ಬೆಂಗಳೂರು ನಗರದ ಮೆಟ್ರೋ ಸಂಚಾರವನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನದಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಇದೀಗ ತನ್ನ ಪ್ರಸ್ತುತ ಡಿಪೋಗಳ ಸಾಮರ್ಥ್ಯವನ್ನು ಹೆಚ್ಚಿಸಲು ನವೀಕರಣ ಕಾರ್ಯಗಳಲ್ಲಿ ತೊಡಗಿದೆ. ಈ ನವೀಕರಣದ ಪ್ರಮುಖ ಉದ್ದೇಶವೆಂದರೆ ಮುಂದಿನ ಕೆಲವು ತಿಂಗಳಲ್ಲಿ ಬರುವ 21 ಹೊಸ ಮೆಟ್ರೋ ರೇಕ್ಗಳಿಗೆ ಅಗತ್ಯವಿರುವ ನಿರ್ವಹಣಾ ವ್ಯವಸ್ಥೆಯನ್ನು ಕಲ್ಪಿಸುವುದು.

ಹೆಚ್ಚುತ್ತಿರುವ ಮೆಟ್ರೋ ಚಲನವಲನಕ್ಕೆ ತಕ್ಕ ನವೀಕರಣ:
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪೀಣ್ಯ (ಹಸಿರು ಮಾರ್ಗ), ಬೈಯಪ್ಪನಹಳ್ಳಿ ಮತ್ತು ಕಾಡುಗೋಡಿ-ವೈಟ್ಫೀಲ್ಡ್ (ಪರ್ಪಲ್ ಲೈನ್) ಡಿಪೋಗಳನ್ನು ನವೀಕರಿಸಲಾಗುತ್ತಿದೆ. ಇದರ ಜೊತೆಗೆ, ಹಳದಿ ಮಾರ್ಗದ (ಆರ್ವಿ ರಸ್ತೆ-ಬೊಮ್ಮಸಂದ್ರ) ಸೇವೆಗಾಗಿ ಹೆಬ್ಬಗೋಡಿಯಲ್ಲಿ ಹೊಸ ಡಿಪೋ ಕೂಡ ನಿರ್ಮಾಣದಲ್ಲಿದೆ.
ಪೀಣ್ಯ ಡಿಪೋಗೆ ಹೆಚ್ಚುವರಿ ಪ್ಲಾಟ್ಫಾರ್ಮ್ಗಳ ನಿರ್ಮಾಣ, ಜ್ಯಾಕ್ ಪಿಟ್ಗಳು (ಮುರಿದ ಬೋಗಿಗಳನ್ನು ದುರಸ್ತಿಗೆ ತರುವ ವ್ಯವಸ್ಥೆ) ಮತ್ತು ಇತರೆ ತಂತ್ರಜ್ಞಾನ ಸೌಲಭ್ಯಗಳನ್ನು ಸೇರಿಸಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳ ಒಟ್ಟು ವೆಚ್ಚವನ್ನು ₹1.94 ಕೋಟಿ ಎಂದು ಅಂದಾಜಿಸಲಾಗಿದೆ.
ಬೈಯಪ್ಪನಹಳ್ಳಿ ಡಿಪೋ:
ಬಿಎಂಆರ್ಸಿಎಲ್ನ ಪ್ರಕಾರ, ಬೈಯಪ್ಪನಹಳ್ಳಿ ಡಿಪೋ ಪೂರ್ಣ ಪ್ರಮಾಣದ ಪುನರ್ ವಿನ್ಯಾಸವನ್ನು ಪಡೆದುಕೊಂಡಿದ್ದು, ₹249.19 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿದೆ. ಇದು BMRCL ಗೆ ಎರಡು ಹಂತದ ಸೌಲಭ್ಯ ಇರುವ ಮೊದಲ ಡಿಪೋ ಆಗಿದ್ದು, ವಿಮಾನ ನಿಲ್ದಾಣ ಮಾರ್ಗ (ಫೇಸ್ 2B) ಮತ್ತು ಹೊರ ವರ್ತುಲ ಮಾರ್ಗ (ಫೇಸ್ 2A)ದಲ್ಲಿ ಸಂಚರಿಸುವ ಟ್ರೇನ್ಗಳಿಗೆ ಸೇವೆ ನೀಡಲಿದೆ.
