ಬೆಂಗಳೂರಿಗೆ ಜೀವಾಳ ಆಗಿರುವ ನಮ್ಮ ಮೆಟ್ರೋ ವಿಚಾರವಾಗಿ ಒಂದಲ್ಲ ಒಂದು ರೀತಿಯ ಗುಡ್ನ್ಯೂಸ್ ಸಿಗ್ತಿರುತ್ತೆ. ಆದರೆ ಈ ಒಂದು ಮಾರ್ಗದ ಮೆಟ್ರೋ ಮಾತ್ರ ಭಾರಿ ನಿರಾಸೆ ಉಂಟು ಮಾಡಿದೆ. ಕಾರಿಡಾರ್-1:- ಜೆಪಿ ನಗರ ಟು ಕೆಂಪಾಪುರ ಹಾಗೂ ಕಾರಿಡಾರ್-2:- ಹೊಸಹಳ್ಳಿ ಟು ಕಡಬಗೆರೆಗೆ ಮಾರ್ಗದಲ್ಲಿ ನಿರ್ಮಾಣವಾಗಬೇಕಿರುವ ಆರೆಂಜ್ ಲೈನ್ ಮೆಟ್ರೋದಿಂದ, ಭಾರಿ ನಷ್ಟ ಉಂಟಾಗಿದೆ. ಅದು ಹೇಗೆ ಅಂತೀರಾ ಮುಂದೆ ಓದಿ ತಿಳಿಯಿರಿ.

ಕಾಮಗಾರಿ ವಿಳಂಬ, ನೂರಾರು ಕೋಟಿ ನಷ್ಟ:
ಹೌದು, ಆರೆಂಜ್ ಲೈನ್ ಮೆಟ್ರೋ ಬೆಂಗಳೂರಿನ ಬಹು ನಿರೀಕ್ಷಿತವಾಗ ಮೆಟ್ರೋ ಮಾರ್ಗ. ಈ ಮೆಟ್ರೋಗೆ ಕೇಂದ್ರ ಸರ್ಕಾರವೇ ಗ್ರೀನ್ ಸಿಗ್ನಲ್ ನೀಡಿ ಒಂದು ವರ್ಷವಾಯ್ತು. ಪ್ರಧಾನಿ ಮೋದಿಯವರೇ ಇದಕ್ಕೆ ಶಂಕುಸ್ಥಾಪನೆ ಕೂಡ ಮಾಡಿದ್ರು. ಆದ್ರೆ ಕಾಮಗಾರಿ ಮಾತ್ರ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಕಾಮಗಾರಿ ಆರಂಭಿಸೋಕೆ ಬಿಎಂಆರ್ಸಿಎಲ್ ಕೂಡ ಮುಂದಾಗ್ತಿಲ್ಲ. ಕಾಮಗಾರಿ ವಿಳಂಬ ಆಗಿ ಆಗಿ ಆಗಿರೋ ನಷ್ಟವೆಷ್ಟು ಗೊತ್ತಾ? ಒಂದೆರಡು ಕೋಟಿಯಲ್ಲ, ನೂರಾರು ಕೋಟಿ ಅನ್ನೋ ಮಾಹಿತಿ ತಿಳಿದುಬಂದಿದೆ.
974 ಕೋಟಿ ರೂ. ಹೆಚ್ಚುವರಿ ಹೊರೆ ಸಾಧ್ಯತೆ:
ಇನ್ನು ನಮ್ಮ ಮೆಟ್ರೋ ಕೂಡ ಟೆಂಡರ್ ಕರೆಯಲು ಮುಂದಾಗಿಲ್ಲ. ಕೇಂದ್ರ ಸರ್ಕಾರವೇ ಅನುಮತಿ ನೀಡಿದ್ರೂ, ಕ್ಯಾರೆ ದಾಸಯ್ಯ ಅನ್ನುವಂತಿಲ್ಲ. ಅನುಮತಿ ಸಿಕ್ಕಿ ಒಂದು ವರ್ಷದ ಮೇಲೆ 123 ದಿನಗಳು ಕಳೆದಿದ್ರೂ, ಕೆಲಸ ಮುಂದಕ್ಕೆ ಸಾಗ್ತಿಲ್ಲ. ಅಂದಹಾಗೆ ನಷ್ಟ ಹೇಗೆ ಎಂದು ಕೇಳಬಹುದು. ಒಂದೇ ಒಂದು ದಿನ ಮೆಟ್ರೋ ಕಾಮಗಾರಿ ವಿಳಂಬ ಆದ್ರೆ, ನಷ್ಟ ಹೆಚ್ಚುವರಿ ಹೊರೆ ಆಗೋದು ಬರೋಬ್ಬರಿ 2 ಕೋಟಿ ರೂ. ಆದ್ರೆ ಇಲ್ಲಿ ಮೆಟ್ರೋ ಕಾಮಗಾರಿ ವಿಳಂಬ ಆಗಿ, ಸುಮಾರು 487 ದಿನಗಳು ಕಳೆದಿವೆ. ಅಂದ್ರೆ ಮಾಹಿತಿ ಪ್ರಕಾರ 974 ಕೋಟಿ ರೂ. ಹೆಚ್ಚುವರಿ ಹೊರೆಯಾಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
2024ರ ಆಗಸ್ಟ್ನಲ್ಲೇ ಕೇಂದ್ರ ಸರ್ಕಾರ, ಈ ಮೂರನೇ ಹಂತದ ಆರೆಂಜ್ ಲೈನ್ ಮೆಟ್ರೋಗೆ ಗ್ರೀನ್ ಸಿಗ್ನಲ್ ನೀಡಿದೆ. ಇತ್ತ ರಾಜ್ಯ ಸರ್ಕಾರ ನೋಡಿದ್ರೆ ಈ ಇಡೀ ಮಾರ್ಗವನ್ನ ಡಬಲ್ ಡೆಕ್ಕರ್ ಮಾಡಬೇಕು ಎಂಬ ತೀರ್ಮಾನ ಮಾಡಿದೆ. ಈ ಯೋಜನೆಗಾಗಿಯೇ ಕಾಮಗಾರಿಗಾಗಿ ಹೆಚ್ಚುವರಿ 9 ಸಾವಿರ ಕೋಟಿ ಬೇಕು. ಈ ಕಾರಣಕ್ಕೋಸ್ಕರವೇ ಟೆಂಡರ್ ಪ್ರಕ್ರಿಯೆ ವಿಳಂಬ ಆಗ್ತಿರೋದು ಎಂಬ ಆರೋಪವೂ ಕೇಳಿ ಬರ್ತಿದೆ. ಹೀಗಿರುವಾಗ ಯೋಜನೆಯನ್ನ ದಿನದಿಂದ ದಿನಕ್ಕೆ ಎಗರಿಸ್ತಿದ್ದಾರೆ. ಕಾಮಗಾರಿ ಮಾತ್ರ ಶುರು ಮಾಡಿಲ್ಲ.
ಒಟ್ಟಿನಲ್ಲಿ ಹಲವು ಕಾರಣಗಳಿಂದ ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ವಿಳಂಬ ಆಗ್ತಿದೆ. ಅದರ ಜೊತೆಗೆ ಸಾವಿರಾರು ಕೋಟಿ ಟೆಂಡರ್ ಕಾಸ್ಟ್ ಆದರೆ, ವಿಳಂಬದ ಕಾರಣದಿಂದಲೇ ಹೆಚ್ಚುವರಿ ನಷ್ಟ ಎದುರಾಗ್ತಿದೆ. ಎಲ್ಲ ಸೇರಿದರೆ ಬರೋಬ್ಬರಿ ವೆಚ್ಚ 15,611 ಕೋಟಿ ರೂ.. ಇದರ ಜೊತೆಗೆ 500 ಕೋಟಿ. ರೂ. ಹೊರೆ. ಅಂದರೆ 16 ಕೋಟಿಗೂ ಹೆಚ್ಚು ಹೊರೆಯಾಗುತ್ತಾ ಎಂಬ ಭೀತಿ ಶುರುವಾಗಿದೆ.
More From GoodReturns

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications