ಇಲ್ಲಿಕೇಳಿ..ಬೆಂಗಳೂರು 2ನೇ ಏಪೋರ್ಟ್‌ಗಾಗಿ ಕನಕಪುರ, ನೆಲಮಂಗಲದಲ್ಲಿ ಭೂಮಿ ಪರಿಶೀಲನೆ..! ಹೊಸ ಏರ್ಪೋರ್ಟ್ ಭಾಗ್ಯ ಯಾರಿಗೆ..?

ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸೋಕೆ ಮತ್ತೊಂದು ವಿಮಾನ ನಿಲ್ದಾಣ ಬೇಕೇ ಬೇಕಾಗಿದೆ. ಹೀಗಾಗಿ ಸರ್ಕಾರದ ಚಿತ್ತ ಎರಡನೇ ವಿಮಾನ ನಿಲ್ದಾಣ ಯೋಜನೆಯತ್ತ ನೆಟ್ಟಿದೆ. ಈಗಾಗಲೇ ಹೊಸ ವಿಮಾನ ನಿಲ್ದಾಣಕ್ಕೆ ಯೋಜನೆ ಆರಂಭವಾಗಿದೆ. ಇದಕ್ಕಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ತಾಂತ್ರಿಕ ತಂಡ ಈಗಾಗಲೇ ಸ್ಥಳ ಪರಿಶೀಲನೆ ನಡೆಸುತ್ತಿದೆ..

Bengaluru 2nd Airport: ಕನಕಪುರ, ನೆಲಮಂಗಲದಲ್ಲಿ ಭೂಮಿ ಪರಿಶೀಲನೆ..!

ಎಎಐ ತಂಡದ ಸ್ಥಳ ಭೇಟಿ:

ಏಪ್ರಿಲ್ 7 ರಿಂದ 9ರ ನಡುವೆ ಎರಡನೇ ವಿಮಾನ ನಿಲ್ದಾಣಕ್ಕಾಗಿ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ ಎಂದು, ಮೊದಲೇ ಮಾಹಿತಿ ನೀಡಲಾಗಿತ್ತು. ಅದರ ಪ್ರಕಾರ ನಿನ್ನೆ ( ಏಪ್ರಿಲ್ 8) ಎಎಐ ತಂಡವು ಕನಕಪುರ ರಸ್ತೆಯಲ್ಲಿರುವ ಎರಡು ಸ್ಥಳಗಳಿಗೆ ಭೇಟಿ ನೀಡಿದೆ. ಇಂದು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ಮೂರನೇ ಸ್ಥಳವನ್ನು ಪರಿಶೀಲಿಸಿ, ಎಲ್ಲಾ ಸ್ಥಳಗಳೂ 4,500 ಎಕರೆಗಳಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿವೆ, ಮತ್ತು ರಾಜ್ಯ ಸರ್ಕಾರ ಅವುಗಳಿಗೆ ಅಗತ್ಯ ಭೂಮಿ ಒದಗಿಸಲು ಸಿದ್ಧವಾಗಿದೆ.

ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ರಾಜ್ಯದಿಂದ ₹1.2 ಕೋಟಿ:

ಈ ಎರಡನೇ ವಿಮಾನ ನಿಲ್ದಾಣ ಯೋಜನೆಯ ಕಾರ್ಯಸಾಧ್ಯತೆ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವು ಎಎಐಗೆ ₹1.2 ಕೋಟಿ ಮೊತ್ತವನ್ನು ಪಾವತಿಸಿದೆ. ಈ ಹಣವನ್ನು ಬಳಸಿಕೊಂಡು ತಾಂತ್ರಿಕ, ಭೌಗೋಳಿಕ, ಮತ್ತು ಪೌರ ಸೌಲಭ್ಯ ಸಂಬಂಧಿತ ಅಂಶಗಳ ಸಮೀಕ್ಷೆ ನಡೆಯುತ್ತಿದೆ. ಭೂಮಿಯ ಸ್ಥಿತಿ, ರಸ್ತಾ ಸಂಪರ್ಕ, ಪ್ರವಾಹ ಭೀತಿ, ಪರಿಸರ ಪರಿಣಾಮ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುತ್ತದೆ.

ಈಗಿನ ವಿಮಾನ ನಿಲ್ದಾಣದ ಸ್ಥಿತಿ:

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಂಪೇಗೌಡ ವಿಮಾನ ನಿಲ್ದಾಣ)ವು ಈಗಾಗಲೇ ವರ್ಷಕ್ಕೆ 3.5 ಕೋಟಿ ಪ್ರಯಾಣಿಕರ ಸೇವೆ ಒದಗಿಸುತ್ತಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಇದು 4 ಕೋಟಿ ಪ್ರಯಾಣಿಕ ಸಾಮರ್ಥ್ಯಕ್ಕೆ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ, ದೀರ್ಘಕಾಲಿಕವಾಗಿ ನಗರಕ್ಕೆ ಮತ್ತೊಂದು ವಿಮಾನ ನಿಲ್ದಾಣ ಅನಿವಾರ್ಯವಾಗಲಿದೆ.

150 ಕಿ.ಮೀ ಗಡಿಯ ನಿಯಮ 2033ರಲ್ಲಿ ಮುಕ್ತಾಯ:

ಪ್ರಸ್ತುತ, 150 ಕಿಲೋಮೀಟರ್ ವ್ಯಾಪ್ತಿಯೊಳಗೆ ಎರಡನೇ ವಿಮಾನ ನಿಲ್ದಾಣ ಸ್ಥಾಪನೆಗೆ ನಿರ್ಬಂಧವಿದೆ. ಈ ನಿಯಮವು 2033ರ ವೇಳೆಗೆ ಮುಕ್ತಾಯವಾಗಲಿದ್ದು, ಅದಕ್ಕೂ ಮುನ್ನಲೇ ಸ್ಥಳ ಆಯ್ಕೆ, ಸಿದ್ಧತೆ, ಅನುಮತಿ ಪ್ರಕ್ರಿಯೆಗಳು ಮುಗಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಮತ್ತು ಎಎಐ ತಂಡವು ಸ್ಥಳ ಪರಿಶೀಲನೆ ಪ್ರಕ್ರಿಯೆಗೆ ವೇಗ ನೀಡಿವೆ.

ಸರ್ಕಾರದ ನಿಲುವು:

2033ಕ್ಕೆ ವಿಮಾನ ನಿಲ್ದಾಣದ ನಿಯಮ ಮುಕ್ತಾಯವಾಗುತ್ತೆ. ಅದಕ್ಕಿಂತ ಮುಂಚೆಯೇ ನಾವು ಎಲ್ಲದರ ತಯಾರಿ ಮುಗಿಸಬೇಕು. ಈಗಾಗಲೇ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ತಾಂತ್ರಿಕ ಸಮೀಕ್ಷೆಯ ನಂತರ ಸೂಕ್ತ ಸ್ಥಳದ ಆಯ್ಕೆ ನಡೆಯಲಿದೆ, ಎಂದು ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆ ಭರದಿಂದ ಸಾಗುತ್ತಿದೆ. ಈ ಯೋಜನೆಗೆ ಈಗಾಗಲೇ ಭೂಮಿ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಕನಕಪುರ ಹಾಗೂ ನೆಲಮಂಗಲ ಹತ್ತಿರದ ಮೂರು ಸ್ಥಳಗಳು ಪರಿಗಣನೆಗೆ ಬಂದಿವೆ. ಸ್ಥಳ ಪರಿಶೀಲನೆ ಮತ್ತು ಕಾರ್ಯಸಾಧ್ಯತೆ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ₹1.2 ಕೋಟಿ ಬಿಡುಗಡೆ ಮಾಡಿದೆ. 2033ರ ವೇಳೆಗೆ 150 ಕಿ.ಮೀ ನಿಯಮ ಮುಕ್ತಾಯವಾಗುವ ಕಾರಣ ಯೋಜನೆಗೆ ತ್ವರಿತ ಆರಂಭವಾಗಲಿದೆ ಎನ್ನಲಾಗುತ್ತಿದೆ. ಬೆಂಗಳೂರು ನಗರದ ಭವಿಷ್ಯದ ಬೆಳೆವಣಿಗೆಗೆ ಇದು ಮಹತ್ತರ ಹೆಜ್ಜೆಯಾಗಲಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಇದು ಬಲ ನೀಡುವುದರ ಜೊತೆಗೆ, ಉದ್ಯೋಗಾವಕಾಶಗಳು, ವಾಣಿಜ್ಯ ಚಟುವಟಿಕೆಗಳು, ಹಾಗೂ ಶಹರಿ ವೃದ್ಧಿಗೆ ದಾರಿ ತೆರೆಯಲಿದೆ. ಹೀಗಾಗಿ, ಈ ಯೋಜನೆಯ ಸಕಾರಾತ್ಮಕ ಬೆಳವಣಿಗೆಯತ್ತ ರಾಜ್ಯದ ಗಮನ ಸಾರಿ ಮುಂದಿನ ಹಂತಗಳ ನಿರೀಕ್ಷೆಯೊಂದಿಗೆ ನಾವು ಕಾಯಬೇಕಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+