ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಕರ್ನಾಟಕದ ರಾಜಧಾನಿ ಮತ್ತು ತಮಿಳುನಾಡು ರಾಜಧಾನಿ ಚೆನ್ನೈ ನಡುವಿನ ರೈಲು ಪ್ರಯಾಣವನ್ನ 25 ನಿಮಿಷಗಳಿಂದ 4 ಗಂಟೆವರೆಗೆ ಕಡಿಮೆ ಮಾಡಲು ನಿರ್ಧಾರ ಮಾಡಲಾಗಿದೆ. ಜೊತೆಗೆ ರೈಲು ವೇಗವನ್ನು ಹೆಚ್ಚಿಸುವ ಯೋಜನೆ ಮಾಡ್ತಿದೆ. ಈ ರೈಲು ಪ್ರಯಾಣದ ಸಮಯವನ್ನು ಪ್ರಸ್ತುತ ವೇಳಾಪಟ್ಟಿಗಿಂತ 25 ನಿಮಿಷಗಳು ಶೀಘ್ರದಲ್ಲೇ ಕಡಿಮೆಯಾಗಲಿದೆ.
ಹಾಗೆ ಐದು ಗಂಟೆಗಳನ್ನ ತೆಗೆದುಕೊಳ್ಳುವ ಶತಶಬ್ದಿಯ ಪ್ರಯಾಣದ ಸಮಯವು ಕೂಡ 20 ನಿಮಿಷಗಳಷ್ಟು ಕಡಿತಗೊಳ್ಳಲಿದೆ. ಇವು ಬೆಂಗಳೂರು ಹಾಗು ಜೋಲಾರ್ಪೇಟ್ಟೈ ವಿಭಾಗದಲ್ಲಿ ವೇಗದ ಮಿತಿಯನ್ನ ಹೆಚ್ಚಿಸುವ ಯೋಜನೆಯನ್ನ ಹೊಂದಿವೆ.

ಇನ್ನು ನೈಋತ್ಯ ರೈಲ್ವೇ ಬೆಂಗಳೂರು ವಿಭಾಗ (SWR) ಡಿಸೆಂಬರ್ ಐದರಂದು ಬೆಂಗಳೂರು ಜೋಲಾರ್ಪೇಟ್ಟೈ ವಿಭಾಗದಲ್ಲಿ ರೈಲಿನ ವೇಗದ ಅಂತಿಮ ಪ್ರಯೋಗವನ್ನ ವಿಭಾಗ ನಡೆಸುತ್ತಿದೆ. ಹಾಗೆ ಇದು ಗಂಟೆಗೆ 110 ಕಿ.ಮೀಟರ್ನಿಂದ 130 ಕಿಲೋ ಮೀಟರ್ನ ಮಿತಿಯನ್ನ ಹೊಂದಿದ್ದು, ರೈಲ್ವೇ ಸುರಕ್ಷತಾ ಆಯುಕ್ತರಿಂದ ಎಲ್ಲ ರೀತಿ ಸ್ಪಷ್ಟತೆ ಪಡೆದು ನಂತರ ಪರಿಷ್ಕೃತ ವೇಗವನ್ನ ಜಾರಿಗೆ ತರಲಾಗುವುದು.
ಪ್ರತಿಧಿನ ಜನರಿಗೆ ಸೇವೆಯನ್ನ ನೀಡುತ್ತಿರುವ ವಂದೇಭಾರತ್ ಮತ್ತು ಶತಾಬ್ದಿ ಎಕ್ಸ್ಪ್ರೆಸ್ ರೈಲುಗಳು ಈ ಪ್ರಯೋಗದ ಪ್ರಯೋಜನಗಳನ್ನ ಪಡೆಯಲಿವೆ. ಹಾಗೆ ರೈಲ್ವೇ ಸುರಕ್ಷತಾ ಆಯುಕ್ತರಿಂದ ಅನುಮತಿ ಸಿಕ್ಕ ನಂತರ ಈ ಹೋಸ ಯೋಜನೆಯನ್ನ ನವೀಕರಿಸಲಾಗುವುದು.
ವಿಭಾಗೀಯ ವೇಗವನ್ನು ಹೆಚ್ಚಿಸಲು ಡಿಸೆಂಬರ್ 5 ರಂದು SWRನ ಬೆಂಗಳೂರು ವಿಭಾಗವು ಬೆಂಗಳೂರು-ಜೋಲಾರ್ಪೆಟ್ಟೈ ವಿಭಾಗದಲ್ಲಿ ವೇಗದ ಪ್ರಯೋಗವನ್ನು ನಡೆಸಲಿದೆ ಎಂದು SWR ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಈ ಪ್ರಯೋಗವನ್ನ ನಡೆಸುವಾಗ ರೈಲ್ವೆ ಹಳಿಗಳಿಗೆ ಪ್ರವೇಶ ಮಾಡದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಹಾಗೆ ನಿಲ್ದಾಣದ ಪ್ಲಾಟ್ಫಾರ್ಮ್ಗಳಲ್ಲಿ ಪ್ರಯಾಣಿಕರು ಎಚ್ಚರಿಕೆಯಿಂದರಬೇಕು, ಟ್ರ್ಯಾಕ್ಗಳಿಂದ ಸಾರ್ವಜನಿಕರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಅತಿಕ್ರಮಣವನ್ನು ತಪ್ಪಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.
ಕಳೆದ ವರ್ಷ ಚೆನ್ನೈ-ಜೋಲಾರ್ಪೆಟ್ಟೈ ಮಾರ್ಗ ಸಂಚಾರವನ್ನು ಗಂಟೆಗೆ 130 ಕಿ.ಮೀಟರ್ ವೇಗವನ್ನು ಬೆಂಬಲಿಸಲು ನವೀಕರಿಸಲಾಯಿತು. ಬೆಂಗಳೂರು-ಜೋಲಾರ್ಪೇಟ್ಟೈ ವಿಭಾಗವು ಅನುಮೋದನೆ ಪಡೆದ ನಂತರ, ಇಡೀ ಚೆನ್ನೈ ಮಾರ್ಗದ ವೇಗದ ಮಿತಿ ಗಂಟೆಗೆ 130 ಕಿ.ಮೀಟರ್ ಆಗಲಿದೆ. ಈ ನವೀಕರಣವು ಎರಡು ನಗರಗಳ ನಡುವೆ ಪ್ರತಿಧಿನ ಚಲಿಸುವ ಎರಡು ವಂದೇ ಭಾರತ್ ಮತ್ತು ಎರಡು ಶತಾಬ್ದಿ ರೈಲುಗಳಿಗೆ ಪ್ರಯೋಜನ ನೀಡಲಿವೆ.
ವಂದೇ ಭಾರತ್ ರೈಲು ಪ್ರಾಯೋಗಿಕ ರನ್ಗಳ ಸಮಯದಲ್ಲಿ ಗರಿಷ್ಠ 183 ಕಿಮೀ ವೇಗವನ್ನು ಸಾಧಿಸಿದರೆ, ಟ್ರ್ಯಾಕ್ ಪರಿಸ್ಥಿತಿಗಳಿಂದಾಗಿ ಅದರ ಕಾರ್ಯಾಚರಣೆಯ ವೇಗವನ್ನು 160 ಕಿಲೋ ಮೀಟರ್ ಗಂಟೆಗೆ ಸೀಮಿತಗೊಳಿಸಲಾಗಿದೆ.
ಬೆಂಗಳೂರು-ಚೆನ್ನೈ ನಡುವಿನ 360-ಕಿಮೀ ಮಾರ್ಗವು ಪ್ರಮುಖ ಕಾರಿಡಾರ್ ಆಗಿದ್ದು, ಹೆಚ್ಚಿನ ಸಾಂದ್ರತೆಯ ಮಾರ್ಗವಾಗಿದೆ. ಹಾಗೆ ಪ್ರಮುಖ ಟೆಕ್ ಪಾರ್ಕ್ಗಳು, ಉತ್ಪಾದನಾ ಘಟಕಗಳು ಮತ್ತು ವಸತಿ ಟೌನ್ಶಿಪ್ಗಳನ್ನು ಇದು ಹೊಂದಿದೆ. ಇದು ಆಟೋಮೊಬೈಲ್ ಉತ್ಪಾದನಾ ಕೇಂದ್ರವಾದ ಚೆನ್ನೈ ಮತ್ತು ಪ್ರಮುಖ ಟೆಕ್ ಮತ್ತು ಸ್ಟಾರ್ಟ್ಅಪ್ ಕೇಂದ್ರವಾದ ಬೆಂಗಳೂರನ್ನು ಸಂಪರ್ಕಿಸುತ್ತದೆ.
SWR ಅಧಿಕಾರಿಗಳು ಅನುಮತಿಸುವ ವೆಗವನ್ನು 130 ಕಿಲೋ ಮೀಟರ್ ಗಂಟೆಗೆ ಹೆಚ್ಚಿಸಲು ಸೇತುವೆಗಳನ್ನು ಬಲಪಡಿಸುವುದು ಅಥವಾ ಪುನರ್ನಿರ್ಮಾಣ ಮಾಡುವುದು, ಫೆನ್ಸಿಂಗ್, ಲೆವೆಲ್ ಕ್ರಾಸಿಂಗ್ಗಳನ್ನು ತೆಗೆದುಹಾಕುವುದು ಮತ್ತು ಕರ್ವ್ಗಳು ಅಥವಾ ಗ್ರೇಡಿಯಂಟ್ಗಳನ್ನು ಚಪ್ಪಟೆಗೊಳಿಸುವುದು ಸೇರಿದಂತೆ ಗಮನಾರ್ಹ ಸುಧಾರಣೆಗಳು ಅಗತ್ಯವಿರುತ್ತದೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ. ಅದಲ್ಲದೆ, ನಿಲುಗಡೆಗಳ ಸಂಖ್ಯೆ ಕೂಡ ಸರಾಸರಿ ವೇಗದ ಮೇಲೆಯೇ ಪರಿಣಾಮ ಬೀರುತ್ತದೆ ಎಂದು SWR ಅಧಿಕಾರಿಯೊಬ್ಬರು ವೇಗದ ಪರಿಷ್ಕರಣೆ ಕುರಿತು ಹೇಳಿದರು.
ವಂದೇ ಭಾರತ್ ಎಕ್ಸ್ಪ್ರೆಸ್ ಬಗ್ಗೆ ತಿಳಿಯಿರಿ
ವಂದೇ ಭಾರತ್ ಎಕ್ಸ್ಪ್ರೆಸ್ ಹೈಸ್ಪೀಡ್, ಅರೆ-ಹೈ-ಸ್ಪೀಡ್ ರೈಲು ಸೇವೆಯಾಗಿದ್ದು, ಇದನ್ನು ಭಾರತೀಯ ರೈಲ್ವೇಗಳು ನಿರ್ವಹಿಸುತ್ತವೆ. ಇದು "ಮೇಕ್ ಇನ್ ಇಂಡಿಯಾ" ಉಪಕ್ರಮದ ಭಾಗವಾಗಿದೆ. ಇದು ದೇಶದ ರೈಲ್ವೆ ಜಾಲವನ್ನು ಹೆಚ್ಚಿಸಲು ಮತ್ತು ವೇಗವಾದ, ಹೆಚ್ಚು ಆಧುನಿಕ ರೈಲುಗಳೊಂದಿಗೆ ರೈಲು ಸೇವೆಗಳನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಪರಿಚಯವು ಭಾರತೀಯ ರೈಲ್ವೆ ಜಾಲವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ರೈಲುಗಳು ವಿದ್ಯುತ್ ಚಾಲಿತ ಸಾರಿಗೆಯನ್ನು ಉತ್ತೇಜಿಸುವ ಮೂಲಕ 2030 ರ ವೇಳೆಗೆ "ನೆಟ್ ಝೀರೋ" ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಕಡೆಗೆ ತಳ್ಳುವಿಕೆಯ ಭಾಗವಾಗಿದೆ . ವಂದೇ ಭಾರತ್ ಎಕ್ಸ್ಪ್ರೆಸ್ ಇಂಟರ್ಸಿಟಿ ರೈಲು ಪ್ರಯಾಣವನ್ನು ಸುಧಾರಿಸಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ , ಇದು ವೇಗ ಮತ್ತು ಸೌಕರ್ಯದ ವಿಷಯದಲ್ಲಿ ವಿಮಾನ ಪ್ರಯಾಣದೊಂದಿಗೆ ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ.
ಭಾರತ ಸರ್ಕಾರ ಮತ್ತು ಭಾರತೀಯ ರೈಲ್ವೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಿದೆ, 2025-2030 ರ ವೇಳೆಗೆ ಬಹು ಹೊಸ ರೈಲುಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ . ಈ ರೈಲುಗಳು ಭಾರತದಾದ್ಯಂತ ವಿವಿಧ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ರೈಲುಗಳಲ್ಲಿ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications