ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ದೊಡ್ಡ ಖುಷಿಸುದ್ದಿ ಸಿಕ್ಕಿದೆ..ಅದೇನೆಂದರೆ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಸಲು ಶುಲ್ಕ ಪಾವತಿಸಬೇಕು ಎಂಬ ನೀತಿಯನ್ನು BMRCL ಹಿಂಪಡೆದಿದೆ. ಈ ವಿಚಾರದ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಬಿಎಂಆರ್ಸಿಎಲ್ ಈ ನಿರ್ಧಾರ ತೆಗೆದುಕೊಂಡಿದೆ. ಪ್ರಯಾಣಿಕರ ಆಕ್ರೋಶಕ್ಕೆ ಮಣಿಸಿದೆ.

ಹೌದು, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಪ್ರಯಾಣಿಕರ ಸೌಕರ್ಯದ ದೃಷ್ಟಿಕೋಣದಿಂದ ಈ ದೊಡ್ಡ ಬದಲಾವಣೆಯನ್ನು ಬಿಎಸ್ಎಂಆರ್ಸಿಎಲ್ ಘೋಷಿಸಿದೆ.
ಸುಲಭ್ ಸಂಸ್ಥೆಯ ಒಪ್ಪಂದಕ್ಕೂ ಫುಲ್ಸ್ಟಾಪ್:
ಇದಿಷ್ಟೇ ಅಲ್ಲ..ಮೆಟ್ರೋ ನಿಲ್ದಾಣಗಳ ಬಾಹ್ಯ ಭಾಗದಲ್ಲಿರುವ ಶೌಚಾಲಯಗಳ ನಿರ್ವಹಣೆಗೆ ಲಾಭರಹಿತ ಸಂಸ್ಥೆ "ಸುಲಭ್ ಇಂಟರ್ನ್ಯಾಷನಲ್" ನೊಂದಿಗೆ ಬಿಎಂಆರ್ಸಿಎಲ್ ಒಪ್ಪಂದ ಮಾಡಿಕೊಂಡಿತ್ತು. ಈ ವ್ಯವಸ್ಥೆಯಡಿ, ಶೌಚಾಲಯ ಬಳಸಲು ಸಾರ್ವಜನಿಕರಿಂದ ₹2 ರಿಂದ ₹5ರವರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಈ ನಿರ್ಧಾರಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಪ್ಪಂದವನ್ನೂ ಬಿಎಂಆರ್ಸಿಎಲ್ ಕೈಬಿಟ್ಟಿದೆ.
ತೀವ್ರ ಪ್ರತಿಭಟನೆಗೆ ಸಿಕ್ಕಿತು ನ್ಯಾಯ:
ಮೇ 26ರಂದು ನಗರದಲ್ಲಿ ಹಲವಾರು ಬಸ್ಸು ಪ್ರಯಾಣಿಕರು, ಸಾರ್ವಜನಿಕರು, ಮತ್ತು ಸಾಮಾಜಿಕ ಕಾರ್ಯಕರ್ತರು ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರೋ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. "ಮೂಲಸೌಕರ್ಯಕ್ಕೆ ಹಣವೇನು?" ಎಂಬ ಘೋಷಣೆಗಳೊಂದಿಗೆ, ಶೌಚಾಲಯವನ್ನು ಸಾರ್ವಜನಿಕ ಹಕ್ಕಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು. ಮೆಟ್ರೋ ಟಿಕೆಟ್ ಪಡೆಯದ ಸಾರ್ವಜನಿಕರಿಗೆ ಬಳಸುವ ಅವಕಾಶ ನೀಡುತ್ತಿದ್ದ ಶೌಚಾಲಯಗಳಿಗೆ ಶುಲ್ಕ ವಿಧಿಸುವುದು ಕ್ರೂರತೆಯಂತಿದೆ ಎಂದು ಅವರು ವಾದಿಸಿದರು.
ಬಿಎಂಆರ್ಸಿಎಲ್ ಸ್ಪಷ್ಟನೆ:
ಬಿಜೆಪಿ ಆಳ್ವಿಕೆಯಲ್ಲಿರುವ ಬಿಎಂಆರ್ಸಿಎಲ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮೇ 27ರಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಇದೊಂದು ಲಾಭದ ಉದ್ದೇಶದಿಂದ ನಡೆದ ಒಪ್ಪಂದವಲ್ಲ. ಉತ್ತಮ ನಿರ್ವಹಣೆಯ ಉದ್ದೇಶದಿಂದ ಈ ಪ್ರಯೋಗ ಮಾಡಲಾಗಿತ್ತು. ಆದರೆ ಸಾರ್ವಜನಿಕರ ಭಾವನೆಗೆ ಗೌರವ ನೀಡಿ, ನಾವು ಒಪ್ಪಂದವನ್ನು ರದ್ದುಗೊಳಿಸಿದ್ದೇವೆ. ಮುಂದೆಯಿಂದ ಶೌಚಾಲಯ ನಿರ್ವಹಣೆಗೆ ಬಿಎಂಆರ್ಸಿಎಲ್ ನೇರ ಜವಾಬ್ದಾರಿಯುತವಾಗಿರುತ್ತದೆ ಎಂದು ತಿಳಿಸಿದೆ.
