗಳಿಗಿಂತ ಹೆಚ್ಚು ದರ ವಿಧಿಸುತ್ತಿವೆ ಎಂಬ ಆರೋಪವಿದೆ. ರಸ್ತೆ ಸಂಪರ್ಕದಲ್ಲಿ ಈಗ ಮೊದಲಿಗಿಂತ ಸುಧಾರಣೆಯಾಗಿದೆ. ಪಿಕಪ್ ವ್ಯವಸ್ಥೆಯಲ್ಲೂ ಸುಗಮವಾಗಿದೆ. ಹೀಗಿದ್ರೂ ಮನೆಗೆ ತಲುಪುವ ವೆಚ್ಚ ಮಾತ್ರ ಕಡಿಮೆಯಾಗಿಲ್ಲ ಅನ್ನೋದು ಅವರ ಬೇಸರ.

ಅಂದಹಾಗೆ ಕಳೆದ ಎರಡು ತಿಂಗಳಿನಿಂದ ಈ ದರದಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ ಅನ್ನೋದು ಕೆಲ ಪ್ರಯಾಣಿಕರಿಂದ ಕೇಳಿಬಂದ ಆರೋಪ. ವಿಶೇಷವಾಗಿ ಸಂಜೆಯ ಸಮಯದಲ್ಲೇ ಹೆಚ್ಚು ದರ ತೋರಿಸೋದು. ಅದರಲ್ಲೂ ಒಂದೇ ದೂರಕ್ಕೆ ವಿವಿಧ ಆಪ್ಗಳಲ್ಲಿ ವಿಭಿನ್ನ ದರಗಳು ಕಾಣಿಸುತ್ತಿರುವುದು ಜನರಲ್ಲಿ ಗೊಂದಲ ಉಂಟುಮಾಡುತ್ತಿದೆ. ಕೆಲವೊಮ್ಮೆ ಒಂದು ಆಪ್ನಲ್ಲಿ 800 ರೂಪಾಯಿ ತೋರಿದರೆ, ಮತ್ತೊಂದು ಆಪ್ನಲ್ಲಿ ಅದೇ ಪ್ರಯಾಣಕ್ಕೆ 1,000 ರೂಪಾಯಿಗೂ ಹೆಚ್ಚು ಕೇಳಲಾಗುತ್ತಿದೆ. ಎಸ್ಯುವಿ ಅಥವಾ ದೊಡ್ಡ ವಾಹನಗಳನ್ನು ಆಯ್ಕೆ ಮಾಡಿದರೆ ವೆಚ್ಚ ಇನ್ನಷ್ಟು ಹೆಚ್ಚಾಗುತ್ತಿದೆ.
ಇನ್ನು ನಗರದ ಪ್ರಮುಖ ಪ್ರದೇಶಗಳಾದ ಇಂದಿರಾನಗರ, ಎಂಜಿ ರಸ್ತೆ, ಜೆಪಿ ನಗರ, ಆರ್ಟಿ ನಗರ ಮುಂತಾದ ಕಡೆಗಳಿಗೆ ಪ್ರಯಾಣಿಸುವ ದರಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಅದನ್ನಂತೂ ಕೇಳೋದೇ ಬೇಡ. ಸಾಮಾನ್ಯ ಕ್ಯಾಬ್ಗಳಿಗೆ 750 ರಿಂದ 950 ರೂಪಾಯಿವರೆಗೆ ದರ ತೋರಿಸುವ ಸಂದರ್ಭಗಳಿವೆ. ಕೆಲ ಸೇವೆಗಳು ಪ್ರೀಮಿಯಂ ಅಥವಾ ಎಲೆಕ್ಟ್ರಿಕ್ ವಾಹನಗಳಿಗೆ 1,300 ರೂಪಾಯಿಗಿಂತ ಹೆಚ್ಚು ದರ ವಿಧಿಸುತ್ತಿವೆ. ಕುಟುಂಬ ಸಮೇತರಾಗಿ ಪ್ರಯಾಣಿಸುವವರಿಗೆ ಇದು ಹೆಚ್ಚುವರಿ ಆರ್ಥಿಕ ಭಾರವಾಗಿದೆ.
ಇತ್ತ ಪ್ರಯಾಣಿಕರ ಅಭಿಪ್ರಾಯದಲ್ಲಿ, ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ಅಧಿಕೃತ ಸೇವೆಗಳು ಇತರ ಪ್ಲಾಟ್ಫಾರ್ಮ್ಗಳಿಗಿಂತ ಕನಿಷ್ಠ 15ರಿಂದ 20 ಪ್ರತಿಶತ ಹೆಚ್ಚು ದರ ಕೇಳುತ್ತಿವೆ. ಕೆಲವರು ಕಡಿಮೆ ದರದ ಆಯ್ಕೆಗಳನ್ನು ಹುಡುಕಲು ಹೆಚ್ಚಿನ ಸಮಯ ಕಳೆಯಬೇಕಾಗುತ್ತಿದೆ ಎಂದು ಹೇಳಿದ್ದಾರೆ. ಪ್ರಯಾಣದ ಬಳಿಕ ದಣಿದ ಸ್ಥಿತಿಯಲ್ಲಿ ಇರುವವರಿಗೆ ಇದು ಇನ್ನಷ್ಟು ತೊಂದರೆಯಾಗಿದೆ.
ಅಂದಹಾಗೆ ಸಂಬಂಧಪಟ್ಟ ಕಂಪನಿಗಳ ಪ್ರಕಾರ, ದರ ನಿಗದಿ ಬೇಡಿಕೆ ಮತ್ತು ಪೂರೈಕೆಯ ಆಧಾರದಲ್ಲಿ ನಡೆಯುತ್ತದೆ. ಒಂದೇ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರು ವಾಹನಗಳನ್ನು ಬುಕ್ ಮಾಡಿದರೆ ದರ ಏರಿಕೆ ಆಗುವುದು ಸಹಜ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿಮಾನ ನಿಲ್ದಾಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಹಲವು ಸೇವೆಗಳ ನಡುವೆ ಸ್ಪರ್ಧೆ ಇರುವುದರಿಂದ ಸ್ಪರ್ಧಾತ್ಮಕ ದರ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂಬುದೂ ಅವರ ಮಾತು. ಆದರೆ, ಕೆಲವು ಕಂಪನಿಗಳು ಈ ವಿಷಯಕ್ಕೆ ಪ್ರತಿಕ್ರಿಯಿಸಿಲ್ಲ.
ಒಟ್ಟಾರೆ, ವಿಮಾನ ನಿಲ್ದಾಣದಿಂದ ನಗರಕ್ಕೆ ಮರಳುವ ಪ್ರಯಾಣವು ಇನ್ನೂ ದುಬಾರಿಯಾಗಿಯೇ ಉಳಿದಿದೆ. ಪಾರದರ್ಶಕ ದರ ವ್ಯವಸ್ಥೆ ಮತ್ತು ಸಮಂಜಸ ಶುಲ್ಕದ ಅಗತ್ಯವಿದೆ ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ಈ ವಿಚಾರವನ್ನು ಗಮನಿಸಿ, ಜನರಿಗೆ ಅನುಕೂಲಕರ ಪರಿಹಾರ ಒದಗಿಸಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ.
More From GoodReturns

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!



Click it and Unblock the Notifications