Bengaluru 2nd Airport: ಕನಕಪುರದಲ್ಲಿ ಬೆಂಬಲ, ನೆಲಮಂಗಲದಲ್ಲಿ ತೀವ್ರ ವಿರೋಧ! ಹಾಗಾದ್ರೆ ಹೊಸ ಏರ್ಪೋರ್ಟ್ ಎಲ್ಲಿ?

ಬೆಂಗಳೂರು ನಗರದ ವಿಸ್ತರಣೆ ಅತಿ ವೇಗದಲ್ಲಿ ನಡೆಯುತ್ತಿದೆ. ಈಗಾಗಲೇ ಕಾರ್ಯನಿರತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಪ್ರಯಾಣಿಕರ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆ, ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕೆ ಬೇಕಾಗಿದೆ. ಇದರ ಕುರಿತಾಗಿಯ ಕೆಲಸಗಳು ಕೂಡ ನಡೆಯುತ್ತಿದೆ. ಈಗ ಹೊಸ ಸುದ್ದಿ ಏನೆಂದರೆ ಈ ಯೋಜನೆ ಇಂದಿನ ದಿನಗಳಲ್ಲಿ ಭಾರೀ ವಿರೋಧ ಮತ್ತು ವಿಭಿನ್ನ ಅಭಿಪ್ರಾಯಗಳಿಗೆ ವೇದಿಕೆಯಾಗಿದೆ.

2ನೇ ಏರ್ಪೋರ್ಟ್ಗೆ ಕನಕಪುರ, ನೆಲಮಂಗಲದಲ್ಲಿ ಮಿಶ್ರ ಪ್ರತಿಕ್ರಿಯೆ!

ವಿರೋಧವೆಂದರೆ ಎರಡನೇ ಏರ್‍‌ಪೋರ್ಟ್ ಬೇಡ ಎಂದಲ್ಲ. ಕನಕಪುರ, ನೆಲಮಂಗಲ ತುಮಕೂರು ..ಈ ಮೂರರಲ್ಲಿ ಒಂದು ಜಾಗ ವಿಮಾನ ನಿಲ್ದಾಣಕ್ಕೆ ಮೀಸಲಾಗುತ್ತದೆ. ಈ ಎರಡೂ ಸ್ಥಳಗಳಲ್ಲಿ ಈಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಪರ್ಧೆ, ವಿವಾದ ಎಲ್ಲವೂ ಶುರುವಾಗಿದೆ.

ಎರಡನೇ ವಿಮಾನ ನಿಲ್ದಾಣದ ಅನ್ವೇಷಣೆ ಆರಂಭ:

ಕಳೆದ ಕೆಲ ವಾರಗಳಿಂದ ಇವು ಮೂರು ಪ್ರಮುಖ ಸ್ಥಳಗಳ ಕನಕಪುರ ರಸ್ತೆ, ನೆಲಮಂಗಲ ಮತ್ತು ತುಮಕೂರು ತಪಾಸಣೆಗೆ AAI ನಿರತರಾಗಿದ್ದಾರೆ. ಪ್ರಾಥಮಿಕವಾಗಿ ಟಾಪೋಗ್ರಾಫಿ, ಭೂಅನುಕೂಲತೆ, ಸಂಪರ್ಕ ಸೌಲಭ್ಯ, ಜನಸಂಖ್ಯೆ ಸಾಂದ್ರತೆ ಮತ್ತು ಪರಿಸರದ ಮೇಲೆ ಪರಿಣಾಮ ಇತ್ಯಾದಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮೊದಲ ಬಾರಿಗೆ ಕೆಲವು ಗ್ರಾಮಗಳಲ್ಲಿ ವಿಮಾನಗಳ ಶಬ್ದಗಳು ಕೇಳಿ ಬಂದಿವೆ. ಮುಂಚಿತ ಎಚ್ಚರಿಕೆಯಂತೆ ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಆತಂಕ ಉಂಟಾಗಿದೆ.

Take a Poll

ಕನಕಪುರ ರಸ್ತೆಯಲ್ಲಿ ಕೇಳಿಬಂದ ಕೂಗೇನು?

ಕನಕಪುರ ರಸ್ತೆಯ ಬಳಿಯ ಜನರು, ವಿಶೇಷವಾಗಿ ವ್ಯವಹಾರಸ್ಥರು ಮತ್ತು ಕೆಲ ರೈತರು, ಈ ಯೋಜನೆಗೆ ನಿಗದಿತವಾಗಿ ಪ್ರೋತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. "ನಮ್ಮ ಜನಾಂಗ ಈ ಭೂಮಿಯಲ್ಲಿ ತಲೆಮಾರುಗಳಿಂದ ಬದುಕು ಸಾಗಿಸುತ್ತಿದೆ. ಆದರೆ ಈ ಭಾಗದ ಭೂಮಿಗೆ ಭವಿಷ್ಯದಲ್ಲಿ ಅಪಾರ ಬೇಡಿಕೆಯಿದೆ. ವಿಮಾನ ನಿಲ್ದಾಣ ಬಂದರೆ, ನಮ್ಮ ಮಕ್ಕಳಿಗೆ ಉದ್ಯೋಗ, ವ್ಯಾಪಾರದ ಅವಕಾಶಗಳು ಒದಗುತ್ತವೆ ಎಂಬುದು ಒಬ್ಬರ ಅಭಿಪ್ರಾಯವಾಗಿದೆ.

ನೆಲಮಂಗಲ ಭಾಗದಲ್ಲಿ ಆತಂಕ ಮತ್ತು ವಿರೋಧದ ಶಬ್ದ:

ಇದಕ್ಕೆ ವಿರುದ್ಧವಾಗಿ, ನೆಲಮಂಗಲ ಮತ್ತು ಅದರ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆ ಆಕ್ರೋಶ ಹಾಗೂ ಆತಂಕವನ್ನು ಹುಟ್ಟಿಸಿದೆ. ಇಲ್ಲಿನ ಜನರು ವಿಮಾನ ನಿಲ್ದಾಣದಿಂದ ಬರುವ ಉಪದ್ರವ, ವಾಣಿಜ್ಯೀಕರಣ ಮತ್ತು ಭೂಮಿಯ ಕಬಳಿಕೆಯ ಭೀತಿಯಲ್ಲಿ ಬದುಕುತ್ತಿದ್ದಾರೆ.

ನಾವು ಬಡವರಾಗಿ ಕೃಷಿಯಲ್ಲಿ ಬದುಕುತ್ತಿರುವ ಜನ. ನಮ್ಮ ನೆಲ ನಮ್ಮ ಜೀವ. ನಾವು ವಿಮಾನದಲ್ಲಿ ಪ್ರಯಾಣ ಮಾಡುವವರಲ್ಲ. ನಮ್ಮ ನೆಲ ಕಳೆದುಕೊಂಡರೆ, ನಾವು ಇನ್ನು ಏನು ಮಾಡೋಣ? ವಿಮಾನ ನಿಲ್ದಾಣದಿಂದ ಬಡ ಜನರ ಬದುಕು ಹಾಳಾಗುತ್ತದೆ ಎಂದಿದ್ದಾರೆ.

ಅವರು ವಾಸಿಸುತ್ತಿರುವ ಗ್ರಾಮದಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದೆ. ವಿಮಾನ ನಿಲ್ದಾಣ ಬಂದರೆ ಇನ್ನಷ್ಟು ರಸ್ತೆ ಯೋಜನೆಗಳು, ಲಾರಿ ಸಂಚಾರ, ಶಬ್ದ ಮಾಲಿನ್ಯ, ಭೂಮಿ ಕಬಳಿಕೆ ಎಲ್ಲವೂ ಶುರುವಾಗುತ್ತದೆ ಅವರು ಭೀತಿಗೊಳಗಾಗಿದ್ದಾರೆ.

ವಿಮಾನ ನಿಲ್ದಾಣದ ನಿರ್ಮಾಣದ ನಂತರ ಎದುರಾಗುವ ಸಾಮಾಜಿಕ ಬದಲಾವಣೆ ಕೂಡ ಇವರ ಭೀತಿಗೆ ಕಾರಣವಾಗಿದೆ. ಸ್ಥಳೀಯ ಸಂಸ್ಕೃತಿ, ಸಾಮಾಜಿಕ ಬದುಕು, ಸಾಮಾಜಿಕ ಸಂಬಂಧಗಳು, ಈ ಎಲ್ಲವೂ ಬದಲಾಗುವ ಸಾಧ್ಯತೆ ಇದೆ. "ಇಲ್ಲಿ ಬಡವರು, ಕಾರ್ಮಿಕರು, ಗಿಡಮೂಲಿಕೆ ಬೆಳೆಯುವವರು ಇರುತ್ತಾರೆ. ಈ ಮಾಲಿನ್ಯ ಮತ್ತು ಬಲವಂತದ ಬದಲಾವಣೆ ಇವುಗಳನ್ನು ನಾಶಮಾಡುತ್ತದೆ," ಎಂದು ಸ್ಥಳೀಯ ಶಾಲಾ ಶಿಕ್ಷಕ ಜಗದೀಶ್ ಅವರು ಹೇಳಿದರು.

ರಾಜಕೀಯ ಪ್ರತಿಕ್ರಿಯೆ:

ನೆಲಮಂಗಲ ಪ್ರದೇಶದ ಶಾಸಕರಾಗಿರುವ ಎನ್ ಶ್ರೀನಿವಾಸಯ್ಯ ಅವರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳಿವೆ. ಆದರೆ ಮಾಧ್ಯಮದ ಸಂಪರ್ಕಕ್ಕೆ ಅವರು ಪ್ರತಿಕ್ರಿಯಿಸಿಲ್ಲ. ಇನ್ನೂ ಅನೇಕ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸ್ಥಳೀಯ ನಾಯಕರು, ಈ ಯೋಜನೆಯ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಇಲ್ಲದೆ ಯಾವ ಸಹಕಾರವೂ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. ಅಧಿಕೃತ ಯೋಜನಾ ವರದಿ (DPR) ಇನ್ನೂ ಅಂತಿಮಗೊಂಡಿಲ್ಲದ ಹಂತದಲ್ಲೂ, ಸಾರ್ವಜನಿಕ ಭೂಮಿ ಪರಿಶೀಲನೆ ಪ್ರಾರಂಭವಾದ ಕಾರಣ ಜನರ ಆತಂಕ ಹೆಚ್ಚಾಗಿದೆ.

ಕೆಲವೆಡೆ ಗ್ರಾಮಸ್ಥರು ಭೂಮಿಯ ಮೌಲ್ಯವರ್ಧನೆ ಮತ್ತು ಉದ್ಯೋಗ ಸೃಷ್ಟಿಯ ನಿರೀಕ್ಷೆಯಲ್ಲಿ ಇದ್ದರೆ, ಬಹುಪಾಲು ಗ್ರಾಮಗಳು ಸಮೂಹ ಪ್ರತಿಭಟನೆಯ ನಿರ್ಧಾರದಲ್ಲಿದ್ದಾರೆ. "ಕೆಲವರೆಗೂ ಸ್ಥಳೀಯ ಮುಖಂಡರ ಬೆಂಬಲ ಇದೆ. ಆದರೆ ಸರ್ಕಾರ ಯಾವುದೇ ಮಾಹಿತಿ ನೀಡದೆ ಭೂಮಿಯ ಮೇಲೆ ಕಣ್ಣಿಟ್ಟರೆ, ನಾವು ಹೋರಾಟವೇ ಮಾಡಬೇಕಾಗುತ್ತದೆ," ಎಂದು ಕುಣಿಗಲ್ ರಸ್ತೆಯ ರೈತ ಸಂಘದ ಸದಸ್ಯ ಗೋಪಾಲ ಹೇಳಿದ್ದಾರೆ.

ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ಅಗತ್ಯವಿರುವುದು ಅನುಮಾನವಿಲ್ಲದ ಸಂಗತಿ. ಆದರೆ ಈ ಯೋಜನೆ ಯಾರು ಪ್ರಯೋಜನ ಪಡೆಯುತ್ತಾರೆ ಎಂಬ ಪ್ರಶ್ನೆ ನಿರಂತರವಾಗಿ ಮೂಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮೀಣ ಜನತೆ ತಮ್ಮ ಮೂಲ ಬದುಕಿನಿಂದ ದೂರ ಸರಿಯಬೇಕಾದರೆ, ಈ ಬೆಳವಣಿಗೆಯ ನೈತಿಕತೆ ಕುರಿತು ಗಂಭೀರ ಚಿಂತನೆ ಅಗತ್ಯವಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+