ಮೆಟ್ರೋ ಶೌಚಾಲಯಗಳು:
ಇದಕ್ಕೂ ಮೊದಲು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದ್ದಂತೆ, ಮೆಟ್ರೋ ಸ್ವೈಪ್ ಗೇಟ್ ಒಳಗಿನ ಭಾಗದಲ್ಲಿರುವ ಶೌಚಾಲಯಗಳನ್ನು ಟಿಕೆಟ್ ಹೊಂದಿರುವ ಪ್ರಯಾಣಿಕರು ಉಚಿತವಾಗಿ ಬಳಸಬಹುದು. ಆದರೆ ಟಿಕೆಟ್ ಇಲ್ಲದ ಸಾರ್ವಜನಿಕರಿಗಾಗಿ ನಿಲ್ದಾಣದ ಹೊರಭಾಗದಲ್ಲಿ ಇರುವ ಶೌಚಾಲಯಗಳಿಗೆ ಮಾತ್ರ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಆ ಶುಲ್ಕವೂ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.
ಇಡೀ ಪ್ರಕರಣವು ನಗರದಲ್ಲಿ ಒಂದು ಪಾಠ ಕಲಿಸಿತು-ಸಾರ್ವಜನಿಕ ಹಿತವನ್ನು ಪೂರೈಸುವ ಉದ್ದೇಶದಿಂದ ನಡೆಸುವ ಯಾವ ಯೋಜನೆಯೂ ಜನರ ಅಭಿಪ್ರಾಯವಿಲ್ಲದೆ ಯಶಸ್ವಿಯಾಗಲಾರದು. ಬಿಎಂಆರ್ಸಿಎಲ್ನ ಈ ಯುಟರ್ನ್ ನೀತಿಯು ಜನದತ್ತ ಕಿವಿಗೊಟ್ಟು ಕೆಲಸ ಮಾಡಿದ ಉದಾಹರಣೆಯಾಗಿದೆ.
ಬಿಎಂಪಿಆರ್ಸಿಎಲ್ವು ಸಾರ್ವಜನಿಕ ಶೌಚಾಲಯಗಳ ಬಳಕೆ ಶುಲ್ಕವನ್ನು ಹಿಂಪಡೆಯುವುದು ಮತ್ತು ಸುಲಭ್ ಇಂಟರ್ನ್ಯಾಷನಲ್ ಒಪ್ಪಂದವನ್ನು ರದ್ದುಪಡಿಸುವುದು, ಸಾರ್ವಜನಿಕ ಆಕ್ರೋಶದ ಶಕ್ತಿಯನ್ನು ಮತ್ತು ನಗರ ಸಾರಿಗೆ ವ್ಯವಸ್ಥೆಯಲ್ಲಿ ಮೂಲಭೂತ ಸೌಕರ್ಯಗಳ ಉಚಿತ ಹಾಗೂ ಸುಗಮ ಲಭ್ಯತೆಯ ಮಹತ್ವವನ್ನು ದೃಢಪಡಿಸುತ್ತದೆ. ಸಾರ್ವಜನಿಕ ಶೌಚಾಲಯಗಳು ಲಾಭ ಗುರಿಯಾಗಿದ್ದರೂ, ಅವು ಜನಸಾಮಾನ್ಯರ ಅಗತ್ಯಗಳನ್ನು ಪೂರೈಸುವ ಮೂಲಭೂತ ಸೌಲಭ್ಯಗಳು ಎಂದು ಪರಿಗಣಿಸಬೇಕು. ವಿಶೇಷವಾಗಿ ದೈನಂದಿನ ಪ್ರಯಾಣಿಕರಿಗೆ ಇದು ಅತ್ಯಂತ ಅಗತ್ಯವಾಗಿದ್ದು, ಮೆಟ್ರೋ ಸೇವೆಗಳ ಮೇಲೆ ಅವಲಂಬಿತರಾಗಿ ಅವರ ಅನುಭವ ಸುಗಮವಾಗಲು ಈ ನಿರ್ಧಾರ ದೊಡ್ಡ ಬೆಳವಣಿಗೆ. ಬೆಂಗಳೂರಿನ ಮೆಟ್ರೋ ಜಾಲವು ವಿಸ್ತಾರವಾಗುತ್ತಿದ್ದಂತೆ, ಪ್ರಯಾಣಿಕರ ಅನುಕೂಲಕ್ಕೆ ಇಂತಹ ಕ್ರಮಗಳು ನಂಬಿಕೆ ಮತ್ತು ಯಶಸ್ಸಿನ ಪ್ರಮುಖ ಅಂಶವಾಗಿವೆ.
ಮೆಟ್ರೋ ವ್ಯವಸ್ಥೆಯ ಯಶಸ್ಸಿಗೆ ಸುಗಮ, ಸ್ವಚ್ಛ ಮತ್ತು ಉಚಿತ ಶೌಚಾಲಯಗಳ ಲಭ್ಯತೆ ಅತ್ಯಂತ ಮುಖ್ಯ. ವಿಶೇಷವಾಗಿ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡರೆ, ಇಂತಹ ಮೂಲಸೌಕರ್ಯಗಳ ಸದುಪಯೋಗದಿಂದ ಜನರಿಗೆ ಹೆಚ್ಚು ಅನುಕೂಲವಿರುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿಯ ಜನಪ್ರಿಯ ಮತ್ತು ಪ್ರಯೋಜನಕಾರಿ ನಿರ್ಧಾರಗಳು ಮತ್ತಷ್ಟು ಬೆಂಗಳೂರು ಮೆಟ್ರೋ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವುದರಲ್ಲಿ ಸಹಾಯಕವಾಗಿವೆ.
More From GoodReturns

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications