BoAt: ಕೆನಡಾ ಮೂಲದ ಗಾಯಕನ ಪ್ರಾಯೋಜಕತ್ವವನ್ನು ಹಿಂಪಡೆದ ಬೋಟ್

ಮಂಗಳವಾರ (ಸೆಪ್ಟೆಂಬರ್ 19), ಕೆನಡಾ ಮೂಲದ ಗಾಯಕ ಮತ್ತು ಖಲಿಸ್ತಾನ್ ಬೆಂಬಲಿಗ ಶುಭ್ನೀತ್ ಸಿಂಗ್ ಅಲಿಯಾಸ್ ಶುಭ್‌ರ ಮುಂಬರುವ ಪ್ರವಾಸದಿಂದ ತನ್ನ ಪ್ರಾಯೋಜಕತ್ವವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ ಬ್ರ್ಯಾಂಡ್ ಬೋಡ್ ಘೋಷಿಸಿದೆ. ಈ ಪ್ರದರ್ಶನವು ಮುಂಬೈನ ಕಾರ್ಡೆಲಿಯಾ ಕ್ರೂಸಸ್‌ನಲ್ಲಿ ಸೆಪ್ಟೆಂಬರ್ 23 ರಿಂದ 25 ರವರೆಗೆ ನಡೆಯಲಿದೆ.

ಬೋಟ್ ಎಕ್ಸ್‌ (ಈ ಹಿಂದಿನ ಟ್ವಿಟ್ಟರ್) ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವರ್ಷದ ಆರಂಭದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ ಬೆಂಬಲವನ್ನು ನೀಡುವ ವಿಕೃತ ಭಾರತದ ನಕ್ಷೆಯನ್ನು ಹಂಚಿಕೊಂಡಿದ್ದ ಶುಭ್ ವಿವಾದವನ್ನು ಹುಟ್ಟುಹಾಕಿದ್ದದರು. ಇದನ್ನು ಉಲ್ಲೇಖಿಸಿ ಕಂಪನಿಯು ಕೆನಡಾದ ಗಾಯಕನೊಂದಿಗಿನ ತನ್ನ ಪ್ರಾಯೋಜಕತ್ವವನ್ನು ವಾಪಾಸ್ ಪಡೆದುಕೊಂಡಿದೆ.

 ಕೆನಡಾ ಮೂಲದ ಗಾಯಕನ ಪ್ರಾಯೋಜಕತ್ವವನ್ನು ಹಿಂಪಡೆದ ಬೋಟ್

"ಬೋಟ್‌ನಲ್ಲಿ ನಂಬಲಾಗದ ಸಂಗೀತ ಸಮುದಾಯಕ್ಕೆ ನಮ್ಮ ಬದ್ಧತೆಯು ಆಳವಾಗಿದೆ. ನಾವು ಮೊದಲ ಮತ್ತು ಅಗ್ರಗಣ್ಯವಾಗಿ ನಿಜವಾದ ಭಾರತೀಯ ಬ್ರ್ಯಾಂಡ್ ಆಗಿದ್ದೇವೆ. ಈ ವರ್ಷದ ಆರಂಭದಲ್ಲಿ ಕಲಾವಿದ ಶುಭ್ ಮಾಡಿದ ಟೀಕೆಗಳ ಬಗ್ಗೆ ನಮಗೆ ಅರಿವಾದಾಗ, ಪ್ರವಾಸದಿಂದ ನಮ್ಮ ಪ್ರಾಯೋಜಕತ್ವವನ್ನು ಹಿಂತೆಗೆದುಕೊಳ್ಳಲು ನಾವು ನಿರ್ಧರಿಸಿದ್ದೇವೆ," ಎಂದು ಕಂಪನಿಯು ಹೇಳಿದೆ.

ಕಂಪನಿಯು ಕಲಾವಿದರನ್ನು ಬೆಂಬಲಿಸುವುದನ್ನು ಮುಂದುವರಿಸಿದೆ. ಭಾರತದಲ್ಲಿ ರೋಮಾಂಚಕ ಸಂಗೀತ ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದು ಹೇಳಿದೆ. ಇದಕ್ಕೂ ಮೊದಲು, ಸೆಪ್ಟೆಂಬರ್ 16 ರಂದು, ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಸದಸ್ಯರು ಶುಭ್ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಹರಿದುಹಾಕಿದ್ದರು. ಬಿಜೆಪಿಯ ಯುವ ಘಟಕ ಬಿಜೆವೈಎಂ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಸಂಘಟಕರಿಗೆ ಕರೆ ನೀಡಿದೆ. ಭಾರತದಲ್ಲಿ ಯಾವುದೇ ಖಲಿಸ್ತಾನ್ ಬೆಂಬಲಿಗರಿಗೆ ಜಾಗವಿಲ್ಲ ಬಿಜೆವೈಎಂ ಪ್ರತಿಪಾದಿಸಿದೆ.

ಅವರ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಮತ್ತು ಬಹಿಷ್ಕರಿಸುವಂತೆ ಅಭಿಮಾನಿಗಳು ಮತ್ತು ಸಂಘಟಕರಿಗೆ ಮನವಿ ಮಾಡುವುದರ ಜೊತೆಗೆ, ಬಿಜೆವೈಎಂ ಅಧ್ಯಕ್ಷ ತಜೀಂದರ್ ಸಿಂಗ್ ತಿವಾನಾ ಕೂಡ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಶುಭ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ನಕ್ಷೆಯನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ತೆಗೆದುಹಾಕುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ತಿಳಿಸಲಾಗಿದೆ. ಮುಂದಿನ ಐದು ದಿನಗಳಲ್ಲಿ ಭಾರತವನ್ನು ತೊರೆಯುವಂತೆ ಸಂಬಂಧಪಟ್ಟ ರಾಜತಾಂತ್ರಿಕರಿಗೆ ತಿಳಿಸಲಾಗಿದೆ.

ಕೆನಡಾ ಒಬ್ಬ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದ ಬಳಿಕ ಮತ್ತು ಖಲಿಸ್ತಾನಿ ನಾಯಕನ ಮಾರಣಾಂತಿಕ ಗುಂಡಿನ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ ನಂತರ ಭಾರತ ಸರ್ಕಾರವು ಈ ನಿರ್ಧಾರವನ್ನು ಮಾಡಿದೆ. ಖಲಿಸ್ತಾನ್ ಆಂದೋಲನವು ಪ್ರತ್ಯೇಕತಾವಾದಿ ಚಳುವಳಿಯಾಗಿದ್ದು, ಖಲಿಸ್ತಾನ್ ಎಂಬ ಜನಾಂಗೀಯ-ಧಾರ್ಮಿಕ ಸಾರ್ವಭೌಮ ರಾಜ್ಯವನ್ನು ಸ್ಥಾಪಿಸುವ ಮೂಲಕ ಸಿಖ್ಖರಿಗೆ ಪ್ರತ್ಯೇಕ ದೇಶವನ್ನು ರಚಿಸುವ ಪ್ರಯತ್ನವನ್ನು ಈ ಆಂದೋಲನದ ಮೂಲಕ ಮಾಡಲಾಗುತ್ತದೆ. ಈ ಚಳುವಳಿ ಕೆನಡಾದಲ್ಲಿ ಬಹಳ ಪ್ರಬಲವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+