ಈ ಡಿಪೋ ಈಗ ಪರ್ಪಲ್ ಲೈನ್ (ಚಲ್ಲಘಟ್ಟ-ವೈಟ್ಫೀಲ್ಡ್) ಮಾರ್ಗಕ್ಕೆ ಸೇವೆ ನೀಡುತ್ತಿದೆ. ಆದರೆ ಶೆಟ್ಟಿಗೆರೆ ಡಿಪೋ ಕಾರ್ಯಾರಂಭಿಸಿದ ಬಳಿಕ, ಬೈಯಪ್ಪನಹಳ್ಳಿ ಡಿಪೋ ವಿಮಾನ ನಿಲ್ದಾಣ ಮಾರ್ಗದ ನಿರ್ವಹಣೆಯ ತಾಳಮೇಳಕ್ಕೆ ಸಿದ್ಧವಾಗಲಿದೆ. ನವೀಕರಣದ ನಂತರ ಪರ್ಪಲ್ ಲೈನ್ನ ನಿರ್ವಹಣೆಯ ಹೊಣೆ ಹೊರುವ ಕೆಲಸವನ್ನು ಚಲ್ಲಘಟ್ಟ ಮತ್ತು ಕಾಡುಗೋಡಿಯ ಡಿಪೋಗಳ ನಡುವೆ ಹಂಚಲಾಗಲಿದೆ.
ಮೆಟ್ರೋ ವಿಸ್ತರಣೆಗೆ ಹೊಸ 5 ಡಿಪೋಗಳು:
ಬೃಹತ್ ಮೆಟ್ರೋ ಜಾಲದ ನಿರ್ವಹಣೆಗೆ ಹಾಗೂ ದೈನಂದಿನ ಕಾರ್ಯಾಚರಣೆಗೆ ತಕ್ಕಸಹಕಾರ ನೀಡಲು, BMRCL ಐದು ಹೊಸ ಡಿಪೋಗಳ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ:
- ಶೆಟ್ಟಿಗೆರೆ: ವಿಮಾನ ನಿಲ್ದಾಣ ಮಾರ್ಗದ ಪ್ರಮುಖ ನಿರ್ವಹಣಾ ಕೇಂದ್ರ.
- ಕೊತ್ತನೂರು: ನಾಗವಾರ-ಕಲೆನ ಅಗ್ರಹಾರ ನಡುವಿನ ಗುಲಾಬಿ ಮಾರ್ಗ.
- ಅಂಜನಾಪುರ: ಹಸಿರು ಮಾರ್ಗದ ವಿಸ್ತರಣೆಗೆ ಸಹಾಯ.
- ಚಲ್ಲಘಟ್ಟ: ನೇರಳೆ ಮಾರ್ಗದ ವಿಸ್ತರಣೆಯ ಪ್ರಮುಖ ಭಾಗ.
- ಹೆಬ್ಬಗೋಡಿ: ಹಳದಿ ಮಾರ್ಗಕ್ಕೆ ಬೇಕಾದ ವ್ಯವಸ್ಥೆ.
ಬಿಗಿ ಯೋಜನೆ, ದಕ್ಷ ನಿರ್ವಹಣೆ:
ಇದರೆಲ್ಲದರ ಹಿನ್ನೆಲೆಯು ಒಂದೇ.. ನಗರದ ವ್ಯಾಪಕ ವಿಸ್ತರಿಸುತ್ತಿರುವ ಮೆಟ್ರೋ ಸಂಚಾರಕ್ಕೆ ತಾಂತ್ರಿಕ ಹಾಗೂ ಲಾಜಿಸ್ಟಿಕ್ ಬೆಂಬಲವನ್ನು ಮತ್ತಷ್ಟು ಶಕ್ತಿಶಾಲಿಯಾಗಿ ರೂಪಿಸುವುದು. ಹೆಚ್ಚು ರೈಲುಗಳ ಸಂಚಾರ, ಕಡಿಮೆ ನಿರ್ವಹಣಾ ವಿಳಂಬ, ವೇಗದ ತಂತ್ರಜ್ಞಾನ ಒಳಗೊಂಡ ವ್ಯವಸ್ಥೆ ಮತ್ತು ಪ್ರವಾಸಿಗರಿಗೆ ಸುಗಮ ಅನುಭವವನ್ನು ನೀಡುವ ಉದ್ದೇಶ ಇವೆಲ್ಲದಕ್ಕೂ ಹಿನ್ನಲೆಯಲ್ಲಿ ನಿಂತಿವೆ.
More From GoodReturns

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ



Click it and Unblock the Notifications