BluSmart: 500ಕ್ಕೂ ಹೆಚ್ಚು ಉದ್ಯೋಗಿಗಳಿಗಿಲ್ಲ ಸಂಬಳ..ಹಣಕಾಸು ಬಿಕ್ಕಟ್ಟಿನಲ್ಲಿ ಬ್ಲೂಸ್ಮಾರ್ಟ್..! ಉದ್ಯೋಗಿಗಳ ಭವಿಷ್ಯ ಅಸ್ಪಷ್ಟ

ಬೆಂಗಳೂರಿನ ಎಲೆಕ್ಟ್ರಿಕ್ ಚಾಲಿನ ಕ್ಯಾಬ್ ಸೇವೆಯಾದ ಬ್ಲೂಸ್ಮಾರ್ಟ್‌ಗೆ ಹೊಸ ಸಂಕಷ್ಟ ಎದುರಾಗಿದೆ ಎಂಬುದು ತಿಳಿದುಬಂದಿದೆ. ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿರುವ ಬ್ಲೂಸ್ಮಾರ್ಟ್‌ ಈಗ ಹಣಕಾಸಿನ ಸಂಕಷ್ಟದಲ್ಲಿ ಸಿಲುಕಿದೆ ಎಂಬ ಸುದ್ದಿಗೆ ಗುರಿಯಾಗಿದೆ. ಅಂದರೆ ತನ್ನ ಕಂಪನಿಯಲ್ಲಿರುವ ಇರುವ 500ಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಸಂಬಳ ನೀಡಲಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಅಂದರೆ ಮಾರ್ಚ್ ತಿಂಗಳ ಸಂಬಳವನ್ನೂ ಪಡೆಯದೇ ನಿರೀಕ್ಷೆಯಲ್ಲಿರುವ ಉದ್ಯೋಗಿಗಳು, ಭವಿಷ್ಯದ ಬಗೆಗಿನ ಚಿಂತೆಗೆ ಒಳಗಾಗಿದ್ದಾರೆ.

BluSmart: 500ಕ್ಕೂ ಹೆಚ್ಚು ಉದ್ಯೋಗಿಗಳಿಗಿಲ್ಲ ಸಂಬಳ..!

ಇತ್ತ ಕಂಪನಿಯ ಸ್ಥಾಪಕರಾದ ಅನ್ಮೋಲ್ ಸಿಂಗ್ ಜಗ್ಗಿ ಮಾರ್ಚ್ ತಿಂಗಳ ವೇತನವನ್ನ, ಏಪ್ರಿಲ್ ಅಂತ್ಯದೊಳಗೆ ಪಾವತಿಸಲಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಆದರೆ ಈಗ ಉದ್ಯೋಗಿಗಳಿಗೆ ಎದುರಾಗಿರುವ ಭಯವೇನೆಂದರೆ, ಏಪ್ರಿಲ್ ತಿಂಗಳ ಅಂತ್ಯದಲ್ಲಿದ್ದು, ಸಂಬಳ ನೀಡುವ ಕುರಿತು ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ ಎಂಬುದಾಗಿದೆ. ಅಂದರೆ ಕಂಪನಿಯ ನಗದು ಚಲಾವಣೆ ತೀವ್ರವಾಗಿ ಕುಸಿತಗೊಂಡಿರುವ ಕುರಿತು ನಿಖರ ಮಾಹಿತಿಯಿಲ್ಲದ ಕಾರಣ, ನೌಕರರ ಆತಂಕ ಇನ್ನಷ್ಟು ಹೆಚ್ಚಾಗಿದೆ.

ಬ್ಲೂಸ್ಮಾರ್ಟ್ ಮೂಲ ರೈಡ್‌ಹೇಲಿಂಗ್ ಮಾದರಿಯಿಂದ, ಮಾದರಿಯಿಂದ ಉಬರ್‌ನ ಫ್ಲೀಟ್ ಪಾಲುದಾರನಾಗಿ ಬದಲಾವಣೆಯಲ್ಲಿದ್ದು, ಈ ಮರುಸಂರಚನೆಯ ನಡುವೆ, ರೈಡ್‌ಹೇಲಿಂಗ್ ವಿಭಾಗಕ್ಕೆ ಸಂಬಂಧಪಟ್ಟ ಹಲವಾರು ನೌಕರರನ್ನು ವಜಾ ಮಾಡಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ತಿಂಗಳ..ಅಂದರೆ, ಏಪ್ರಿಲ್ 16ರಂದು ಬ್ಲೂಸ್ಮಾರ್ಟ್ ತನ್ನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅದರ ಮರುದಿನದಿಂದಲೇ 90 ದಿನಗಳಲ್ಲಿ ಬಳಕೆದಾರರ ಅಪ್ಲಿಕೇಶನ್ ಶೇಷ ಮೊತ್ತವನ್ನು ಮರುಪಾವತಿಸಲಾಗುತ್ತದೆ ಎಂಬ ಘೋಷಣೆಯೂ ನೀಡಲಾಗಿತ್ತು.

ಈ ರೀತಿಯ ಅನಿಶ್ಚಿತತೆ ಎಲ್ಲರಲ್ಲೂ ಆತಂಕ ಮೂಡಿಸಿದೆ. ಹೀಗಾಗಿ ಹಲವಾರು ಹಿರಿಯ ನಿರ್ವಹಣಾ ಕಾರ್ಯ ನಿರ್ವಾಹಕರು, ಹೊಸ ಉದ್ಯೋಗಗಳನ್ನು ಹುಡುಕತೊಡಗಿದ್ದಾರೆ. ನೇಮಕಾತಿದಾರರು, ಇತರ ಕ್ಯಾಬ್ ಸಂಸ್ಥೆಗಳು ಮತ್ತು ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂಪರ್ಕದಲ್ಲಿರುವ ಮಾಹಿತಿ ಲಭ್ಯವಾಗಿದೆ.

ಬ್ಲೂಸ್ಮಾರ್ಟ್‌ ನ ಸ್ಥಿತಿಗೆ ಕಾರಣವಾಗಿರುವ ಪ್ರಮುಖ ಅಂಶಗಳಲ್ಲಿ ಒಂದಾದುದು. ವಿತ್ತೀಯ ಹೂಡಿಕೆ ಗಳಿಸಲು ಕೈಗೊಂಡ ಪ್ರಯತ್ನಗಳ ವೈಫಲ್ಯ. ಇದರ ಜೊತೆಗೆ, ಕಂಪನಿಯ ಸ್ಥಾಪಕರು ಪ್ರವರ್ತಿಸಿದ ಜೆನ್ಸೋಲ್ ಎಂಜಿನಿಯರಿಂಗ್ ವಿರುದ್ಧ ಸೆಬಿ ತೆಗೆದುಕೊಂಡ ಕ್ರಮವು ಕೂಡ ಕಂಪನಿಯ ಮೌಲ್ಯಮಾಪನ ಮತ್ತು ಹೂಡಿಕೆದಾರರ ಭರವಸೆಯನ್ನು ತೀವ್ರವಾಗಿ ಬಾಧಿಸಿದೆ. ಇದರಿಂದ, ಬ್ಲೂಸ್ಮಾರ್ಟ್ ಹಾಗೂ ಎವರ್‌ಸೋರ್ಸ್ ಕ್ಯಾಪಿಟಲ್ ನಡುವಿನ ಮಾರಾಟ ಸಂವಾದ ಮುಂದುವರಿಯುವ ಸಾಧ್ಯತೆ ಇನ್ನಿಲ್ಲವೆಂದು ಇತ್ತೀಚಿನ ವರದಿಗಳು ತಿಳಿಸಿವೆ.

CKYC: ಗ್ರಾಹಕ ಮಾಹಿತಿ ಪ್ರವೇಶಕ್ಕೆ ನವ ದಿಕ್ಕು:

ಇದಕ್ಕೂ ಸಂಬಂಧಿಸಿದಂತೆ, ಹಣಕಾಸು ಕ್ಷೇತ್ರದಲ್ಲಿ ಇನ್ನೊಂದು ಮಹತ್ವದ ಬೆಳವಣಿಗೆಯಾಗಿದ್ದು, CKYC (Central KYC) ಡೇಟಾಬೇಸ್‌ನ ಪ್ರವೇಶಕ್ಕೆ ಒಪ್ಪಿಗೆಯಾದಾರಿತ ವಿಧಾನವನ್ನು ಸರ್ಕಾರ ಕಡ್ಡಾಯಗೊಳಿಸಿದೆ. OTP ಆಧಾರಿತ ಒಪ್ಪಿಗೆ ಪ್ರಕ್ರಿಯೆಯು ಎಲ್ಲ ಹಣಕಾಸು ಸಂಸ್ಥೆಗಳಿಗಾಗಿ ಕಡ್ಡಾಯವಾಗಲಿದೆ. ಇದರ ಉದ್ದೇಶ ಗ್ರಾಹಕರ ಮಾಹಿತಿಯನ್ನು ನಿಖರವಾಗಿ ನವೀಕರಿಸಿ, ಸುರಕ್ಷಿತವಾಗಿ ಅದನ್ನು ಸೇವೆದಾರ ಸಂಸ್ಥೆಗಳಿಗೆ ನೀಡುವುದು.

ಅನುಪಯುಕ್ತ CKYC ಡೇಟಾ:

ಈ ಡೇಟಾಬೇಸ್ ಈಗಾಗಲೇ ಇನಾಕ್ಟಿವ್ ಅಥವಾ ಅಪೂರ್ಣ ಮಾಹಿತಿಯಿಂದ ಬಳಕೆಗಳಲ್ಲಿ ಮಿತಿಯನ್ನು ಎದುರಿಸುತ್ತಿದೆ. ಹೊಸ OTP ಆಧಾರಿತ ವ್ಯವಸ್ಥೆಯು ಈ ಸಮಸ್ಯೆಗಳಿಗೆ ಪರಿಹಾರವಾಗಬಹುದೆಂಬ ನಿರೀಕ್ಷೆ ಇದೆ. ಆದರೆ, ಉದ್ಯಮದ ಅನೇಕ ಉನ್ನತ ಅಧಿಕಾರಿಗಳು ಇದು ಕಾರ್ಯಪದ್ಧತಿಗಳಲ್ಲಿ ಸಂಕುಲತೆ ಉಂಟುಮಾಡಬಹುದೆಂಬ ಆತಂಕವೂ ವ್ಯಕ್ತಪಡಿಸುತ್ತಿದ್ದಾರೆ. ಮೇ 9ರೊಳಗೆ ಈ ವ್ಯವಸ್ಥೆಯ ಜಾರಿಗೆ ಸೂಚಿಸಿರುವ ಸರ್ಕಾರದ ನಿರ್ಧಾರ ಬಹುಸಾ ಸಂಸ್ಥೆಗಳಿಗಾಗಿ ಸವಾಲಾಗಿ ಪರಿಣಮಿಸಲಿದೆ.

ಒಟ್ಟಿನಲ್ಲಿ ಬ್ಲೂಸ್ಮಾರ್ಟ್‌ನ ಸದ್ಯದ ಸ್ಥಿತಿ ಹೇಗಿದೆ ಎಂದರೆ, ಭಾರತದಲ್ಲಿ ಇ-ಮೊಬಿಲಿಟಿ ವಲಯದ ಸವಾಲುಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ. ತಂತ್ರಜ್ಞಾನ ಆಧಾರಿತ, ಪರಿಸರ ಸ್ನೇಹಿ ಪ್ರಯಾಣ ಸೇವೆ ನೀಡುವ ಸಂಕಲ್ಪವಿದ್ದರೂ, ಹಣಕಾಸು ನಿರ್ವಹಣೆ ಮತ್ತು ನಿರಂತರ ಹೂಡಿಕೆಯ ಕೊರತೆ ಈ ಸಂಸ್ಥೆಯ ಸ್ಥಿತಿಗತಿಗಳನ್ನು ನೊಂದಿಸಿದೆ. ಸಂಸ್ಥೆಯು ಏಪ್ರಿಲ್ ಅಂತ್ಯದೊಳಗೆ ಸಂಬಳ ಪಾವತಿಸುವ ಭರವಸೆ ನೀಡಿದರೂ, ಈಗಾಗಲೇ ಆತಂಕದಲ್ಲಿರುವ ನೂರಾರು ಉದ್ಯೋಗಿಗಳಿಗೆ ಇದು ಸಾಲದ ಮಾತಂತೆ ಆಗುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+