ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಎರಡನೇ ಏರ್ಪೋರ್ಟ್ ಬೇಕೆನ್ನುವ ಕೂಗು ಹೆಚ್ಚಾಗಿದೆ. ಅದಕ್ಕಾಗಿ ಬೇಕಾಗಿರುವ ಕೆಲಸಗಳು, ಚುರುಕಾಗಿ ನಡೆಯುತ್ತಿವೆ. ಈಗಾಗ್ಲೇ ಈ ಯೋಜನೆಗೆ 3 ಸ್ಥಳಗಳು ಶಾರ್ಟ್ಲಿಸ್ಟ್ ಆಗಿದೆ. ಈ ಯೋಜನೆಯ ಪ್ರಗತಿಗಾಗಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರನ್ನು ಭೇಟಿಯಾಗಲು, ಸಚಿವ ಎಂ.ಬಿ ಪಾಟೀಲ್ ಅವರು ರೆಡಿಯಾಗಿದ್ದಾರೆ.

ಮೂರು ಪ್ರಮುಖ ಸ್ಥಳಗಳು ಪರಿಶೀಲನೆಯಲ್ಲಿವೆ:
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಏಳು ಸ್ಥಳಗಳನ್ನು ಪರಿಶೀಲನೆಗೆ ಒಳಪಡಿಸಿತ್ತು. ಈ ಪೈಕಿ ಮೂರು ತಾಣಗಳನ್ನು ಅಂತಿಮವಾಗಿ ಪ್ರಾಥಮಿಕ ಪಟ್ಟಿಗೆ ಸೇರಿಸಲಾಗಿದೆ. ಅವುಗಳೆಂದರೆ:
- ಕಗ್ಗಲಿಪುರ (ಕನಕಪುರ ರಸ್ತೆ)
- ಹಾರೋಹಳ್ಳಿ (ಕನಕಪುರ ರಸ್ತೆ)
- ಚಿಕ್ಕಸೋಲೂರು (ನೆಲಮಂಗಲ-ಕುಣಿಗಲ್ ರಸ್ತೆ)
ಈ ಮೂರೂ ತಾಣಗಳು ಬೆಂಗಳೂರಿನ ಕೇಂದ್ರದಿಂದ 25 ಕಿಮೀ ರಿಂದ 45 ಕಿಮೀ ವ್ಯಾಪ್ತಿಯ ಒಳಗಿವೆ. ಆದರೆ ಈ ಸ್ಥಳಗಳ ಸೂಕ್ತತೆಯ ಬಗ್ಗೆ ವಿಮಾನಯಾನ ತಜ್ಞರು ಹಾಗೂ ಸಾರ್ವಜನಿಕರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಕೇಂದ್ರಕ್ಕೆ ರಾಜ್ಯದಿಂದ ಪ್ರಸ್ತಾವನೆ:
ರಾಜ್ಯ ಸರ್ಕಾರ ಈಗಾಗಲೇ 4,500 ಎಕರೆ ಭೂಮಿಯನ್ನು ಹೊಸ ವಿಮಾನ ನಿಲ್ದಾಣಕ್ಕಾಗಿ ಮೀಸಲಿಟ್ಟಿರುವ ಬಗ್ಗೆ ಕೇಂದ್ರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ, ಸ್ಥಳೀಯ ಜನತೆ ಮತ್ತು ರೈತರು ತೋರಿಸುತ್ತಿರುವ ವಿರೋಧವು ಯೋಜನೆಯ ಮುಂದುವರೆದಿಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಇತ್ತೀಚೆಗೆ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ ಸಂಬಂಧಿತ ಭೂ ವಿವಾದವು ಅಧಿಕಾರಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿದೆ.
HAL ವಿಮಾನ ನಿಲ್ದಾಣದ ಪುನಶ್ಚೇತನದ ಚರ್ಚೆ ಮತ್ತೆ?
ಈ ನಡುವೆ, ಕೆಲವು ವಿಮಾನಯಾನ ತಜ್ಞರು ಮತ್ತು ಉದ್ದಿಮೆ ವಲಯದ ಅನೇಕರ ಮನವಿ HAL ವಿಮಾನ ನಿಲ್ದಾಣವನ್ನು ಮತ್ತೆ ಸಕ್ರಿಯಗೊಳಿಸುವ ಕುರಿತು ಸಹ ನಡೆಯುತ್ತಿದೆ. ಇದು ಈಗ ನಗರ ಮಿತಿಯೊಳಗೇ ಇದ್ದರೂ, ನಾಗರಿಕ ವಿಮಾನಯಾನಕ್ಕಾಗಿ ಸೀಮಿತವಾಗಿ ಬಳಸಲ್ಪಡುತ್ತಿದೆ. ಇದು ಸಮರ್ಥ ರನ್ವೇ, ಭದ್ರತಾ ಮೂಲಸೌಕರ್ಯ ಮತ್ತು ಉತ್ತಮ ಸಂಪರ್ಕ ಹೊಂದಿರುವುದರಿಂದ, HAL ನ ಪುನಶ್ಚೇತನ ಬದಲಿಗೆ ಇನ್ನೊಂದು ಮೌಲ್ಯಮಾಪನವಾಗುತ್ತಿದೆ.
ತಮಿಳುನಾಡಿನಿಂದ ಪ್ರತ್ಯೇಕ ಪೈಪೋಟಿ:
ಕರ್ನಾಟಕದ ಯೋಜನೆಗೆ ಪಕ್ಕದ ತಮಿಳುನಾಡು ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿರುವುದರಿಂದ ಪೈಪೋಟಿಯಾಗಿದೆ. ಹೊಸೂರು, ಬೆಂಗಳೂರು ವಿಮಾನ ನಿಲ್ದಾಣದಿಂದ ಕೇವಲ 150 ಕಿಮೀ ದೂರದಲ್ಲಿದೆ. ತಮಿಳುನಾಡು ಈಗಾಗಲೇ ಎರಡು ಸ್ಥಳಗಳನ್ನು ಗುರುತಿಸಿದ್ದು, ಕೇಂದ್ರದಿಂದ NOC (ನಿರಾಕ್ಷೇಪಣಾ ಪ್ರಮಾಣಪತ್ರ) ಪಡೆಯಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಹತ್ತಿರದ ಎರಡು ರಾಜ್ಯಗಳು ಒಂದೇ ರೀತಿಯ ವಿಮಾನ ಯೋಜನೆಗಾಗಿ ಸ್ಪರ್ಧಿಸುತ್ತಿರುವುದು ಗಮನಾರ್ಹವಾಗಿದೆ.
ಮುಂದಿನ ಹಂತಗಳಲ್ಲಿ ಏನಾಗಬಹುದು?
- ಕೇಂದ್ರದಿಂದ AAI ಅಂತಿಮ ವರದಿ ಲಭ್ಯವಾಗುವುದು ನಿರ್ಣಾಯಕ
- ಸ್ಥಳೀಯ ಜನರ ಬೆಂಬಲ, ಪರಿಸರ ಅನುಮತಿಗಳು, ಭೂಸ್ವಾಧೀನ
- ತಾಂತ್ರಿಕವಾಗಿ ಅನುಕೂಲವಾಗಿರುವ ಸ್ಥಳವನ್ನೇ ಆಯ್ಕೆಮಾಡುವದನ್ನು ರಾಜ್ಯ ಸರ್ಕಾರ ಒತ್ತಿಸಿದೆ
ಪ್ರಸ್ತುತ ವಿಮಾನ ನಿಲ್ದಾಣದ ಪರಿಸ್ಥಿತಿ:
ಬಳಕೆಯ ಪ್ರಮಾಣ ಹೆಚ್ಚುತ್ತಿರುವುದರಿಂದ, ಕೆಂಪೇಗೌಡ ವಿಮಾನ ನಿಲ್ದಾಣದ ಇನ್ನೂ ಹೆಚ್ಚು ವಿಮಾನ ಸಂಚಾರವನ್ನು ನಿರ್ವಹಿಸಲು ಸಾಮರ್ಥ್ಯ ಕಡಿಮೆಯಾಗುತ್ತಿದೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ ದಶಕದೊಳಗೆ ಈ ವಿಮಾನ ನಿಲ್ದಾಣ ಕೂಡಾ ಅತಿಭಾರ ಎದುರಿಸಲಿದೆ ಎಂಬ ಆತಂಕ ಉಂಟಾಗಿದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications