ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ದೇಶದ ಬಜೆಟ್ ಹಂಚಿಕೆಯ ಮೇಲೆ ಎಲ್ಲರೂ ಗಮನಹರಿಸಿದ್ದಾರೆ. ಈಗಾಗಲೇ ಬಜೆಟ್ ಮಂಡನೆಗೆ ಸಕಲ ಸಿದ್ಧತೆಗಳು ಕೂಡ ಆರಂಭವಾಗಿದೆ. ಬಜೆಟ್ ಮಂಡಿಸಲು ದಿನ, ದಿನಾಂಕ, ಸಮಯ ಹೀಗೆ ಹಲವು ತಯಾರಿಗಳನ್ನ ಸರ್ಕಾರ ಈಗಾಗಲೆ ಮಾಡಿಕೊಂಡಿದೆ. ಇನ್ನು ಸತತ ಎಂಟನೇ ಬಾರಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಆದ್ರೆ ಇವರಿಗಿಂತ ಮೊದಲು ಅಂದರೆ ಮೊದಲ ಬಾರಿ ಬಜೆಟ್ ಮಂಡಿಸಿದ ಮಹಿಳಾ ಹಣಕಾಸು ಸಚಿವೆ ಯಾರು ಗೊತ್ತಾ? ಈ ಬಗ್ಗೆ ಇಲ್ಲಿ ನೋಡೋಣ.
ಕಳೆದ ಬಾರಿಯಂತೆ ಈ ಬಾರಿ ಕೂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಬಜೆಟ್ ಮಂಡಿಸಲಿದ್ದಾರೆ. ಇನ್ನು ದೇಶದಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದ ಮಹಿಳೆಯನ್ನ ನೋಡುವುದಾದ್ರೆ, ಆ ಹೆಗ್ಗಳಿಗೆ ಶ್ರೀಮತಿ ಇಂದಿರಾಗಾಂಧಿಯವರಿಗೆ ಸೇರುತ್ತದೆ. ಭಾರತದ ರಾಜಕೀಯದಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿ ಇಂದಿರಾಗಾಂಧಿಯವರು ಇತಿಹಾಸವನ್ನ ನಿರ್ಮಿಸಿದ್ದಾರೆ.

ಭಾರತದ ಮೊದಲ ಮಹಿಳಾ ಹಣಕಾಸು ಸಚಿವೆಯಾಗಿ ಇಂದಿರಾಗಾಂಧಿ
ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಹಣಕಾಸು ಸಚಿವೆಯು ಆಗಿ ಕಾರ್ಯನಿರ್ವಹಿಸಬೇಕಾಯಿತು. 1969 ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಉಪಪ್ರಧಾನಿಯಾಗಿ ಮೊರಾರ್ಜಿ ದೇಸಾಯಿಯವರು ಆಯ್ಕೆಯಾಗಿದ್ದರು. ಆದ್ರೆ ಕಾಂಗ್ರೆಸ್ ಪಕ್ಷದಲ್ಲಾದ ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಮೊರಾರ್ಜಿ ದೇಸಾಯಿ ಅವರನ್ನ ಉಪಪದರಧಾನಿ ಸ್ಥಾನದಿಂದ ಕೆಳಗಿಳಿಸಬೇಕಾಯಿತು. ಆ ಸಮಯದಲ್ಲಿ ಹಣಕಾಸು ಸಚಿವರ ಸ್ಥಾನ ಕಾಲಿ ಇತ್ತು. ಏಕೆಂದರೆ ಮೊರಾರ್ಜಿ ದೇಸಾಯಿಯವರೇ ಹಣಕಾಸು ಸಚಿವಾಯಲದ ಕಾರ್ಯಗಳನ್ನ ನಿರ್ವಹಿಸುತ್ತಿದ್ದರು. ಆದ್ರೆ ಅವರನ್ನ ಕೆಳಗಿಳಿಸಿದ ನಂತರ ಆ ಸ್ಥಾನ ಕಾಲಿಯಾಗಿತ್ತು.
ಇದಾದ ನಂತರ ಮೂರು ತಿಂಗಳ ನಂತರ ಬಜೆಟ್ ಮಂಡಿಸಲು ಆಸ್ತಾನಕ್ಕೆ ಒಬ್ಬರು ಬೇಕಾಗಿಯೇ ಇತ್ತು. ಆ ವೇಳೆ ಸ್ರೀಮತಿ ಇಂದಿರಾಗಾಂಧಿಯವರು ಪ್ರಧಾನಿಯಾಗಿರುವ ಜೊತೆಗೆ ಹಣಕಾಸು ಸಚಿವೆ ಕೂಡ ಆದ್ರೂ. ಎಲ್ಲಾ ಹಣಕಾಸು ಉಸ್ತುವಾರಿಗಳನ್ನ ಇಮದಿರಾಗಾಂಧಿಯವರೇ ನಿಭಾಯಿಸಿದರು. ನಂತರ ಫೆಬ್ರವರಿ 28, 1970 ರಂದು, ದೇಶದ ಬಜೆಟ್ ಅನ್ನು ಮಂಡಿಸುವುದರ ಜೊತೆಗೆ ದೇಶದಲ್ಲಿ ಇತಿಹಾಸವನ್ನ ನಿರ್ಮಿಸಿದರು. ಅಲ್ಲದೆ ಬಜೆಟ್ ಮಂಡಿಸಿದ ಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ಗೌರವವನ್ನ ಇವರು ಪಡೆದುಕೊಂಡರು. ಈ ಹಿಂದೆ ಸಂಸತ್ತಿನಲ್ಲಿ ಓರ್ವ ಮಹಿಳೆ ಬಜೆಟ್ ಮಂಡಿಸಿರಲಿಲ್ಲ. ಮೊದಲ ಬಾರಿ ಬಜೆಟ್ ಮಂಡಿಸಿ ಇವರು ಮೊದಲಿಗರಾದರು.
ಹಣಕಾಸು ಮಂತ್ರಿಯಾಗಿ, ಅವರು ಭಾರತದ ಆರ್ಥಿಕ ನೀತಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ವಿಶೇಷವಾಗಿ ಭಾರತ ಆರ್ಥಿಕ ಸವಾಲನ್ನು ಎದುರಿಸುತ್ತಿರುವ ಸಮಯದಲ್ಲಿ ಅವರು ಭಾರತದ ರಾಜಕೀಯ ಮತ್ತು ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರ ಅಧಿಕಾರಾವಧಿಯು ಭಾರತದಲ್ಲಿನ ಪ್ರಮುಖ ಬ್ಯಾಂಕ್ಗಳನ್ನು ರಾಷ್ಟ್ರೀಕರಣಗೊಳಿಸುವಂತಹ ಪ್ರಮುಖ ಕ್ಷಣಗಳನ್ನು ಗುರುತಿಸಿತು. ಇದು ಸಾಮಾಜಿಕ ಕಲ್ಯಾಣವನ್ನು ಉತ್ತೇಜಿಸಲು ಮತ್ತು ಅಸಮಾನತೆಗಳನ್ನು ಕಡಿಮೆ ಮಾಡಲು ಅವರ ಸರ್ಕಾರದ ವಿಧಾನದ ಭಾಗವಾಗಿತ್ತು.
ಪ್ರಧಾನ ಮಂತ್ರಿ ಮತ್ತು ಹಣಕಾಸು ಮಂತ್ರಿಯಾಗಿ ಇಂದಿರಾ ಗಾಂಧಿಯವರ ನಾಯಕತ್ವವು ಭಾರತದ ರಾಜಕೀಯದ ಮೇಲೆ ಶಾಶ್ವತವಾದ ಪ್ರಭಾವವನ್ನು ಹೊಂದಿದೆ. ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಇಂದಿಗೂ ಉಳಿದಿದ್ದಾರೆ.
ಹಣಕಾಸು ಸಚಿವೆಯಾಗಿ ನಿರ್ಮಲ ಸೀತಾರಾಮನ್
ಇಂದಿರಾಗಾಂಧಿ ನಂತರ ನಿರ್ಮಲಾ ಸೀತಾರಾಮನ್ ಅವರು ಭಾರತದಲ್ಲಿ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾಗಿ ಕಾರ್ಯವನ್ನ ನಿರ್ವಹಿಸುತ್ತಿದ್ದಾರೆ. 1970 ರಲ್ಲಿ ಸಂಕ್ಷಿಪ್ತವಾಗಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಇಂದಿರಾ ಗಾಂಧಿಯವರ ನಂತರ ಹಣಕಾಸು ಸಚಿವ ಸ್ಥಾನವನ್ನು ಅಲಂಕರಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರ ನೇಮಕಾತಿಯು ಭಾರತೀಯ ರಾಜಕೀಯ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿದೆ.
ಜುಲೈ 2019 ರಲ್ಲಿ , ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೊದಲ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಇದು ಭಾರತದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಸುಲಭವಾಗಿ ವ್ಯಾಪಾರವನ್ನು ಸುಧಾರಿಸಲು ಸಾಧ್ಯವಾಯಿತು. ಅವರ ಬಜೆಟ್ ಸಣ್ಣ ವ್ಯವಹಾರಗಳನ್ನು ಬೆಂಬಲಿಸಲು ಹಲವಾರು ಕ್ರಮಗಳನ್ನು ಪರಿಚಯಿಸಿತು.
ನಿರ್ಮಲಾ ಸೀತಾರಾಮನ್ ಅಧಿಕಾರದ ವೇಳೆಯೇ ಮಹಿಳಾ ಸಬಲೀಕರಣ , ಕೈಗೆಟುಕುವ ವಸತಿ ಮತ್ತು ಡಿಜಿಟಲ್ ಆರ್ಥಿಕತೆಗೆ ಒತ್ತು ನೀಡಿದರು . ಬಜೆಟ್ನಲ್ಲಿ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿಯನ್ನು ಪ್ರಸ್ತಾಪಿಸಲಾಗಿದೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
COVID-19 ಸಾಂಕ್ರಾಮಿಕ ಸಮಯದಲ್ಲಿ , ಬಿಕ್ಕಟ್ಟಿನ ಆರ್ಥಿಕ ಪರಿಣಾಮವನ್ನು ತಗ್ಗಿಸಲು ಹಲವಾರು ಆರ್ಥಿಕ ಪರಿಹಾರ ಪ್ಯಾಕೇಜ್ಗಳನ್ನು ಘೋಷಿಸುವಲ್ಲಿ ನಿರ್ಮಲಾ ಸೀತಾರಾಮನ್ ನಿರ್ಣಾಯಕ ಪಾತ್ರ ವಹಿಸಿದರು .
ಸೀತಾರಾಮನ್ ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯನ್ನು ಸರಳಗೊಳಿಸುವ ಮತ್ತು ಪರಿಷ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ , ಇದು ಹೆಚ್ಚು ವ್ಯಾಪಾರ-ಸ್ನೇಹಿಯಾಗುವಂತೆ ಮಾಡಿದೆ. ಅನೇಕ ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವುದು, ಅನುಸರಣೆ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ತೆರಿಗೆದಾರರ ಸೇವೆಗಳನ್ನು ಸುಧಾರಿಸುವುದು ಸೇರಿದಂತೆ GST ರಚನೆಯಲ್ಲಿ ಬದಲಾವಣೆಗಳನ್ನು ಅವರು ಘೋಷಿಸಿದರು .
ಭಾರತದ ಹಣಕಾಸಿನ ನೀತಿಗಳು, ಹಣಕಾಸು ವಲಯದ ಸುಧಾರಣೆಗಳು ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಯ ಮೇಲೆ ಅವರ ಕೆಲಸ ಮಹತ್ವದ ಪ್ರಭಾವವನ್ನು ಬೀರಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications