ಆರ್ಡರ್ ಮಾಡಿದ್ರೆ ಕೇವಲ 30 ನಿಮಿಷಗಳಲ್ಲಿ ಪಿಜ್ಜಾ ಪಡೆಯಬಹುದು, ರುಚಿ-ಶುಚಿಯಾದ ಆಹಾರ ತಯಾರಿಸಲು ಮನೆಗೆ ಬೇಕಾದ ಸಾಮಾಗ್ರಿಯೂ ಥಟ್ ಪಟ್ ಅಂತ ತರಿಸಬಹುದು. ಆದ್ರೇ ಅದೇ ಆರೋಗ್ಯದ ಸಮಸ್ಯೆ ಬಂದಾಗ ಮಾತ್ರ ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬರಲು ಯಾಕೆ ಸಾಧ್ಯವಿಲ್ಲ.! ಆರೋಗ್ಯದ ವಿಚಾರಕ್ಕೆ ಬಂದಾಗ ಗೋಲ್ಡನ್ ಅವರ್ ಅನ್ನೋದು ಬಹಳ ಮುಖ್ಯವಾಗುತ್ತದೆ. ಆದರೆ ಬಹಳಷ್ಟು ಘಟನೆಗಳನ್ನು ಬೇಕು ಎಂದಾಗ ಅಂಬ್ಯುಲೆನ್ಸ್ ಸೇವೆಗಳು ತರಾತುರಿಯಲ್ಲಿ ಸಿಗೋದೇ ಇಲ್ಲ.
ಭಾರತದಲ್ಲಿ ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ಗೆ ಕರೆಯಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಇದು ತುರ್ತು ಸೇವೆಗಳಲ್ಲಿನ ಗಂಭೀರ ಕೊರತೆಯನ್ನು ಎತ್ತಿ ತೋರಿಸುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ, ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ ಆಗಿರುವ ಬ್ಲಿಂಕಿಟ್, ತ್ವರಿತ 10 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸುವ ಗುರಿಯೊಂದಿಗೆ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಬ್ಲಿಂಕಿಟ್ನ ಆ್ಯಂಬುಲೆನ್ಸ್ ಸೇವೆಯು 2025 ರ ಜನವರಿ 2 ರಂದು ಗುರುಗ್ರಾಮದಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದು, ಐದು ಆ್ಯಂಬುಲೆನ್ಸ್ಗಳು ಸೇವೆ ಆರಂಭಿಸಿವೆ.

ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂಡ್ಸಾ ಗುರ್ಗಾಂವ್ ನಿವಾಸಿಗಳಿಗೆ ಈ ಸೇವೆ ಘೋಷಿಸಿದ್ದು ಬ್ಲಿಂಕಿಟ್ ಬಳಕೆದಾರರು ಈಗ ಕೇವಲ 10 ನಿಮಿಷಗಳಲ್ಲಿ ತಮ್ಮ ಮನೆ ಬಾಗಿಲಿಗೆ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆಗಳನ್ನು ಆರ್ಡರ್ ಮಾಡಿ ಪಡೆಯಬಹುದಾಗಿದೆ.
"ನಮ್ಮ ನಗರಗಳಲ್ಲಿ ವೇಗದ ಮತ್ತು ವಿಶ್ವಾಸಾರ್ಹವಾದ ಆ್ಯಂಬುಲೆನ್ಸ್ ಸೇವೆ ಲಭ್ಯವಾಗುವಂತೆ ಮಾಡುವ ದಿಕ್ಕಿನಲ್ಲಿ ನಾವು ಮೊದಲ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಇಂದಿನಿಂದಲೇ ಗುರುಗ್ರಾಮದಲ್ಲಿ ಐದು ಆ್ಯಂಬುಲೆನ್ಸ್ಗಳು ಸೇವೆ ಆರಂಭಿಸಲಿವೆ. ನಾವು ಈ ಸೇವೆಯನ್ನು ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸುತ್ತಿದ್ದಂತೆ, ಬ್ಲಿಂಕಿಟ್ ಅಪ್ಲಿಕೇಶನ್ನಲ್ಲಿ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್ಎಸ್) ಆ್ಯಂಬುಲೆನ್ಸ್ ಬುಕ್ ಮಾಡುವ ಆಯ್ಕೆ ನಿಮಗೆ ಕಾಣಿಸಲಾರಂಭಿಸುತ್ತದೆ" ಎಂದು ಸಿಇಒ ತಮ್ಮ ಟ್ವಿಟರ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಬ್ಲಿಂಕಿಟ್ ಆಂಬ್ಯುಲೆನ್ಸ್ ಸೇವೆಯಲ್ಲಿ ಏನೇನು ಸೌಲಭ್ಯಗಳಿವೆ?
ಬ್ಲಿಂಕಿಟ್ ಹೇಳಿಕೆ ಪ್ರಕಾರ ಬ್ಲಿಂಕಿಟ್ ಅಪ್ಲಿಕೇಶನ್ನಲ್ಲಿ ಆಂಬ್ಯುಲೆನ್ಸ್ ಕರೆ ಮಾಡುವ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್ಎಸ್) ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗಿರುತ್ತದೆ. ಈ ಆಂಬ್ಯುಲೆನ್ಸ್ಗಳಿಗೆ ಆಮ್ಲಜನಕ ಸಿಲಿಂಡರ್ಗಳು, ಎಇಡಿ (ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್), ಸ್ಟ್ರೆಚರ್, ಮಾನಿಟರ್, ಸಕ್ಷನ್ ಯಂತ್ರ ಮತ್ತು ಅಗತ್ಯ ತುರ್ತು ಔಷಧಗಳು ಮತ್ತು ಚುಚ್ಚುಮದ್ದುಗಳು ಸೇರಿದಂತೆ ಅಗತ್ಯ ಜೀವ ಉಳಿಸುವ ಉಪಕರಣಗಳನ್ನು ಒಳಗೊಂಡಿರುತ್ತದೆ. ಅಗತ್ಯವಿರುವವರನ್ನು ಸುರಕ್ಷಿತವಾಗಿ ಸಾಗಿಸಲು ಅವರಿಗೆ ಸ್ಕೂಪ್ ಸ್ಟ್ರೆಚರ್ ಮತ್ತು ಗಾಲಿಕುರ್ಚಿಯನ್ನು ಒದಗಿಸುತ್ತದೆ.
ಪ್ರತಿ ವಾಹನವನ್ನು ಒಬ್ಬ ತರಬೇತಿ ಪಡೆದ ಪ್ಯಾರಾಮೆಡಿಕಲ್ ಸಿಬ್ಬಂದಿ, ಒಬ್ಬ ಸಹಾಯಕ ಮತ್ತು ತರಬೇತಿ ಪಡೆದ ಚಾಲಕರು ನಿರ್ವಹಿಸಲಿದ್ದಾರೆ. ಸದ್ಯ ಈ ಸೇವೆ ಗುರುಗ್ರಾಮದಲ್ಲಿ ಮಾತ್ರ ಲಭ್ಯವಿದ್ದು ಮುಂದೆ ಇದು ಬೇರೆ ಬೇರೆ ನಗರಗಳಿಗೆ ಸೇವೆ ವಿಸ್ತರಿಸಲಿದೆ.
ಸೇವೆಯ ವೆಚ್ಚ ಎಷ್ಟು?
ಈ ಸೇವೆಗೆ ಎಷ್ಟು ವೆಚ್ಚವಾಗಲಿದೆ ಎಂಬುದನ್ನು ಧಿಂದ್ಸಾ ಅವರು ಬಹಿರಂಗಪಡಿಸಿಲ್ಲವಾದರೂ, "ಲಾಭ ಗಳಿಸುವುದೇ ನಮ್ಮ ಗುರಿಯಲ್ಲ. ನಾವು ಈ ಸೇವೆಯನ್ನು ಗ್ರಾಹಕರಿಗೆ ಕೈಗೆಟುಕುವ ವೆಚ್ಚದಲ್ಲಿ ನಿರ್ವಹಿಸುತ್ತೇವೆ ಮತ್ತು ದೀರ್ಘಕಾಲೀನವಾಗಿ ಈ ಪ್ರಮುಖ ಸಮಸ್ಯೆಯನ್ನು ಪರಿಹರಿಸಲು ಹೂಡಿಕೆ ಮಾಡುತ್ತೇವೆ. ಈ ಸೇವೆ ನಮಗೆ ಹೊಸತಾಗಿದೆ ಮತ್ತು ಮುಖ್ಯವಾಗಿದೆ, ಆದ್ದರಿಂದ ನಾವು ಈ ಸೇವೆಯನ್ನು ಎಚ್ಚರಿಕೆಯಿಂದ ನಿರ್ವಹಿಸಿ ಬಳಿಕ ವಿಸ್ತರಿಸುತ್ತಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಪ್ರಮುಖ ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುವುದು ನಮ್ಮ ಗುರಿಯಾಗಿದೆ" ಎಂದು ಅವರು ಹೇಳಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications